ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ

ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ

ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ ಇಲ್ಲಿದೆ

ವಿಜಯನಗರ ಸಾಮ್ರಾಜ್ಯ (೧೩೩೬ ೧೬೪೬) ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದಾಗಿದೆ.ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಹರಿಹರ ಮತ್ತು ಬುಕ್ಕರಾಯ.
ವಿಜಯನಗರ ಸಾಮ್ರಾಜ್ಯೋ ತುಂಗಭದ್ರ ನದಿಯ ತೀರದಲ್ಲಿ ಹರಡಿದೆ .ಈ ಸಾಮ್ರಾಜ್ಯವು ಕೇವಲ ರಾಜಕೀಯ ಬಲದಿಂದ ಮಾತ್ರವಲ್ಲ ತನ್ನ ವಿಶಿಷ್ಟ ಕಲೆ ಮತ್ತು ವಾಸ್ತುಶಿಲ್ಪದಿಂದಲೂ ಪ್ರಸಿದ್ಧಿಯಾಗಿದೆ.ವಿಜಯನಗರ ಅಂದರೆ ಇಂದಿನ ಹಂಪಿ ಯು ಜಗತ್ತಿಗೆ ಗಮನ ಸೆಳೆಯುತ್ತಿದೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ.
ವಿಜಯನಗರದ ಪ್ರತಿಯೊಂದು ಕಲ್ಲು ದೇವಸ್ಥಾನ ಮತ್ತು ಅರಮನೆಗಳು, ವಿಜಯನಗರದ ಶೌರ್ಯ ಮತ್ತು ಸಂಸ್ಕೃತಿ ಇನ್ನು ಬದುಕು ಉಳಿದಿದೆ ಎಂದು ತೋರಿಸಿಕೊಡುತ್ತದೆ.

ವಿಜಯನಗರ ಸಾಮ್ರಾಜ್ಯ
ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ

ವಿಜಯನಗರ ಸಾಮ್ರಾಜ್ಯದಕಲೆ

ವಿಜಯನಗರ ಸಾಮ್ರಾಜ್ಯ ದ್ರಾವಿಡ ಶೈಲಿಯಲ್ಲಿದೆ. ಧಾರ್ಮಿಕ ಭಕ್ತಿ ಶೌರ್ಯ ಮತ್ತು ವೈಭವವನ್ನು ಪ್ರತಿಬಿಂಬುಸುತ್ತದೆ. ದೇವಲಾಯಗಳ ಗೋಡೆಗಳು ಸ್ತಂಭಗಳು ಮಂಟಪಗಳು ಆನೆ ಕುದುರೆ ಸೈನಿಕರು ನೃತ್ಯ ಗಾರ್ತಿಗಯರು ಮತ್ತು ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ದೇವಾಲಯಗಳ ಒಳಗೆ ಬಿತ್ತಿ ಚಿತ್ರಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಪುರಾಣಗಳ ದೃಶ್ಯಗಳನ್ನು ಬಣ್ಣಗಳಿಂದ ಬಿಡಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆ

ಸಾಮ್ರಾಜ್ಯ ಅರಸರುಗಳ ಕಾಲದಲ್ಲಿ ಶಿಲ್ಪ ಕಲೆಯು ಬಹಳ ಪ್ರಗತಿಯನ್ನು ಕಂಡಿ ಬಂದಿದೆ ಹಂಪಿಯ ದೇವಾಲಯಗಳಲ್ಲಿ ಶಿವಾ, ವಿಷ್ಣು ಸೂರ್ಯ, ಕೃಷ್ಣ, ನಟರಾಜ, ಯೋಗ ಲಕ್ಷ್ಮಿ ನರಸಿಂಹ ಮತ್ತು ಮಾದನಿಕ ವಿಗ್ರಹಗಳು ವಿಜಯನಗರದ ಕಲೆಯನ್ನು ಎತ್ತಿ ತೋರಿಸುತ್ತದೆ.

ಯೋಗಲಕ್ಷ್ಮಿ ನರಸಿಂಹ 6.7 ಮೀಟರ್ ಗಳಷ್ಟು ಎತ್ತರವಿರುವ ಬೃಹತ್ ಶಿಲ್ಪ. ಇದನ್ನು ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಉಗ್ರನರಸಿಂಹ ಎಂದು ಕರೆಯುತ್ತಾರೆ. ನರಸಿಂಹನು ಯೋಗಾಸನದಲ್ಲಿ ಕುಳಿತಿರುವ ಹಾಗೆ ತೋರಿಸಲಾಗಿದೆ. ಲೇಪಾಕ್ಷಿಯ ಏಕಶಿಲೆಯ ನಂದಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಂದಿಯಾಗಿದೆ. ಇದು 30 ಅಡಿ ಉದ್ದ ಮತ್ತು 20 ಅಡಿ ಎತ್ತರವಿದೆ. ಲೇಪಾಕ್ಷಿಯಲ್ಲಿರುವ ನಾಗಲಿಂಗ 7 ಎಡೆಗಳನ್ನು ಎತ್ತಿ ಮಲಗಿರುವ ಸರ್ಪದ ಮೇಲೆ ಲಿಂಗವನ್ನು ಸ್ಥಾಪಿಸಲಾಗಿದೆ. ಇದೆಲ್ಲವೂ ಶಿಲ್ಪಕಲೆಗೆ ಉದಾಹರಣೆಯಾಗಿದೆ.

ವಿಜಯನಗರ ಸಾಮ್ರಾಜ್ಯ ದ ಚಿತ್ರಕಲೆ

ವಿಜಯನಗರ ಅರಸರುಗಳ ಕಾಲದಲ್ಲಿ ಚಿತ್ರಕಲೆ ಸಾಕಷ್ಟು ಉನ್ನತಿಯನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿತ್ರಕಲೆ ಬಿತ್ತಿ ಚಿತ್ರಗಳಲ್ಲಿ ಮಾತ್ರವಲ್ಲದೆ ಜನ ಜೀವನದಲ್ಲಿ ಜನಪ್ರಿಯ ಕಲೆಯಾಗಿ ಬೆಳೆದಿತ್ತು , ರಾಜನ ಅಂತಪುರದಲ್ಲಿ ದೇಶ ವಿದೇಶಗಳ ಜನರ ಜೀವನವನ್ನು ವಿವರಿಸುವ ಚಿತ್ರಗಳನ್ನು ಕಾಣಬಹುದು.

ವಿಜಯನಗರದ ಅರಸರುಗಳು ಉನ್ನತ ದರ್ಜೆಯ ಕಲಾವಿದರನ್ನು ತಮ್ಮ ಬಳಿ ಇಟ್ಟುಕೊಂಡು ಚಿತ್ರಕಲೆ ಉನ್ನತಿಗಾಗಿ ಶ್ರಮಿಸಿದರು. ಇವರ ಪ್ರೋತ್ಸಾಹದ ಫಲವಾಗಿ ಹಂಪಿಯಲ್ಲಿರುವ ದೇವಸ್ಥಾನದ ರಂಗಮಂಟಪದ ಮೇಲ್ಚಾವಣಿಯಲ್ಲಿ ಕಲ್ಯಾಣ ಸುಂದ ಮತ್ತು ಪಾರ್ವತಿಯರ ವಿವಾಹದ ದೃಶ್ಯವನ್ನು ಕಾಣಬಹುದು.
ತಾಂಜ ಊರಿನಲ್ಲಿರುವ ರಾವಣ ಕೈಲಾಸವನ್ನು ಎತ್ತುತ್ತಿರುವ ದೃಶ್ಯ ಮತ್ತು ಬ್ರಹ್ಮ ಮಹೇಶ್ವರರಿಗೆ ಸಂಬಂಧಿಸಿದ ಚಿತ್ರಗಳನ್ನು ಸಹ ನಾವು ಕಾಣಬಹುದು.

