ಆದಿಕವಿ ಪಂಪ

ಆದಿಕವಿ ಪಂಪ

ನಮಸ್ಕಾರ, ಸಾಹಿತ್ಯಪ್ರಿಯರೇ ! ಇಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಕನ್ನಡ ಸಾಹಿತ್ಯದ ಆದಿಕವಿ ಪಂಪನ ಪಂಪಭಾರತ ಬಗ್ಗೆ ನನ್ನ ವೈಯಕ್ತಿಕ ದೃಷ್ಟಿಕೋನ. ಇದು ಕೇವಲ ಒಂದು ಮಹಾಕಾವ್ಯವಲ್ಲ ಅದು ಕರ್ನಾಟಕದ ಆತ್ಮದ ಧ್ವನಿ, ರಾಜನೀತಿಯ ಮಿಶ್ರಣ ಮತ್ತು ಮಾನವೀಯ ಭಾವನೆಗಳ ಗಂಗಾ. ವಿಶೇಷವಾಗಿ, ಮೊದಲ ಪರ್ವದ (ಆದಿ ಪರ್ವ) ಉಪಸಂಹಾರದ ಮೂಲಕ, ಪಂಪನ ಕಲಾತ್ಮಕ ಚಮತ್ಕಾರವನ್ನು ನಾನು ಹೇಗೆ ನೋಡುತ್ತೇನೆಂದು ಹೇಳುತ್ತೇನೆ.

ಆದಿಕವಿ ಪಂಪ

ಪಂಪನ ಕಾಲ ಕ್ರಿ.ಶ 902 – 955 CE ಆಗಿದೆ. ಪಂಪ ಅವರು ಕನ್ನಡದ ಆದಿಕವಿ ಎಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅಧಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನಾತ್ರಯರಲ್ಲಿ ( ಪಂಪ, ಪೊನ್ನ ಮತ್ತು ರನ್ನ ) ಒಬ್ಬರು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಪಂಪರ ಕಾಲವನ್ನು “ಪಂಪಯುಗ” ವೆಂದು ಕರೆದಿದ್ದಾರೆ.

“ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಇವೆರಡೂ ಪಂಪನ ಎರಡು ಪ್ರಮುಖ ಕೃತಿಗಳಾಗಿವೆ.

ಪಂಪರ ಜೀವನ : ( ಆರಂಭಿಕ )

ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದರು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ ಸುಮಾರು 902 ರಿಂದ 955 ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದರು.

ಪಂಪರ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶವಾಗಿದೆ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಮ್ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು. ಇದರ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೆಯ ಪ್ರವಾಸ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಈ ಕುಟುಂಬದವರು ಬನವಾಸಿ ( ಕರ್ನಾಟಕದ ಉತ್ತರ ಕನ್ನಡ ಮತ್ತು ಧಾರವಾಡ ಪ್ರದೇಶಕ್ಕೆ ) ವಲಸೆ ಬಂದರು.

ಪಂಪ ಅವರ ಕುಟುಂಬದವರು ಹಲವು ತಲೆಮಾರುಗಳಿಂದ ಸಂಪ್ರದಾಯವಾದಿ ಹಿಂದುಗಳಾಗಿದ್ದರು. ಪಂಪನ ತಂದೆಯಾದ ಭೀಮಪ್ಪಯ್ಯ ಯಜ್ಞಯಾಗದಿಗಳಲ್ಲಿ ಹಿಂಸೆಯನ್ನು ವಿರೋಧಿಸಿ, ತಮ್ಮ ಕುಟುಂಬದೊಂದಿಗೆ ಜೈನ ಧರ್ಮಕ್ಕೆ ಮತಾಂತ ಗೊಂಡರು. ಇದು ಪಂಪರ ಮೇಲೆ ಆಳವಾದ ಧಾರ್ಮಿಕ ಮತ್ತು ತಾತ್ವಿಕ ಪ್ರಭಾವವನ್ನು ಬೀರಿತು.

ಆದಿಕವಿ ಪಂಪ
ಆದಿಕವಿ ಪಂಪ

ಜೀವನ

ಆಧಿಕವಿ ಪಂಪನು ( ಪಂಪ ಅವರ ನಿಜವಾದ ಹೆಸರು ಜಯಂತ ) ದೇಶಿಯ ಮಾರ್ಗವನ್ನು ಸೇರಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿ ರುವುದು ‘ಮಾರ್ಗ’ ಅಚ್ಚ ಕನ್ನಡದ ಶೈಲಿಯೂ ‘ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿ ಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡವಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತವುಳ್ಳವನು ಮತ್ತು ಪ್ರೀತಿ ಇದ್ದವನು.

