ಚಿಕ್ಕಮಗಳೂರು ಪ್ರವಾಸ ಮಾಹಿತಿ – ಚಿಕ್ಕಮಗಳೂರು ಕರ್ನಾಟಕದಲ್ಲಿರುವ ಕಾಫಿನಾಡು ಆಗಿದೆ ಇದು ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಮತ್ತು ಅದ್ಭುತವಾದ ಪರ್ವತ ಸ್ಥಳವಾಗಿದೆ.
ಇಲ್ಲಿನ ದಟ್ಟ ಹೋದ ಹಸಿರು ಕಾಫಿ ತೋಟಗಳು ಮತ್ತು ಅದರ ಸುಗಂಧವಾದ ವಾಸನೆ ಮತ್ತು ಅಲ್ಲಿನ ಸುಂದರವಾದ ಪ್ರಕೃತಿಯ ಪ್ರವಾಸ ಮಾಡುವುದು ಬಹುಚಂದ.
ಚಿಕ್ಕಮಂಗಳೂರಿನಲ್ಲಿ ಮಂಜಿನಿಂದ ಕೂಡಿರುವ ಬೆಟ್ಟಗಳು ಮತ್ತು ಅಲ್ಲಿನ ರೋಮಾಂಚಕವಾಗಿರುವ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ.
Table of Contents
ಪ್ರವಾಸಿಗರು ಮರೆಯಲಾಗದಿರುವ ಸ್ಥಳ ಇದಾಗಿದೆ ಕಾಫಿ ತೋಟಗಳಲ್ಲಿ ನಡೆದಾಡುವುದು ಜನರಿಗೆ ಆಕರ್ಷಮಯವಾಗಿರುತ್ತದೆ ಹಾಗೂ ಜರಿಯಂತೆ ಹೋಗುವ ಜಲಪಾತಗಳು ಮತ್ತು ತಂಪಾದ ಹವಾಮಾನವು ಪ್ರವಾಸಿಗರಿಗೆ ಮರೆಯಲಾಗದ ನೆನಪುಗಳನ್ನು ನೀಡುತ್ತದೆ.
ಚಿಕ್ಕಮಂಗಳೂರಿನಲ್ಲಿ ಪ್ರವಾಸದ ಪ್ರಸಿದ್ಧ ಸ್ಥಳಗಳು
- ಮುಳ್ಳಯ್ಯನಗಿರಿ ಪರ್ವತ
- ಬಾಬಾಬುಡನ್ ಗಿರಿ
- ಕುದುರೆಮುಖ
- ಕಾಫಿ ತೋಟಗಳು
- ಝರಿ ಜಲಪಾತ
- ಮುಳ್ಳಯ್ಯನಗಿರಿ ಪರ್ವತ
ಮುಳ್ಳಯ್ಯನಗಿರಿ ಪರ್ವತ

ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಶಿಖರ ಯಾವುದೆಂದರೆ ಅದು ಮುಳ್ಳಯ್ಯನಗಿರಿ
ಮುಳ್ಳಯ್ಯನಗಿದಿಯ ಸುತ್ತಲೂ ಮಂಜು ಕಾಫಿ ತೋಟಗಳು ಮತ್ತು ಪಶ್ಚಿಮ ಘಟ್ಟಗಳು ಹಚ್ಚು ಹಸಿರಾಗಿ ಕಾಣುತ್ತದೆ. ಮುಳ್ಳಯ್ಯನಗಿರಿ ಪರ್ವತವು ಸಮುದ್ರಮಟ್ಟದಿಂದ 6,336 ಅಡಿ ಎತ್ತರದಲ್ಲಿದೆ. ಮುಳ್ಳಯ್ಯನಗಿರಿಯಲ್ಲಿ ಬೆಳಗಿನ ಸೂರ್ಯೋದಯವನ್ನು ಕಾಣುವ ಮತ್ತು ಮೋಡಗಳ ಮಧ್ಯೆ ನಡೆದಾಡಿಕೊಂಡು ಹೋಗುವ ಅನುಭವ ಅದ್ಭುತವಾಗಿರುತ್ತದೆ. ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಮುಳ್ಳಯ್ಯ ಸ್ವಾಮಿ ದೇವಸ್ಥಾನ ವಿದೆ ಆದ್ದರಿಂದ ಈ ಸ್ಥಳಕ್ಕೆ ಮುಳ್ಳಯ್ಯನಗಿರಿ ಎಂದು ಹೆಸರು ಬಂದಿದೆ.