ವಿಜಯನಗರ ಸಾಮ್ರಾಜ್ಯ ದ ವಾಸ್ತುಶಿಲ್ಪ

ವಿಜಯನಗರ ವಾಸ್ತುಶಿಲ್ಪ ದ್ರಾವಿಡಸಲ್ಲಿಯ ಶ್ರೇಷ್ಠ ರೂಪ ಆಗಿದೆ, ವಿಜಯನಗರ ವಾಸ್ತುಶಿಲ್ಪವನ್ನು 4 ಭಾಗಗಳಾಗಿ ನೋಡಬಹುದು.

  1. ದೇವಾಲಯ ವಾಸ್ತು ಶಿಲ್ಪ
  2. ಇಸ್ಲಾಮಿಕ್ ವಾಸ್ತು ಶಿಲ್ಪ
  3. ಪೌರವಾಸ್ತು ಶಿಲ್ಪ
  4. ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ

1) ದೇವಾಲಯ ವಾಸ್ತು ಶಿಲ್ಪ :

ವಿಜಯನಗರದಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ ವಿಜಯನಗರದ ಹೆಸರು ಬಹಳ ಪ್ರೇರಣೆ ಕೊಟ್ಟಿದ್ದರು. ಧಾರ್ಮಿಕ ಉತ್ಸವ ನಿತ್ಯ ಜರುಗುತ್ತಿದ್ದ ಉತ್ಸವ 15 ದಿನಗಳಿಗೆ ಒಮ್ಮೆ ನಡೆಯುತ್ತಿದ್ದ ಉತ್ಸವ ತಿಂಗಳಿಗೊಮ್ಮೆ ಆಡುತ್ತಿದ್ದೋತ್ಸವ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಉತ್ಸವಗಳಿಗೆ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದರು.ಪೂಜಾ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು.ದೇವಾಲಯಗಳ ನಿರ್ಮಾಣಕ್ಕಾಗಿ ಗ್ರಾನೆಟ್ ಮತ್ತು ಬೆಣಚು ಕಲ್ಲುಗಳನ್ನು ಬಳಸುತ್ತಿದ್ದರು.

ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ವಾಸ್ತುಶಿಲ್ಪದ ಮುಖ್ಯ ಅಂಗಗಳು:

  • 1 ಗರ್ಭಗೃಹ: ದೇವರು ಅಥವಾ ದೇವತೆಯನ್ನು ಪ್ರತಿಷ್ಠಾಪಿಸಿದ ಸ್ಥಳ
  • ಸುಕನಾಸಿ : ಗರ್ಭಗೃಹದ ಪಕ್ಕದ ಕೋಣೆ
  • ಅಂತರಾಳ : ಸುಖನಾಸಿ ಮತ್ತು ರಂಗಮಂಟಪದ ಮಧ್ಯ ಬರುವ ಭಾಗ
  • ರಂಗಮಂಟಪ : 4 ಅಥವಾ 16 ಕಂಬಗಳ ಹಜಾರ ಸಭೆಗಳನ್ನು ಮಾಡುವುದಕ್ಕೆ ಇದ್ದ ಜಾಗ
  • ಮಹಾ ರಂಗ ಮಂಟಪ ಹಾಗೂ ರಾಯ ಗೋಪುರಗಳು: ಮಹದ್ವಾರಗಳ ಮೇಲೆ ಕಟ್ಟಲ್ಪಡ್ತಿದ್ದ ಗೊಬ್ಬರಗಳು
ಪ್ರಮುಖ ದೇವಾಲಯಗಳು
  1. ವಿರೂಪಾಕ್ಷ ದೇವಾಲಯ
  2. ವಿಠಲ ಸ್ವಾಮಿ ದೇವಾಲಯ
  3. ಹಜಾರ ರಾಮಸ್ವಾಮಿ ದೇವಾಲಯ
1 ವಿರುಪಾಕ್ಷ ದೇವಾಲಯ :

ಈ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ. ಕೃಷ್ಣದೇವರಾಯ 1509 ರಲ್ಲಿ ದೇವಾಲಯದ ಮುಂದೆ ರಂಗ ಮಂಟಪವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ 2 ರಾಯ ಗೋಪುರಗಳನ್ನು ಕಾಣಬಹುದು, ಅದರಲ್ಲಿ ಒಂದು 165 ಅಡಿ ಎತ್ತರವಾಗಿದೆ. ದೇವಾಲಯದ ಒಳಾಂಗಣದಲ್ಲಿ ವಿರೂಪಾಕ್ಷನ ಗರ್ಭಗೃಹದ ಜೊತೆಗೆ ಭುವನೇಶ್ವರಿ, ಪಾತಾಳೇಶ್ವರಿ, ದುರ್ಗಿ ಮತ್ತು ಗಣಪತಿಯ ಗುಡಿಗಳು ಇದೆ.