ತನ್ನ ದೇಶ ಪ್ರೇಮವನ್ನು”ಆರಂಕುಶವಿಟ್ಟೋಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ವರ್ಣಿಸಿ ಪಂಪ ತನ್ನ ತಾಯಿನಡನ್ನು ಹೊಗಳಿದ್ದಾರೆ.

ಪಂಪರು ಪುಲಿಗೆರೆಯ ತಿರುಳ್ ಗನ್ನಡ ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾರೆ. ಪಂಪರು ಆದಿಪುರಾಣವನ್ನು ಕ್ರಿ. ಶ. 941-42 ರಲ್ಲಿ ರಚಿಸಿದ್ದಾರೆ. ಇದು ಗುಣ ಸೇನಾಚಾರ್ಯನ ಪೂರ್ವ ಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಲ್ಲಿ ರಚಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪಂಪನ ಪ್ರಮುಖ ಕೃತಿಗಳು

ಆದಿಪುರಾಣ

  • ಆದಿಪುರಾಣ ಪಂಪನ ಮೊದಲ ಮಹಾಕಾವ್ಯ ಆಗಿದೆ ಇದು ಜೈನ ಧರ್ಮದ ಮೊದಲ ತೀರ್ಥಂಕರಾದ ವೃಷಬನಾತರ ಜೀವನ ಚರಿತ್ರೆಯನ್ನು ವಿವರಿಸುತ್ತದೆ.
  • ಇದರಲ್ಲಿ 16 ಆಶ್ವಾಸಗಳಲ್ಲಿ ಮೊದಲ ಆರು ವೃಷಭನ ಹಿಂದಿನ 9 ಜನ್ಮಗಳು, 7 ರಿಂದ 10 ವೃಷಭನ ಹುಟ್ಟು , ಬಾಲ್ಯ ಮತ್ತು ತಪಸ್ಸುಗಳನ್ನು ಹಾಗೂ ಉಳಿದ 6 ಆಶ್ವಾಸಗಳು ಬಾಹುಬಲಿಯ ಕಥೆಯನ್ನು ವಿವರಿಸುತ್ತದೆ.
  • ಚಂಪೂ ಶೈಲಿಯಲ್ಲಿ ( ಗದ್ಯ – ಪದ್ಯ ಮಿಶ್ರಣ ) ರಚಿಸಲ್ಪಟ್ಟ ಈ ಕೃತಿಯು ಆತ್ಮದ ಪರಿಪೂರ್ಣತೆಯ ಪ್ರವಾಸ ಮತ್ತು ಮೋಕ್ಷದ ಸಾಧನೆಗೆ ಕಾವ್ಯ ಮಯ ರೂಪವನ್ನು ನೀಡುತ್ತದೆ.
  • ಈ ಕೃತಿ ಮಧ್ಯಯುಗದ ಜೈನ ಪುರಾಣಗಳಿಗೆ ಮಾದರಿಯಾಗಿದೆ.

ವಿಕ್ರಮಾರ್ಜುನ ವಿಜಯ

  • ಪಂಪ ಅವರು ಮಹಾಭಾರತವನ್ನು ಆಚರಿಸಿ ಈ ಕೃತಿಯನ್ನು ರಚಿಸಿದ್ದಾರೆ.
  • 14 ಆಶ್ವಾಸಗಳು ಮತ್ತು 1609 ಪದ್ಯಗಳನ್ನು ಒಳಗೊಂಡಿದೆ.
  • ಪಂಪನು ತನ್ನ ರಾಜ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಮಹಾಭಾರತದ ಕಥೆಯನ್ನು ಕರ್ನಾಟಕದ ಸಾಂಸ್ಕೃತಿಕ ಮತ್ತು ಜೈನ ಧಾರ್ಮಿಕ ಹಿನ್ನೆಲೆಯಾಗಿ ಹೊಂದಿಕೊಳ್ಳುವಂತೆ ಪುನರ್ ರಚನೆ ಮಾಡಿದ್ದಾರೆ.
  • ಈ ಕೃತಿಯಲ್ಲಿ ಬನವಾಸಿಯ ಸೌಂದರ್ಯ ಚಿತ್ರಣವನ್ನು ಕಾಣುತ್ತೇವೆ.

ಶಿಕ್ಷಣ

ಪಂಪ ಅವರು ದೇವೇಂದ್ರ ಮುನಿ ಎಂಬ ಜೈನ ಗುರುಗಳ ಬಳಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಗಣಿತ, ವ್ಯಾಕರಣ, ಅಲಂಕಾರ ಶಾಸ್ತ್ರ, ಸಂಗೀತ, ನಾಟ್ಯ, ಶಿಲ್ಪ ಕಲೆ ಹಾಗೂ ವೈದ್ಯಶಾಸ್ತ್ರವನ್ನು ದೇವೇಂದ್ರ ಮುನಿಯ ಮಾರ್ಗದರ್ಶನದಲ್ಲಿ ಕಲಿತರು. ಈ ವಿದ್ಯಾಭ್ಯಾಸವು ಪಂಪನ ಸಾಹಿತ್ಯಿಕ ವಿಕಸಕ್ಕೆ ಮಹತ್ವದ ಪಾತ್ರವನ್ನು ವಹಿಸಿತು. ಪಂಪನು ಕೇವಲ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಿಜ್ಞಾನ ಮತ್ತು ಕಲೆಯ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದರು.