ಮುಳಿಗೇನಗಿರಿಯು ಚಿಕ್ಕಮಂಗಳೂರಿನಿಂದ ಅಂದಾಜು 20 ರಿಂದ 27 ಕಿಲೋಮೀಟರ್ ದೂರದಲ್ಲಿ ಇರಬಹುದು, ಅಲ್ಲಿನ ರಸ್ತೆಗಳು ಸಣ್ಣದಾಗಿರುತ್ತದೆ ಮತ್ತು ಸ್ವಲ್ಪ ತಿರುವು ರಸ್ತೆಗಳು ಇರುವುದರಿಂದ ಬಹಳ ಜಾಗೃತೆಯಿಂದ ಹೋಗಬೇಕು ಅದರಲ್ಲೂ ಮಳೆಗಾಲದಲ್ಲಿ ಅಂತೂ ಮೆಲ್ಲನೆ ಹೋಗಬೇಕು, ಇತ್ತೀಚಿನ ವೀಕೆಂಡ್ ದಿನಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಂದರ್ಭ ಇರುತ್ತದೆ ಮತ್ತು ಕೆಲವೊಮ್ಮೆ ರಿಜಿಸ್ಟ್ರೇಷನ್ ಅಥವಾ ವಾಹನಗಳ ಮಿತಿಯು ಇರುತ್ತದೆ ಹೋಗೋ ಮುಂಚೆ ಚೆಕ್ ಮಾಡಿಕೊಂಡು ಹೋಗಿ.
ಬಾಬಾಬುಡನ್ ಗಿರಿ

ಬಾಬಾಬುಡನ್ ಗಿರಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವ ಅದ್ಭುತವಾದ ಪರ್ವತ ಶ್ರೇಣಿಯ ಶಿಖರಗಳಲ್ಲಿ ಒಂದಾಗಿದೆ ಬಾಬಾಬುಡನ್ ಗಿರಿ ಯನ್ನು ದತ್ತಗಿರಿ ಅಥವಾ ಚಂದ್ರದ್ರೋಣ ಪರ್ವತ ಎಂದು ಸಹ ಕರೆಯುತ್ತಾರೆ ಈ ಪ್ರದೇಶವು ಪಶ್ಚಿಮ ಘಟ್ಟಗಳ ಭಾಗವಾಗಿದೆ.
ನೇ ಶತಮಾನದಲ್ಲಿ ಹಜರತ್ ಬಾಬಾ ಬುಡನ್ ಅಥವಾ ದಾದಾ ಹಯತ್ ಕಲಂದರ್ ಎಂಬ ಸೂಫಿ ಸಂತರು ಯಮನ್ ದೇಶದಿಂದ 7 ಕಾಫಿ ಬೀಜಗಳನ್ನು ತಂದು ಈ ಪ್ರದೇಶದಲ್ಲಿ ನೆಡುತ್ತಾರೆ ಆ ಸಮಯದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾಫಿಯನ್ನು ಬೆಳೆಯುವುದು ಶುರುವಾಯಿತು. ಈ ಪ್ರದೇಶವನ್ನು ಭಾರತದಲ್ಲಿ ಕಾಫಿಯ ಜನ್ಮಸ್ಥಳ ಎಂದು ಕರೆಯುತ್ತೇವೆ.