ವಿಜಯನಗರ ಸಾಮ್ರಾಜ್ಯ
  • ವಿಜಯನಗರದ ದೇವಾಲಯಗಳು ಸಾಮಾನ್ಯವಾಗಿ ಶಿಲೆ (ಗ್ರಾನೈಟ್) ಅನ್ನು ಬಳಸಿ ಕಟ್ಟಲಾಗಿದೆ. ಗೋಪುರಗಳ ನಿರ್ಮಾಣಕ್ಕೆ ಇಟ್ಟಿಗೆ ಮತ್ತು ಗಾರೆಯನ್ನು ಬಳಸಲಾಗಿದೆ.
  • ದೇವಾಲಯಗಳಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ, ಕಲ್ಯಾಣ ಮಂಟಪ, ವಸಂತ ಮಂಟಪ ಕಾಣಬಹುದು.
  • ಕಂಬಗಳಿಂದ ಕೂಡಿದ ದೇವಾಲಗಳನ್ನು ಕಾಣಬಹುದು.
  • ದ್ರಾವಿಡ ಶೈಲಿಯಲ್ಲಿರುವ ಕಂಬಗಳು ಅತ್ಯಂತ ಮನಮೋಹಕವಾಗಿ ಕೆತ್ತಲಾಗಿದೆ.
  • ಕಂಬಗಳ ಮೇಲೆ ಮುಂದಿನ ಕಾಲು ಎತ್ತಿ ನಿಂತಿರುವ ಕುದುರೆ ಮತ್ತು ಹುಲಿ ಶಿಲ್ಪವನ್ನು ಕಾಣಬಹುದು.
  • ಕಂಬಗಳ ಬೋಧಿಗೆಯ ಮೇಲಿಂದ ಚಾಚಿರುವ ಲೋಕದಲ್ಲಿ ಅನೇಕ ಸುರಳಿಗಳನ್ನು ಕೆತ್ತಿ ಅಂತಿಮವಾಗಿ ಕೆಳಕ್ಕೆ ಬಗ್ಗಿರುವ ಕಮಲದ ಮೊಗ್ಗನ್ನು ಬಿಡಿಸಲಾಗಿದೆ.
2 ವಿಠಲ ದೇವಾಲಯ :
ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ
ವಿಠಲ ದೇವಾಲಯವು ವಿಷ್ಣು ಅವತಾರ ಎಂದು ಹೇಳಲಾಗುತ್ತದೆ. ವಿಠಲ ಸ್ವಾಮಿ ದೇವಾಲಯವನ್ನು ಪ್ರೌಢ ದೇವರಾಯನ ಕಾಲ ಅವಧಿಯಲ್ಲಿ ಆರಂಭಿಸಿದರು ಈ ಕಾರ್ಯವನ್ನು 1565 ರವರೆಗೆ ಮುಂದುವರಿಸಿದರು. ಸುಮಾರು 500 ಅಡಿ ಉದ್ದ 310 ಅಗಲವಾದ ವಿಸ್ತೃತ ಅಂಗಳದ ಮಧ್ಯೆ ಈ ದೇವಾಲಯವನ್ನು ಪೂರ್ವಕ್ಕೆ ನಿರ್ಮಿಸಲಾಗಿದೆ. ಈ ಅಂಗಳದ ಸುತ್ತಲೂ 3 ಸಾಲು ಕಂಬಗಳಿಂದ ಕೂಡಿದ ಮಂಟಪದ ಸಾಲುಗಳಿವೆ. ಈ ದೇವಾಲಯವನ್ನು ಪೂರ್ವ ಉತ್ತರ ಮತ್ತು ದಕ್ಷಿಣ ಪ್ರವೇಶ ದ್ವಾರಗಳಿಂದ ಪ್ರವೇಶಿಸಬಹುದು. ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ ಹಾಗೂ ಮಹಾಮಂಟಪಗಳನ್ನು ಒಳಗೊಂಡಿರುತ್ತದೆ.
3 ಹಜಾರ ರಾಮಸ್ವಾಮಿ ದೇವಾಲಯ :
hajara ramasamy temple
ಹಜಾರ ರಾಮಸ್ವಾಮಿ ದೇವಾಲಯವನ್ನು 15ನೇ ಶತಮಾನದಲ್ಲಿ ಕೃಷ್ಣದೇವರಾಯ ತನ್ನ ಪೂರ್ವದ ದಿಗ್ವಿಜಯಗಳ ಸವಿನೆನಪಿಯಾಗಿ ಪೂರ್ವಕ್ಕೆ ಮುಖ ಮಾಡಿ ಈ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ ಒಂದು ಸಾವಿರದಷ್ಟು ಶಿಲ್ಪಗಳನ್ನು ಕಾಣಬಹುದು, ಆ ಶಿಲ್ಪಗಳು ಸುಬ್ರಮಣ್ಯ, ಗಣೇಶ, ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಶಿಲ್ಪ ದೃಶ್ಯಗಳಾಗಿವೆ. ಈ ದೇವಾಲಯ ರಾಜ ಕುಟುಂಬದವರಿಗೆ ಮಾತ್ರ ಮೀಸಲಾಗಿತ್ತು.

2) ಇಸ್ಲಾಮಿಕ್ ವಾಸ್ತುಶಿಲ್ಪ :

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಲ್ಲಿ ಮುಸ್ಲಿಮರ ಬಡಾವಣೆಗಳು ಇದ್ದವು. ಇದರಲ್ಲಿ ಶ್ರೀಮಂತ ಮುಸ್ಲಿಮರು ಹಲವರು ಕಟ್ಟಡಗಳನ್ನು ನಿರ್ಮಿಸಿದರು. ಅವುಗಳೆಂದರೆ ಸಮಾಧಿಗಳು, ಗೋರಿಗಳು , ಮತ್ತು ಮಸೀದಿಗಳು, . ಈ ಕಟ್ಟಡಗಳು ಇಸ್ಲಾಮಿಕ್ ವಾಸ್ತು ಶೈಲಿಯ ಲಕ್ಷಣಗಳಾದ ಗುಮ್ಮಟಗಳು ಮತ್ತು ಕಮಾನುಗಳು ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.

3) ಪೌರವಾಸ್ತು ಶಿಲ್ಪ :

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಅರಮನೆಗಳು, ಮಹಾನವಮಿ ದಿಬ್ಬ ರಾಜನ ಸಭಾಭವನ ಕೊಳ ಕಮಲ ಮಹಲ್ ರಾಣಿ ಸ್ನಾನ ಗೃಹ ಆನೆಲಾಯ ಮೇಲ್ಚಾವಣಿ ಇರುವ ಬಾವಿ ಮುಂತಾದವು ಪೌರ ವಾಸ್ತುಶಿಲ್ಪದ ಅಡಿಯಲ್ಲಿ ಬರುತ್ತದೆ.