ಸಾಹಿತ್ಯ ಪ್ರಾರಂಭ

ಬಾಲ್ಯದ ದಿನಗಳಲ್ಲಿ ಪಂಪರು ತನ್ನ ತಾಯ್ನಾಡಿನ ಪ್ರಕೃತಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು. ಬನವಾಸಿಯ ಸೌಂದರ್ಯ ಅವರ ಜನಜೀವನ ಸಂಸ್ಕೃತಿ ಮತ್ತು ಪ್ರಕೃತಿ ವೈವಿಧ್ಯತೆ ಪಂಪನ ಮನಸ್ಸನ್ನು ಆಕರ್ಷಿಸಿತು. ಈ ಪ್ರೀತಿಯನ್ನು ಅವರು ತಮ್ಮ ಕಾವ್ಯಗಳಲ್ಲಿ ವ್ಯಕ್ತಪಡಿಸಿಕೊಂಡಿದ್ದಾರೆ.

ಪಂಪರು ತನ್ನ ಬಾಲ್ಯದ ಅನುಭವಗಳಿಂದ ಪ್ರೇರಿತವಾಗಿ ಸಾಹಿತ್ಯದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟನು. ಅವರ ಬಾಲ್ಯದ ದಿನಗಳಲ್ಲಿ ಕಂಡುಬಂದ ಪ್ರಕೃತಿಯ ವೈವಿಧ್ಯತೆ ಮತ್ತು ಜೀವನದ ಸರಳತೆಯು ಅವರ ಕಾವ್ಯಗಳಲ್ಲಿ ಪ್ರಮುಖವಾಗಿ ತೋರಿದೆ. ಬನವಾಸಿಯ ಜೀವನಶೈಲಿ ಜನಸಾಮಾನ್ಯರ ಸಂಸ್ಕೃತಿ ಹಾಗೂ ಸ್ಥಳೀಯ ಸಂಪ್ರದಾಯಗಳನ್ನು ಅವರು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ.

ಪ್ರಶಸ್ತಿ , ಪುರಸ್ಕಾರ , ಬಿರುದು

  • ಸಂಸಾರ ಸಾರೋದಯ, ಸರಸ್ವತಿ ಮಣಿಹಾರ, ಕವಿತಾಗುಣಾರ್ಣವ,ಆದಿಕವಿ, ಕನ್ನಡ, ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.
  • ಏಂ ಕಲಿಯೋ, ಸತ್ಕವಿಯೂ‌‌, ಕವಿತಾಗುಣಾರ್ಣಭವಂ” ಎಂದು ಪಂಪನನ್ನು ಹೊಗಳಿದ್ದಾರೆ.
  • “ಪಸರಿಪ ಕನ್ನಡಕ್ಕೂರ್ವನೇ ಸತ್ಕವಿ ಪಂಪ ನಾಗವಂ ” ಎಂದು ನಾಗರಾಜ ಕವಿಯು ಪಂಪನನ್ನು ಹೊಗಳಿದ್ದಾರೆ.

ಬನವಾಸಿಯ ಪ್ರಭಾವ

ಪಂಪನು ತನ್ನ ಬಾಲ್ಯದ ದಿನಗಳನ್ನು ಬನವಾಸಿ ಪ್ರದೇಶದಲ್ಲಿ ಕಳೆದನು ಬನವಾಸಿಯು ಪ್ರಕೃತಿ ಸೌಂದರ್ಯ ದಟ್ಟ ಕಾಡುಗಳು, ತೊರೆಗಳು, ಜಲಪಾತಗಳು ಹಾಗೂ ಪರ್ವತಗಳು ಪಂಪನ ಕಾವ್ಯ ಮಯ ಮನಸ್ಸಿಗೆ ಪ್ರೇರಣೆ ನೀಡಿದವು. ಈ ಪ್ರಭಾವವು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಬನವಾಸಿಯ ಬಗ್ಗೆ ಪಂಪನು ” ಆರಂಕುಶ ವೊಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶ ಮಂ ” ಎಂದು ಹೊಗಳಿದ್ದಾರೆ. ಅಲ್ಲದೆ ” ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ |
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ | ಎಂಬಂತಹ ವರ್ಣನೆಗಳಲ್ಲಿ ಬನವಾಸಿಯ ಸೌಂದರ್ಯವನ್ನು ಕಾವ್ಯಮಯವಾಗಿ ಚಿತ್ರಿಸಿದ್ದಾರೆ.