ಈ ಬೆಟ್ಟದ ತುದಿಯಲ್ಲಿ ಇವರ ದರ್ಗಾವಿದೆ ಮತ್ತು ಇವರ ಜೊತೆಯಲ್ಲಿ ಶ್ರೀ ದತ್ತಾತ್ರೇಯ ಪೀಠ ಎರಡು ಒಂದೇ ಗುಹೆಯಲ್ಲಿದೆ ಇಲ್ಲಿಗೆ ಹಿಂದೂ ಮತ್ತು ಮುಸ್ಲಿಂ ಜನರು ಬರುತ್ತಾರೆ. ಈ ಪ್ರದೇಶವು ಜನರ ವಿವಿಧತೆಯಲ್ಲಿ ಏಕತೆ ತೋರಿಸುತ್ತದೆ.
- ಈ ಪ್ರದೇಶವು ಚಿಕ್ಕಮಂಗಳೂರಿಂದ 25 ರಿಂದ 36 km ಇದೆ
- ಬಾಬಾಬುಡನ್ ಗಿರಿಗೆ ಹೋಗುವುದೇ ಒಂದು ರೋಮಾಂಚನ
ಕುದುರೆಮುಖ

ಕುದುರೆಮುಖ ಇದು ಕರ್ನಾಟಕದಲ್ಲಿ ಅತ್ಯಂತ ಸುಂದರವಾದ ಒಂದು ಪ್ರಸಿದ್ಧ ಸ್ಥಳವಾಗಿದೆ ಇದು ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಇದೆ. ಕುದುರೆಮುಖ ಬೆಟ್ಟವು ಕುದುರೆಮುಖ ದಂತೆ ಕಾಣುತ್ತಿರುವರಿಂದ ಇದಕ್ಕೆ ಕುದುರೆಮುಖ ಎಂದು ಹೆಸರು. (ಕುದುರೆಮುಖ ಅಂದರೆ ಕುದುರೆಯ ಮುಖ )
ಕುದುರೆಮುಖ ಶಿಖರವು ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಎರಡನೆಯ ಅಥವಾ ಮೂರನೇ ಸ್ಥಾನವನ್ನು ಹೊಂದಿದೆ
ಕುದುರೆಮುಖವು ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ ಇಲ್ಲಿ ವಿಶಾಲವಾಗಿರುವ ದಟ್ಟವಾದ ಕಾಡುಗಳಿವೆ ಮತ್ತು ಹಸಿರು ಗುಡ್ಡಗಳು ಅಪರೂಪದ ಹಲವಾರು ಪ್ರಾಣಿಗಳು ಮತ್ತು ಸಸ್ಯಗಳು ಇಲ್ಲಿ ನಾವು ಕಾಣಬಹುದು.
ಕುದುರೆಮುಖದ ಮೇಲಿನಿಂದ 360 ಡಿಗ್ರಿ ಸುತ್ತಲೂ ಪ್ರಕೃತಿ ಆನಂದಿಸಬಹುದು ಮಳೆಗಾಲದಂತು ಹೇಳಬಾರದು ಎಷ್ಟು ರೋಮಾಂಚನ ಸ್ವರ್ಗದಂತೆ ಕಾಣುತ್ತದೆ.ಕುದುರೆಮುಖ ಸ್ಥಳಕ್ಕೆ ಹೋಗುಕ್ಕಿಂತ ಮುಂಚೆ ಒಮ್ಮೆಯಾದರೂ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ವೆಬ್ಸೈಟ್ ಅನ್ನು ವೀಕ್ಷಣೆ ಮಾಡಿ ಆನಂತರ ಅಲ್ಲಿಗೆ ತೆರಳಿ.