  1. ಅರಮನೆ : ಟಂಕಶಾಲೆಯ ಪ್ರದೇಶದಲ್ಲಿ ಒಂದು ಅರಮನೆ ಇದ್ದು ಆ ಅರಮನೆ ತುಂಬಾ ಮುಖ್ಯವಾದದ್ದು. ಉತ್ಸವಗಳನ್ನು ಮಾಡುವಾಗ ಈ ಅರಮನೆಗಳನ್ನು ಬಳಸುತ್ತಿದ್ದರು ಇಲ್ಲಿಗೆ ಜನರು, ಪ್ರವಾಸಿಗರು ಮತ್ತು ಅಧಿಕಾರಿಗಳು ಬರುತ್ತಿದ್ದರು. ವಿಜಯನಗರ ಕಾಲದಲ್ಲಿ ರಾಜರು ಅಧಿಕಾರಿಗಳು ಅರಮನೆಯಲ್ಲಿ ವಿವಿಧ ಕಾರ್ಯ ಆಚರಣೆಗಳನ್ನು ಕಾಲದಿಂದ ಕಾಲಕ್ಕೆ ನಡೆದ ಯುದ್ಧಗಳ ಕಾರಣ ಕೆಲವು ಅರಮನೆಗಳು ಹಾಳಾಗಿದೆ
  2. ಮಹಾನವಮಿ ದಿಬ್ಬ :
    O* 14ನೇ ಶತಮಾನದ ಮಧ್ಯ ಭಾಗದಲ್ಲಿ ರಚಿಸಲ್ಪಟ್ಟ ಮಹಾನ್ ನವಮಿ ಉತ್ಸವದ ಈ ದಿಬ್ಬ ಹಂಪಿಯಲ್ಲಿ ನಿರ್ಮಿಸಲಾಗಿದೆ.
    O* ಇದನ್ನು ಸಿಂಹಾಸನದ ವೇದಿಕೆಯನ್ನು ಸಹ ಕರೆಯುತ್ತಾರೆ.
    O* ಇದು ಸುಮಾರು 22 ಚದರ ಮೀಟರ್ ಪ್ರದೇಶದಲ್ಲಿ 10 ಮೀಟರ್ ಎತ್ತರವಿರುವ ಹಾಗೆ ಕಟ್ಟಲಾಗಿದೆ.
    O* ಮಹಾನವಮಿ ಹಬ್ಬವನ್ನು ನಿರ್ಮಿಸಲು ಗ್ರಾನೈಟ್ ಮತ್ತು ಕ್ಲೋರೈಟ್ ಕಲ್ಲುಗಳನ್ನು ಬಳಸಲಾಗಿದೆ.
    O* ಮಹಾನ್ ನವಮಿ ದಿಬ್ಬ ಹೊರಮೈ ಉಬ್ಬು ಕೆತ್ತನೆಗಳಿಂದ ಅಲಂಕೃತ ಗೊಂಡಿದೆ. ಅವುಗಳೆಂದರೆ ಆನೆಗಳು, ಒಂಟೆಗಳು, ಕುದುರೆಗಳು ಮತ್ತು ಯುದ್ಧದ ದೃಶ್ಯಗಳು‌ ಇತ್ಯಾದಿ.
  3. ಕಮಲ್ ಮಹಲ್ : ಕಮಲ್ ಮಹಲ್ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಅತ್ಯಂತ ಸುಂದರವಾದ ರಾಜಮನೆತನದ ಕಟ್ಟಡಗಳಲ್ಲಿ ಒಂದಾಗಿದೆ. ಈ ಕಟ್ಟಡದಲ್ಲಿ ತೆರೆದ ಕಮಾನುಗಳನ್ನು ಅಳವಡಿಸಲಾಗಿದೆ ಕಮಾನುಗಳನ್ನು ಬಳ್ಳಿಗಳು ಹೂವುಗಳು ಹಂಸಗಳಿಂದ ಅಲಂಕರಿಸಲಾಗಿದೆ ‌. ಕಮಲ ಮಹಲ್ 9 ಗೋಪುರಗಳನ್ನು ಒಳಗೊಂಡಿದೆ.
  4. ರಾಣಿಯ ಸ್ನಾನ ಗೃಹ : ಪ್ರಾಣಿಯ ಸ್ನಾನ ಗೃಹಗಳನ್ನು ಚೌಕಕಾರವಾಗಿ ನಿರ್ಮಿಸಲಾಗಿತ್ತು. ಇದರ ಸುತ್ತಮುತ್ತ ನಾಲೆಗಳು ಹರಿದು ಹೋಗುತ್ತಿತ್ತು. ಪೂರ್ವ ದಿಕ್ಕಿನಲ್ಲಿರುವ ಗುಂಡಿಗಳ ಸಹಾಯದಿಂದ ಸ್ನಾನ ಗೃಹಕ್ಕೆ ನೀರನ್ನು ಒದಗಿಸಿಕೊಡುತ್ತಿದ್ದರು. ಈ ಸ್ನಾನ ಗೃಹದ ಕಟ್ಟಡವು ವಿಭಿನ್ನ ವಾಸ್ತು ಶೈಲಿಗಳ ಮಿಶ್ರಣ ವಾಗಿದೆ
  5. ಆನೆಲಾಯ : ಇದು ಸರಿಸುಮಾರು 85 ಮೀಟರ್ ಉದ್ದವಿರುವ ಆಯತಾಕಾರದ ಕಟ್ಟಡವಾಗಿದೆ. ಈ ಕಟ್ಟಡವು ಪಶ್ಚಿಮಾಭಿಮುಖವಾಗಿ ಚೌಕಾಕಾರದ 11 ಕೊಠಡಿಗಳನ್ನು ಹೊಂದಿದೆ. ಪತಿ ಕೊಠಡಿಯು ಪ್ರವೇಶ ದ್ವಾರಗಳಲ್ಲಿ ಕಮಾನುಗಳನ್ನು ಕಾಣಬಹುದು.

4) ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ :

  • ವಿಜಯನಗರ ಅರಸರುಗಳು ತಮ್ಮ ರಾಜಧಾನಿ ಹಾಗೂ ಬೇರೆ ಬೇರೆ ಪ್ರದೇಶಗಳನ್ನು ಶತ್ರುಗಳಿಂದ ಕಾಪಡಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದರು.
  • ಈ ರೀತಿ ನಿರ್ಮಾಣ ಮಾಡಿದ ಕೋಟೆಗಳು ಮಿಲಿಟರಿ ಅಥವಾ ಸೇನಾ ವಾಸ್ತುಶಿಲ್ಪದಲ್ಲಿ ಪ್ರಮುಖವಾದವು ಯಾವೆಂದರೆ ವಿಜಯನಗರ ರಾಜಧಾನಿ ಹಂಪಿ ಏಳು ಕೋಟಿಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ.
  • ಕೋಟೆಗಳಲ್ಲಿ ಹಲವು ರೀತಿಯ ಬಾಗಿಲುಗಳು ಗಮನಿಸಬಹುದು ನೀವು ಕೋಟೆಗೆ ಪ್ರಧಾನವಾದ ಬಾಗಿಲನ್ನು ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
  • ಸಾಮಾನ್ಯ ದ್ವಾರಗಳನ್ನು ಬಾಗಿಲು ಎಂದು ಕರೆಯುತ್ತಿದ್ದರು. ಉದಾಹರಣೆ ಪೆನುಕೊಂಡೆ ಬಾಗಿಲು.

LATEST POSTS

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಆದಿಕವಿ ಪಂಪ

ಭಾರತದ 7 ಅದ್ಭುತಗಳು 2025

ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ.

ಹಂಪಿಯ ಮೊದಲನೆ ಹೆಸರು ಏನಿತ್ತು

ಹಂಪಿಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು

ಹಂಪಿಯ ಪ್ರಸಿದ್ಧ ದೇವಾಲಯ ಯಾವುದು

ವಿರೂಪಾಕ್ಷ ದೇವಸ್ಥಾನ

ತಾಳಿಕೋಟೆ ಯುದ್ಧ ಯಾವ ವರ್ಷ ನಡೆಯಿತು

ಕ್ರಿ.ಶ. 1565ರಲ್ಲಿ.

ವಿಜಯನಗರದ ಪ್ರಸಿದ್ಧ ದೇವಾಲಯಗಳ ಉದಾಹರಣೆಗಳು ಯಾವುವು

ಹಂಪಿಯ ವಿರೂಪಾಕ್ಷ ದೇವಾಲಯ, ವಿಠ್ಠಲಸ್ವಾಮಿ ದೇವಾಲಯ ಮತ್ತು ಹಜಾರರ ರಾಮಸ್ವಾಮಿ ದೇವಾಲಯ ಪ್ರಮುಖವು.

ಹಂಪಿಯಲ್ಲಿರುವ ಸಂಗೀತ ಸ್ತಂಭಗಳು ಯಾವ ದೇವಾಲಯದಲ್ಲಿ ಕಂಡುಬರುತ್ತವೆ

ವಿಠ್ಠಲಸ್ವಾಮಿ ದೇವಾಲಯದಲ್ಲಿ.

12.ಹಜಾರರ ರಾಮಸ್ವಾಮಿ ದೇವಾಲಯ ಎಲ್ಲಿದೆ

ಹಂಪಿಯಲ್ಲಿ.

ವಿರೂಪಾಕ್ಷ ದೇವಾಲಯ ಯಾವ ನಗರದಲ್ಲಿದೆ

ಹಂಪಿ.