ಮಹತ್ವ ಮತ್ತು ವಿಶಿಷ್ಟತೆ
  • ಪಂಪ ಕಾವ್ಯಗಳಲ್ಲಿ ಆಧುನಿಕತೆ ಶಕ್ತಿಶಾಲಿ ವ್ಯಕ್ತಿತ್ವ ಕವನ ಶೈಲಿಯ ನವೀನತೆ ಹಾಗೂ ಜೈನ ಧರ್ಮದ ಮೌಲ್ಯಗಳು ಪ್ರತಿಬಿಂಬಿಸುತ್ತವೆ.
  • ಪಂಪನಿಗೆ ” ಕನ್ನಡದ ಕವಿ ಕುಲ ಗುರು ” , ” ನೂತನ ಯುಗ ಪ್ರವರ್ತಕ ” ನಾಡೋಜ ಎಂಬ ಬಿರುದುಗಳಿವೆ.
ಪಂಪನ ಕಾವ್ಯಗಳ ವೈಶಿಷ್ಟತೆ
  • ಪಂಪನು ಗದ್ಯ ಮತ್ತು ಪದ್ಯ ಶೈಲಿಯ ಸಮನ್ವಯವನ್ನು ತಂದುಕೊಂಡು ಹಳೆಯ ಮತ್ತು ಹೊಸ ಸಾಹಿತ್ಯ ಪರಂಪರೆಯ ಸೇತುವೆಯಾಗಿದ್ದರು.
  • ಜೈನ ಧರ್ಮದ ತತ್ವ, ಮಾನವೀಯತೆ, ಭಾಷೆ, ಶೈಲಿ ಎಲ್ಲವನ್ನು ಸಂಯೋಜನೆಗೊಳಿಸಿ ಕನ್ನಡ ಸಾಹಿತ್ಯವನ್ನು ಹೆಚ್ಚುಮಾಡಿದ್ದಾರೆ.
  • ಪಂಪ ಸಾಹಿತ್ಯವೆಂದರೆ ಸೃಜನಶೀಲತೆ ಮತ್ತು ಕನ್ನಡಿಗರ ಜೀವನ ದೃಷ್ಟಿಯ ಒಂದು ಪ್ರತಿಕಾರವಾಗಿ ಇಂದಿಗೂ ಮೆಚ್ಚುಗೆಯನ್ನು ಗಳಿಸಿದೆ.
  • ಪಂಪನ ಋಣವನ್ನು ಕನ್ನಡ ಸಂಗಾತಿಗರು ಗುಣಿಸುವಂತಿಲ್ಲ ಆತನ ಸಾಹಿತ್ಯ ಹಾಗೂ ವ್ಯಕ್ತಿತ್ವ ಯಾವತ್ತೂ ಕನ್ನಡಿಗರ ಹೃದಯದಲ್ಲಿ ಇರುತ್ತದೆ.

Recent Posts

ಭಾರತದ 7 ಅದ್ಭುತಗಳು 2025

see this video kannada gk and subscribe kannadafactsli channel

ಆದಿಕವಿ ಪಂಪ ಆದಿಕವಿ ಪಂಪ ಆದಿಕವಿ ಪಂಪ ಆದಿಕವಿ ಪಂಪ ಆದಿಕವಿ ಪಂಪ ಆದಿಕವಿ ಪಂಪ ಆದಿಕವಿ ಪಂಪ

ಪಂಪನ ಬಿರುದುಗಳಲ್ಲಿ ಒಂದು ಯಾವುದು

ರೂಪಕಸಾಮ್ರಾಜ್ಯಚಕ್ರವರ್ತಿ

ಪಂಪನ ಧಾರ್ಮಿಕ ಕಾವ್ಯ ಯಾವುದು

ಆದಿಪುರಾಣ

ಪಂಪನ ಲೌಕಿಕ ಕಾವ್ಯ ಯಾವುದು

ವಿಕ್ರಮಾರ್ಜುನವಿಜಯ

ಪಂಪನ ಕೃತಿಯ ಮುಖ್ಯ ಶೈಲಿ ಯಾವುದು

ಚಂಪೂ

ಪಂಪನ ಆಶ್ರಯದಾತ ಯಾರು

ಅರಿಕೇಸರಿ

ಪಂಪನ ಜನ್ಮಸ್ಥಳ ಯಾವುದು

ಅಣ್ಣಿಗೇರಿ

ಕನ್ನಡದ ಆದಿಕವಿ ಯಾರು

ಪಂಪ