- ಕುದುರೆಮುಖವು ಚಿಕ್ಕಮಂಗಳೂರಿಂದ 70 ರಿಂದ 80 ಕಿಲೋಮೀಟರ್ ಇದೆ
ಕಾಫಿ ತೋಟಗಳು

ಕರ್ನಾಟಕದ ಮಲೆನಾಡಿನ ಕಾಫಿ ತೋಟಗಳು ಅತ್ಯಂತ ಸುಂದರವಾದ ಆಗರ್ಷಣೆಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಕಾಫಿಯ ಜನುಮಸ್ಥಳವಾಗಿದೆ.ಕರ್ನಾಟಕದಲ್ಲಿ ಕಾಫಿ ತೋಟಗಳ ಪ್ರಮುಖ ಕೇಂದ್ರಗಳಲ್ಲಿ ಮೊದಲನೆಯದ್ದು ಚಿಕ್ಕಮಂಗಳೂರಿನ ಬಾಬಬಡನ್ ಗಿರಿ ಆಗಿದೆ ಮತ್ತು ಕೊಡಗು ಸಕಲೇಶಪುರ ಹಾಸನ ಮತ್ತು ಮೂಡಿಗೆರೆ ಭಾಗಗಳು ಬಹು ಪ್ರಸಿದ್ಧ.
ಕಾಫಿ ತೋಟಗಳ ನಡುವೆ ನಾವು ಓಡಾಡಬಹುದು ಅಲ್ಲಿ ಕಾಫಿ ತೋಟಗಳಿಂದ ಕಾಫಿ ಬೀಜಗಳನ್ನು ತೆಗೆದು ಕಾಫಿ ಹೇಗೆ ಮಾಡುತ್ತಾರೆ ಎಂದು ನಾವು ನೋಡಬಹುದು ಮತ್ತು ಅಲ್ಲಿ ಹೋಂ ಸ್ಟೇ ರೆಸಾರ್ಟ್ ಗಳು ಸಿಗುತ್ತವೆ . ರೆಸಾರ್ಟ್ ಗಳಲ್ಲಿ ಬೆಳ್ಳಂಬೆಳಗ್ಗೆ ಕಾಫಿಯ ಸವಿಯನ್ನು ಸವಿಯಬಹುದು ಮಳೆಗಾಲದ ನಂತರ ಕಾಫಿ ತೋಟದಲ್ಲಿ ಹೂಗಳು ಅರಳಿ ತೋರಣದಂತೆ ಕಾಣುತ್ತದೆ.
ಝರಿ ಜಲಪಾತ

ಜರಿ ಜಲಪಾತವು ಚಿಕ್ಕಮಗಳೂರಿನ ಅತ್ಯಂತ ಸುಂದರವಾದ ಮತ್ತು ಅರಣ್ಯದಲ್ಲಿ ಅಡಗಿರುವ ಜಲಪಾತವಾಗಿದೆ ಈ ಜರಿ ಜಲಪಾತವನ್ನು ಬಟರ್ ಮಿಲ್ಕ್ ಫಾಲ್ಸ್ ಎಂದು ಸಹ ಕರೆಯುತ್ತಾರೆ ಏಕೆಂದರೆ ಅಲ್ಲಿ ನೀರು ಬಿಳಿ ಬಣ್ಣದಂತೆ ಹರಿಯುತ್ತದೆ ಹಾಗಾಗಿ ಎಂದು ಕರೆಯುತ್ತಾರೆ.
ಈ ಸ್ಥಳವು ಬಾಬಾ ಬುಡನ್ ಗಿರಿ ಬೆಟ್ಟ ಮತ್ತು ಮುಳ್ಳಯ್ಯನಗಿರಿ ಬೆಟ್ಟಗಳ ಸಮೀಪ ಪಶ್ಚಿಮ ಘಟ್ಟಗಳ ಕಾಡುಗಳ ನಡುವೆಯಲ್ಲಿ ಹರಿದು ಹೋಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಹೋಗಬೇಕು ಅತ್ಯಂತ ಆಕಾಶಮಯವಾಗಿ ಕಾಣುತ್ತದೆ ಸುತ್ತಲೂ ಹಸಿರು ಕಾಫಿ ತೋಟಗಳು ಜರಿಯಾದಂತಹ ಗಿಡಗಳು ಇಲ್ಲಿ ನಾವು ಕಾಣಬಹುದು ಪರಿಸರ ಪ್ರೇಮಿಗಳಿಗೆ ಇದು ಒಂದು ಸ್ವರ್ಗದ ರೀತಿಯಲ್ಲಿ ಕಾಣುತ್ತದೆ ಇದು ಚಿಕ್ಕಮಂಗಳೂರಿನಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ.