ಹಂಪಿಯ ಸ್ಮಾರಕಗಳಿಗೆ ಯುನೆಸ್ಕೋ ನೀಡಿರುವ ಮಾನ್ಯತೆ ಏನು

ವಿಶ್ವ ಹೇರಿಟೇಜ್ ತಾಣ.

ವಿಜಯನಗರ ಶಿಲ್ಪಗಳಲ್ಲಿ ಮುಖ್ಯವಾಗಿ ಯಾವ ವಿಷಯಗಳನ್ನು ಕೆತ್ತಲಾಗಿದೆ

ಪೌರಾಣಿಕ ಕಥೆಗಳು, ನೃತ್ಯ–ಸಂಗೀತ ದೃಶ್ಯಗಳು.

ಹಂಪಿಯ ಪ್ರಸಿದ್ಧ ಉತ್ಸವ ಮಂಟಪದ ಹೆಸರು ಏನು

ಹಜಾರ ಮಂಟಪ.

ಹಂಪಿಯ ವಿಠ್ಠಲಸ್ವಾಮಿ ದೇವಾಲಯದಲ್ಲಿರುವ ರಥವನ್ನು ಏನೆಂದು ಕರೆಯುತ್ತಾರೆ

ಕಲ್ಲಿನ ರಥ.

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ 

ಸ್ಥಾಪನೆಯ ಬಗ್ಗೆ ವಿದ್ವಾಂಸರಲ್ಲಿ ಅನೇಕಅಭಿಪ್ರಾಯಗಳು ಇವೆ.


ವಿಜಯನಗರ ಸಾಮ್ರಾಜ್ಯ 

ಸಂಗಮನ ಐವರು ಮಕ್ಕಳದ ಹರಿಹರ, ಬುಕ್ಕ ,ಕಂಪಣ್ಣಾಯ,ಮಾರಪ್ಪ ಮತ್ತು ಮುದ್ದಪ್ಪ ಎಂಬುವರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರೆಂದು ಅಭಿಪ್ರಾಯ . ಆದರೆ ರಾಬರ್ಟ್ ಸೀವೆಲ್ ನ ಅಭಿಪ್ರಾಯ ಏನಿದೆ ಎಂದರೆ ಓರoಗಲ್ಲಿನ ಪ್ರತಾಪ ರುದ್ರದೇವನ ಆಸ್ಥಾನದಲ್ಲಿದ್ದ ಹರಿಹರ ಮತ್ತು ಬುಕ್ಕರಾಯ ಎಂಬ ಸಹೋದರರು ಮುಸ್ಲಿಮರ ದಾಳಿಯಿಂದ ವಾರಂಗಲ್ ನಾಶವಾದ ಮೇಲೆ ಆನೆಗೊಂದಿಯ ಕಪಿಲ ರಾಯನ ಆಸ್ಥಾನದಲ್ಲಿ ಉನ್ನತ ಅಧಿಕಾರವನ್ನು ಪಡೆದರು. ಮಧ್ಯ ದೆಹಲಿಯಿಂದ ಆನೆಗೊಂದಿಗೂ ಬಂದ ಮಹಮ್ಮದ್ ಬಿನ್ ತುಘಲಕ್ ಪ್ರತಿನಿಧಿ ತನ್ನ ಆಳ್ವಿಕೆಯಲ್ಲಿ ಯಶಸ್ಸು ಕಾಣದ ಕಾರಣವಾಗಿ ಹರಿಹರನನ್ನು ರಾಜನನ್ನಾಗಿ ಮತ್ತು ಬುಕ್ಕನನ್ನು ಮಂತ್ರಿ ಆಗಿ ಮಾಡಿ ಹಿಂದಿರುಗಿದನು. ಈ ಸಹೋದರರೇ ಮುಂದೆ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದರು
ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯದ ಇಬ್ಬರು ಸಹೋದರರ ಮೂಲದ ಎರಡು ಸಿದ್ಧಾಂತಗಳು

ಕನ್ನಡ ಮೂಲ :
ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.

ಶಾಸನಗಳು ದೊರಕಿರುವುದು :