ಇಲ್ಲಿಗೆ ಹೋಗುವಾಗ ಖಾಸಗಿ ವಾಹನಗಳಿಗೆ ಜಲಪಾತದವರೆಗೂ ಹೋಗುವುದಕ್ಕೆ ಅನುಮತಿ ಇರುವುದಿಲ್ಲ ಈ ಚಲಪತಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದಿಂದ ಜೀಪ್ ರೈಡ್ ಮಾಡಬೇಕು ಮತ್ತು ಇದಕ್ಕೆ ಹಣಕೊಡಬೇಕು 600 ರಿಂದ 700 ರೂಪಾಯಿವರೆಗೂ ಇರುತ್ತದೆ ಪ್ರತಿ ಟ್ರಿಪ್ಪಿಗೂ 7 ರಿಂದ 8 ಜನವನ್ನು ಕಳೆದುಕೊಂಡು ಹೋಗುತ್ತಾರೆ. ಇಲ್ಲಿ ಸಮಯ ಬೆಳಗ್ಗೆ 8 ರಿಂದ ಸಂಜೆ 5 ವರೆಗೆ ಸಮಯವಿರುತ್ತದೆ.
ಹಲವು ಪ್ರಮುಖ ಸ್ಥಳಗಳು
ಸಿರಿ ಕೆಫೆ : ಶ್ರೀ ಕೆಫೆಯಲ್ಲಿ ಒಂದು ಅದ್ಭುತವಾದ ಮಹಿಳಾ ಶಿಲ್ಪ ವಿದೆ ಮತ್ತು ಕಾಫಿ ಕೆಫೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕಾಫಿ ಮತ್ತು ಸಿರಿ ಕೆಫೆಯ ವಶಿಷ್ಠತೆಯು ಮತ್ತು ಕಲಾ ಕೃತಿಗಳು ಫೋಟೋಗಳನ್ನು ತೆಗೆದುಕೊಳ್ಳಲು ಪ್ರಮುಖ ಸ್ಥಳವಾಗಿದೆ.
ಝೆಡ್ ಪಾಯಿಂಟ್ ( z point) : ಇದು ಕೆಮ್ಮಣ್ಣು ಗುಂಡಿಯಲ್ಲಿರುವ ಸ್ಥಳವಾಗಿದೆ ಈ ಸ್ಥಳದಲ್ಲಿ ಸೂರ್ಯನು ಸೂರ್ಯಸ್ತವಾಗುವುದನ್ನು ಸುಂದರವಾಗಿ ತೋರಿಸುತ್ತದೆ ಇದನ್ನು ಝೆಡ್ ಪಾರ್ಟಿ ಎಂದು ಹೇಳುತ್ತಾರೆ.
ಪ್ರೇಕ್ಷಣೀಯ ಸ್ಥಳಗಳು : ಹಬ್ಬಿ ಜಲಪಾತ, ಕಾಫಿ ತೋಟದ ಮಧ್ಯೆ ಇರುವ ಸುಂದರವಾದ ಜಲಪಾತ, ಜರಿ ಜಲಪಾತ, ಸೀತಾಳಯ್ಯನಗಿರಿ ಇನ್ನು ಹಲವಾರು ಸ್ಥಳಗಳಿವೆ ಇಲ್ಲಿ ನೀವು ಭೇಟಿಯಾಗಿ ಬರಬೇಕು.
- Note : ಟ್ರಕಿಂಗ್ ಮಾಡುವಾಗ ಟ್ರಕಿಂಗ್ ಶೂಸ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವುದು, ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೋಗುವ ಮುನ್ನ ರೈನ್ ಕೋಟ್ ಮತ್ತು ಜಾಕೆಟ್ ಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
- ಟ್ರಕಿಂಗ್ ಮಾಡುವಾಗ ಹುಷಾರಾಗಿ ಮೆಲ್ಲನೆ ಪ್ರಯಾಣವನ್ನು ಮಾಡುವುದು ಉತ್ತಮ.
LATEST POST