  • ವಿಜಯನಗರ ಅರಸರುಗಳು ಹೊರಡಿಸಿರುವ ಶಾಸನಗಳಲ್ಲಿ ಸಿಕ್ಕಿರುವ 5000 ಶಾಸನಗಳಲ್ಲಿ ಅರ್ಧದಷ್ಟು ಕನ್ನಡದಲ್ಲಿ ಇವೆ ಎಂದು ತಿಳಿದುಬಂದಿದೆ. ತಮಿಳುನಾಡು ಆಂಧ್ರ ಪ್ರದೇಶದಲ್ಲಿ ದೊರಕಿರುವ ಶಾಸನಗಳು ಕೂಡ ಕನ್ನಡದಲ್ಲಿ ಇರುವುದು ಕಂಡುಬಂದಿದೆ
  • ಕರ್ನಾಟಕದ ಬೇಲೂರಿನ ಕೇಶವ ದೇವಸ್ಥಾನ ಮತ್ತು ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನ ಸಂಗಮ ಸಹೋದರರ ಆರಾಧ್ಯ ದೈವ ಆಗಿರುವುದು ಕೂಡ ಕನ್ನಡ ಮೂಲವನ್ನು ಎತ್ತಿ ಹಿಡಿಯುತ್ತದೆ
  • ಜಾoಬವತೀ ಕಲ್ಯಾಣ ಎಂಬ ಸಂಸ್ಕೃತ ನಾಟಕದಲ್ಲಿ ಶ್ರೀ ಕೃಷ್ಣದೇವರಾಯನನ್ನು ಕರ್ನಾಟಕ ರಾಜ್ಯ ರಮಾ ರಮಣ ಎಂದು ಕರೆಯಲಾಗಿದೆ
  • ಶ್ರೀ ವಿರುಪಾಕ್ಷ ಇವರ ರಾಜ ಮುದ್ರೆ ಮತ್ತು ವರಾಹ ಸಾಮ್ರಾಜ್ಯದ ರಾಜ ಲಾಂಛನವಾಗಿದೆ.
ತೆಲುಗು ಮೂಲ :
  • ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.
 ಹರಿಹರನ ಆಳ್ವಿಕೆ : ಸಂಗಮ ವಂಶದ ಮೊದಲ ದೊರೆ ಹರಿಹರ .ಇವನು ಕ್ರಿ.ಶ 1336 ರಿಂದ ಹಿಡಿದು ಎರಡು ದಶಕಗಳ ಕಾಲದವರೆಗೆ ರಾಜ್ಯವನ್ನು ಆಳುತ್ತಾನೆ. ತಂದೆ ಭಾವನ ಸಂಗಮ ತಾಯಿ ಮರವ್ವೆ ನಾಯಕಿ .ಕೆಲವು ಸಿದ್ಧಾಂತಗಳ ಪ್ರಕಾರ ಹಕ್ಕ ಮತ್ತು ಬುಕ್ಕ ವಾರಂಗಲ್ ನ ಕಾಕತೀಯ ರಾಜನ ಸೈನ್ಯದಲ್ಲಿ ಕಮಾಂಡರ್ಗಳಾಗಿದ್ದರು. ವಾರಂಗಲ್ ರಾಜನನ್ನು ಮಹಮ್ಮದ್ ಬಿನ್ ತುಘಲಕ್ ಯುದ್ಧದಲ್ಲಿ ಸೋಲಿಸಿ ಹಕ್ಕ ಮತ್ತು ಬುಕ್ಕನ್ನು ಸೆರೆಹಿಡಿದು ದೆಹಲಿಗೆ ಕಳುಹಿಸಲಾಯಿತು ಅಲ್ಲಿ ಇಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಆ ನಂತರ ಋಷಿ ವಿದ್ಯಾರಣ್ಯರ ಪ್ರಭಾವದಿಂದ ಹಿಂದೂ ಧರ್ಮಕ್ಕೆ ಮರಳಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
  • ವಿಜಯನಗರ ಸಾಮ್ರಾಜ್ಯವು ತುಂಗಭದ್ರ ನದಿಯ ತೀರದಲ್ಲಿ ಸ್ಥಾಪಿಸಲಾಗಿದೆ
  • ವಿಜಯನಗರದ ರಾಜಧಾನಿ ಕಿಷ್ಕಿಂದೆಯೇ ಅಂದರೆ ಈಗಿನ ಹಂಪಿ
  • ವಿದ್ಯಾರಣ್ಯ ಕ್ರಿಯಾಶಕ್ತಿ ಪಂಡಿತರು ಹರಿಹರನ ಗುರುಗಳಾಗಿದ್ದರು
  • ಹರಿಹರನು ಮೊದಲು ಹೊಯ್ಸಳರ ಮಾಂಡಲಿಕನಾಗಿದ್ದನು, ಆದ ನಂತರ ಸ್ವಾತಂತ್ರ್ಯ ರಾಜ್ಯವನ್ನು ಸ್ಥಾಪಿಸಿದನು
  • ಚಾಲುಕ್ಯರು ಆಳಿದ ಬಾದಾಮಿ, ಉದಯಗಿರಿ, ಮೊದಲಾದವುಗಳನ್ನು ಕೋಟೆಗಳಿಂದ ಸುರಕ್ಷಿತ ಗೊಳಿಸಿ ಅಲ್ಲಿ ಅವನ ನಂಬಿಕಸ್ತರನ್ನು ನೇಮಿಸಿದನು
  • ಹೊಯ್ಸಳರ ಮೂರನೇ ಬಲ್ಲಾಳ ಸತ್ತು ಹೋದ ಮೇಲೆ ಅವನು ಸಂಪೂರ್ಣ ರಾಜ್ಯದ ಮೇಲೆ ಹತೋಟಿಯನ್ನು ಸ್ಥಾಪಿಸಿದನು. ಈ ಮಹತ್ವ ಕಾರ್ಯದಲ್ಲಿ ಇವನ ಸಹೋದರರು ಇವನ ಬೆನ್ನೆಲುಬು ಆಗಿ ನಿಂತಿದ್ದರು.
  • ಇವನ ಕಾಲದಲ್ಲಿ ಅಲ್ಲಾ-ಉದ್- ಹಸನ್ ಬಹುಮನ್ ಷಾ ಎಂಬುವನು 1347ರಲ್ಲಿ ಗುಲ್ಬರ್ಗದಲ್ಲಿ ಬಹಮನಿ ರಾಜ್ಯವನ್ನು ಸ್ಥಾಪಿಸುತ್ತಾನೆ
  • ಈ ಎರಡು ರಾಜ್ಯಗಳ ನಡುವೆ ನಿರಂತರ ಕದನ ನಡೆಯುತ್ತಿದ್ದವು ತಾಳಿಕೋಟೆ ಕದನ ( 1565 ಜನವರಿ 23 )ವಿಜಯನಗರದ ಪತನಕ್ಕೆ ಕಾರಣವಾಯಿತು.
ವಿಜಯನಗರ ಸಾಮ್ರಾಜ್ಯ

ಪ್ರಾಕ್ತನ ಇಲಾಖೆಯ ಇತ್ತೀಚಿನ ಸಂಶೋಧನೆಗಳು:

1985ರಿಂದ ಹಂಪೆಯಲ್ಲಿ ಉತ್ಖನನ ಹಾಗೂ ಸಂಶೋಧನೆ ಹಿಂದಿಗಿಂತ ಸ್ವಲ್ಪ ಚುರುಕಾಗಿ ನಡೆಯಲಾರಂಭಿದೆ. ಭಾರತ ಸರ್ವೇಕ್ಷಣ ಇಲಾಖೆ ಮತ್ತು ಕರ್ನಾಟಕ ಪ್ರಾಚ್ಯವಸ್ತು ಇಲಾಖೆಗಳು ಒಟ್ಟಾಗಿ ನಡೆಸಿರುವ ಉತ್ಪನನದ ಫಲವಾಗಿ ಕುತೂಹಲ ಅಂಶಗಳು ಬೆಳಕಿಗೆ ಬರಲಾರಂಭಿಸಿದೆ.ಸಂಶೋಧನೆಯಿಂದ ಬೆಳಕಿಗೆ ಬಂದಿರುವ ವಿಜಯನಗರ ಕಾಲದ ವಾಸ್ತುಶಿಲ್ಪ ನಗರ ಯೋಜನೆ, ಕೋಟೆ ನಿರ್ಮಾಣ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಮೊದಲಾದ ಸೌಲಭ್ಯಗಳ ಬಗ್ಗೆ ಅಂದಿನ ನಗರ ವಾಸ್ತುಶಿಲ್ಪಿಗಳು ಯೋಚಿಸಿರುವ ರೀತಿ ಎಲ್ಲರಿಗೂ ಕುತೂಹಲ ಹುಟ್ಟಿಸುತ್ತವೆ. ಲಭ್ಯವಿರುವ ಈಗಿನ ಮಾಹಿತಿಯ ಪ್ರಕಾರ ಹಂಪಿ ನಗರದ ವಿಸ್ತೀರ್ಣ ಸುಮಾರು 26 ಚದರ ಮೈಲುಗಳೆಂದು ಅಂದಾಜು ಮಾಡಲಾಗಿದ್ದು. ರಾಜಾಂಗಣ ಪ್ರದೇಶವನ್ನು ಶೋಧಿ ಸಲಾಗಿದ್ದು ಅಲ್ಲಿ ಮಣ್ಣಿನಡಿಯಲ್ಲಿ ಅಡಗಿ ಇದ್ದ ಭವ್ಯ ಕಟ್ಟಡಗಳ ಅಡಿಪಾಯಗಳನ್ನು ನೆಲದವರೆಗೆ, ಶೋಧಿಸಿ ಅವುಗಳನ್ನು ಮೂಲ ಸ್ವರೂಪದಲ್ಲೇ ಜೋಡಿಸಲಾಗಿದೆ. ಅರಸರ ಅರಮನೆಯ ಅಡಿಪಾಯ ಹಾಗೂ ಅರಮನೆಗೆ ಹೊಂದಿಕೊಂಡಂತೆ ಇದ್ದ ಇತರ ಕಟ್ಟಡಗಳ ಅಡಿಪಾಯಗಳು, ಪೂಜೆ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಮಿಸಿದ್ದ ವಿಶೇಷವಾದ ಭವನದ ಅಡಿಪಾಯ, ಯಜ್ಞಕುಂಡ, ಸೇವಾ ಕಾರಗೃಹಗಳು ಮತ್ತು ಅಂಗರಕ್ಷಕ ಪಡೆಯವರ ನಿವಾಸಗಳ ಅಡಿಪಾಯಗಳನ್ನು ಶೋಧಿಸಲಾಗಿದೆ. ಯಜ್ಞಕುಂಡದಲ್ಲಿ ಬೂದಿ ಸಹ ದೊರಕಿದೆ.
ವಿದೇಶೀ ಪ್ರವಾಸಿಗರಾದ ಪಯಾಸ್, ನ್ಯೂನಿಜ್ ಮತ್ತು ಅಬ್ದುಲ್ ರಜಾಕ್ ಅವರ ದಾಖಲೆಗಳನ್ನು ಅಧಾರವಾಗಿಟ್ಟುಕೊಂಡು ಈ ಪ್ರದೇಶದಲ್ಲಿ ನಡೆಸಿದ ಉತ್ಪನನ ಸಂಶೋಧಕರಿಗೆ ಪ್ರೋತ್ಸಾಹದಾಯಕವಾಗಿದೆ. ರಾಜನ ಅರಮನೆಯಿಂದ ರಾಜಸಭಾಂಗಣಕ್ಕೆ ಹೋಗಲು ಇರುವ ಮೆಟ್ಟಿಲುಗಳು, ಇದರ ದಕ್ಷಿಣಕ್ಕಿರುವ ರಾಣಿ ನಿವಾಸ, ಪದ್ಮಸರೋವರ ಹಾಗೂ 40 40 ಅಡಿಗಳ ಕಲ್ಯಾಣಿಮೂಲಸ್ವರೂಪದಲ್ಲೇ ಇದೆ. ಸುಮಾರು 40 ಎಕರೆಗಳಷ್ಟು ವಿಸ್ತಾರದಲ್ಲಿರುವ ರಾಜಾಂಗಣದಲ್ಲಿ ನಾಣ್ಯಗಳು, ವಿಗ್ರಹಗಳು, ಮಡಕೆಗಳು, ಸುಣ್ಣ ಹಾಗೂ ಗಾರೆಯಿಂದ ನಿರ್ಮಿತವಾದ ಭಿತ್ತಿಫಲಕಗಳು ದೊರೆತಿವೆ. ಪಿಂಗಾಣಿ ಪಾತ್ರೆಗಳು ಚೀನಿ ಭಾಷೆಯ ಲಿಪಿಯನ್ನೊಳಗೊಂಡಿವೆ.
ರಾಜಧಾನಿ ಹಂಪೆಯ ಮುಖ್ಯ ಕೇಂದ್ರ ಅರಮನೆ. ಇದರ ರಕ್ಷಣೆಗೆ ಅವಶ್ಯವಿದ್ದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಕ್ಕೆ ಸಾಕ್ಷಾಧಾರ ದೊರೆತಿವೆ. ಅಂಗರಕ್ಷಕ ಪಡೆ ಅರಮನೆ ಸನಿಹದಲ್ಲೇ ಇದ್ದಿತು. ಇದಲ್ಲದೆ ಒಟ್ಟಾರೆ ರಾಜಧಾನಿಯ ರಕ್ಷಣೆಗಾಗಿ ಏಳು ಸುತ್ತಿನ ಕೋಟೆ ಇದ್ದು ನಾಶವಾಗಿರುವುದು ಬೆಳಕಿಗೆ ಬಂದಿದೆ.
ವಿಜಯನಗರ ಸಾಮ್ರಾಜ್ಯದ ವಿದೇಶೀ ದಾಖಲೆಗಳು ವಿಜಯನಗರದ ಹಿರಿಮೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹುದಾಗಿದೆ. ಆದರ ಹಿರಿಮೆಯನ್ನು ಕಣ್ಣಾರೆ ಕಂಡು ಬೆರಗಾದ ವಿದೇಶಿಯರ ಅನುಭವ ಬಣ್ಣಿಸಲಸಾಧ್ಯ. ಅವರು ವಿವಿಧ ದೇಶ ಹಾಗೂ ಭಾಷೆಗಳಿಗೆ ಸೇರಿದವರಾದರೂ ವಿಜಯನಗರದ ಹಿರಿಮೆ ಹಾಗೂ ಅದರ ಭವ್ಯತೆಯ ಬಗ್ಗೆ ಅವರೆಲ್ಲರದೂ ಒಂದೇ ಅಭಿಪ್ರಾಯ. ಚೀನಾದ ಅನಾಮಿಕ, ಇಟಲಿಯ ನಿಕೊಲೊಕಾಂಟಿ, ಪರ್ಶಿಯಾದ ಅಬ್ದುಲ್ ರಜಾಕ್, ರಷ್ಯಾದ ನಿಕಿಟನ್, ಪೋಚ್‌ಗಲ್‌ನ ಬಾರ್ಬೋಸ, ಡೊಮಿಂಗೋ ಫಯಾಸ್ ಮತ್ತು ನ್ಯುನಿಜ್ ಇವರೆಲ್ಲರ ಪ್ರವಾಸ ಕಥನಗಳು, ಅನಿಸಿಕೆಗಳು ವಿಜಯನಗರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿವೆ 

ಸಾಳುವ ಮತ್ತು ತುಳುವ ವಂಶಗಳು

         ಸಾಳುವ ವಂಶ

  •  ಸಾಳುವ ವಂಶವು ವಿಜಯನಗರ ಸಾಮ್ರಾಜ್ಯದ ದ್ವಿತೀಯ ರಾಜವಂಶವಾಗಿದೆ.
  •  ಸಾಳುವ ವಂಶವು ಸಂಗಮ ವಂಶದ ನಂತರ ಹುಟ್ಟಿಕೊಂಡಿತು ಕ್ರಿಸ್ತಶಕ 15ನೇ ಶತಮಾನದ ಕೊನೆಯ ಕಾಲದಲ್ಲಿ ಸಾಳುವ ವಂಶವು ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾಗಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು.
  • ಸಾಳುವ ವಂಶವನ್ನು ನರಸಿಂಹ ದೇವರಾಯನು ಕ್ರಿ.ಶ 1485 ರಲ್ಲಿ ಸ್ಥಾಪಿಸಿದನು ಸಂಗಮರ ಕಾಲದಲ್ಲಿ ಮುಸ್ಲಿಮರ ದಾಳಿಗಳಿಂದ ವಿಜಯನಗರ ಸಾಮ್ರಾಜ್ಯ ದುರ್ಬಲವಾಗಿದ್ದು ಆ ಸಮಯದಲ್ಲಿ ನರಸಿಂಹನು ತನ್ನ ಪ್ರತಿಭೆಯಿಂದ ತನ್ನ ಶಕ್ತಿಯಿಂದ ಶತ್ರುಗಳ ದಾಳಿಯನ್ನು ತಡೆದು ಸಾಮ್ರಾಜ್ಯವನ್ನು ರಕ್ಷಿಸಿದನು. 
  • ನರಸಿಂಹನು ಸಾಳುವ ವಂಶವನ್ನು ಕ್ರಿಸ್ತ ಶಕ 1485 ರಿಂದ 1491 ರವರೆಗೆ ಸಾಮ್ರಾಜ್ಯವನ್ನು ಆಳಿದನು.
  • ತಾಳುವ ಪದದ ಅರ್ಥ ಸಾಳುವ ಎಂಬುವುದು ಆ ಕಾಲದ ಕ್ಷತ್ರಿಯ ಕುಲದವರು ಎಂದು ಹೇಳುತ್ತಾರೆ.  

                        
ತುಳುವ ವಂಶ 

  • ತುಳುವ ವಂಶ ವಿಜಯನಗರ ಸಾಮ್ರಾಜ್ಯದ ಮೂರನೇ ರಾಜವಂಶವಾಗಿದ್ದು ಸಾಳುವ ವಂಶದ ನಂತರ ಅಧಿಕಾರಕ್ಕೆ ಬರುತ್ತದೆ
  • ಈ ವಂಶದ ಮೊದಲ ಅರಸ ವೀರ ನರಸಿಂಹ ಇವನ ನಂತರ ಕೃಷ್ಣದೇವರಾಯನು ಈ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರನಾಗಿದ್ದನು ಮತ್ತು ವಿಶಾಲಸಾಮ್ರಾಜ್ಯವನ್ನು ಸ್ಥಾಪಿಸಿದನು
  • ಕೃಷ್ಣದೇವರಾಯನು ಕಲೆ ವಾಸ್ತು ಶಿಲ್ಪ ಸಾಹಿತ್ಯಕ್ಷದಲ್ಲಿ ಬಹಳಷ್ಟು ಸುಧಾರಣೆ ಮತ್ತು ಸಾಧನೆಗಳನ್ನು ಮಾಡುತ್ತಾನೆ
  • ಕೃಷ್ಣದೇವರಾಯ ಸಮರ್ಥ ಆಡಳಿತಗಾರ ಅಪ್ರತಿಮ ವೀರ ಘನವಿದ್ವಾಂಸ ವಿಜಯನಗರ ಅರಸರಲ್ಲಿ ಶ್ರೇಷ್ಠ ಅರಸನಾಗಿದ್ದನು
  • ಸದಾಶಿವ ರಾಯನ ಕಾಲದಲ್ಲಿ ಆಡಳಿತದ ಮೇಲ್ವಿಚಾರಣೆ ಮಾಡುತ್ತಿರುವ ಸಮಯದಲ್ಲಿ ರಾಮರಾಯನ ವಿದೇಶಾಂಗ ನೀತಿಯ ಪರಿಣಾಮವಾಗಿ ರಕ್ಕಸ ತಂಗಡಿಯಲ್ಲಿ ಬಹುಮನಿ ಸೈನ್ಯದಿಂದ ಅತ್ಯಂತ ಹೀನಾಯವಾಗಿ ಸಾಮ್ರಾಜ್ಯದ ಅವನತಿಗೆ ಕಾರಣವಾಗುತ್ತಾನೆ

ಹಂಪಿ – ಕಾಲದ ಒಂದು ಶಾಂತ ಗುಂಡಿ ಬೆಂಗಳೂರಿನ ಗದ್ದಲದಿಂದ ಸುಮಾರು 350 ಕಿ.ಮೀ ದೂರದಲ್ಲಿ, ತುಂಗಭದ್ರಾ ನದಿಯ ದಡದ ಮೇಲೆ ನಿಂತಿರುವ ಹಂಪಿ ಒಂದು ಕನಸಿನಂತಹ ಜಾಗ. ಇಲ್ಲಿ ಬೃಹತ್ ಬಂಡೆಗಳು ಆಕಾಶಕ್ಕೆ ತಲೆ ಎತ್ತಿ ನಿಂತು, ಹಳೆಯ ವಿಜಯನಗರದ ರಾಜಧಾನಿಯ ಭಗ್ನಾವಶೇಷಗಳನ್ನು ಕಾಪಾಡಿಕೊಂಡಿವೆ. ಸೂರ್ಯನ ಕಿರಣಗಳು ಕಲ್ಲಿನ ಮೇಲೆ ಬಿದ್ದಾಗ ಚಿನ್ನದಂತೆ ಹೊಳೆಯುತ್ತವೆ, ಮಟಂಗ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದರೆ ಜಗತ್ತೇ ಮರೆತುಹೋಗುತ್ತದೆ. ಕೊರಾಕಲ್ ದೋಣಿಯಲ್ಲಿ ನದಿ ದಾಟಿ, ವಿಠ್ಠಲ ದೇವಸ್ಥಾನದ ಸಂಗೀತ ಸ್ತಂಭಗಳನ್ನು ತಟ್ಟಿದರೆ ಇನ್ನೂ ಆ ಯುಗದ ರಾಜ-ರಾಣಿಯರ ನಗು ಕೇಳಿಸುವಂತೆ ಭಾಸವಾಗುತ್ತದೆ. ಇಲ್ಲಿ ಇತಿಹಾಸವೇ ಬದುಕುತ್ತದೆ, ಪ್ರತಿ ಕಲ್ಲು ಒಂದು ಕಥೆ ಹೇಳುತ್ತದೆ – ನಡೆದಾಡುವಾಗ ಕಾಲ ನಿಂತುಹೋಗಿ, ಮನಸ್ಸು ಮಾತ್ರ ಹಳೆಯ ರಾಜಪಥಗಳಲ್ಲಿ ಓಡಾಡುತ್ತದೆ. ಫೆಬ್ರವರಿಯ ತಂಗಾಳಿಯಲ್ಲಿ ಹಂಪಿ ಹೋದರೆ, ಬಿಸಿಲು ಕಾಡದೆ, ಹೃದಯ ತುಂಬಿ ಬರುತ್ತದೆ da… ಇದು ಕೇವಲ ಪ್ರವಾಸವಲ್ಲ, ಒಂದು ಭಾವನೆಯ ಪ್ರಯಾಣ!

ವಿಜಯನಗರ ಸಾಮ್ರಾಜ್ಯದ ಸ್ಥಾಪಕರು

ಹರಿಹರ ಮತ್ತು ಬುಕ್ಕ

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ವರ್ಷ

1336

ವಿಜಯನಗರ ಸಾಮ್ರಾಜ್ಯದ ರಾಜಧಾನಿ

ಹಂಪಿ

ವಿಜಯನಗರದ ಪ್ರಸಿದ್ಧ ರಾಜ

ಕೃಷ್ಣದೇವರಾಯ

ಕೃಷ್ಣದೇವರಾಯ ಸೇರಿದ ವಂಶ

ತುಳು ವಂಶ

ವಿಜಯನಗರದ ಮೊದಲ ವಂಶ

ಸಂಗಮ ವಂಶ

ವಿಜಯನಗರದ ಕೊನೆಯ ವಂಶ

ಅರವೀಡು ವಂಶ

ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣವಾದ ಯುದ್ಧ

ತಾಳಿಕೋಟೆ ಯುದ್ಧ

ತಾಳಿಕೋಟೆ ಯುದ್ಧ ನಡೆದ ವರ್ಷ

1565

ಕೃಷ್ಣದೇವರಾಯರ ಕೃತಿ

ಅಮುಕ್ತಮಾಲ್ಯ

ವಿಜಯನಗರದ ಪ್ರಸಿದ್ಧ ದೇವಾಲಯ

ವಿರೂಪಾಕ್ಷ ದೇವಾಲಯ

………………………………………………………………….