ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಚೋಳ ಮನೆತನವು ಪ್ರಾಚೀನ ಅರಸು ಮನೆತನಗಳಲ್ಲೊಂದಾಗಿದೆ. ಕ್ರಿ.ಶ. 3ನೇ ಶತಮಾನದಿಂದ ದಕ್ಷಿಣದಲ್ಲಿ ಆಳ್ವಿಕೆ ನಡೆಸಿರುವ ಚೇರ, ಪಾಂಡ್ಯ ಮತ್ತು ಚೋಳ ಮನೆತನಗಳ ಮಾಹಿತಿ ಅಶೋಕನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚೋಳ ಮನತನದ ರಾಜರ ವಂಶಾವಳಿಯನ್ನು ನಿರ್ದಿಷ್ಟವಾಗಿ ಗುರುತಿಸುವದು ಸಾಧ್ಯವಾಗಿಲ್ಲ. ಈ ಮನೆತನದ ಅರಸರುಗಳ ಹೆಸರು ಸಂಘಂ ಸಾಹಿತ್ಯದಲ್ಲಿದ್ದರೂ ಸಹ ಇತಿಹಾಸಕಾರರಲ್ಲಿ ಒಮ್ಮತ ಮೂಡಿಲ್ಲ ತಂಜಾವೂರಿನ ಚೋಳ ಮನೆತನ ಕ್ರಿ.ಶ. 9ನೇ ಶತಮಾನದಿಂದ 13ನೇ ಶತಮಾನದವರೆಗೆ ಆಳ್ವಿಕೆ ನಡೆಸಿದರು ಇವರ ಸಾಮ್ರಾಜ್ಯವು ಕೊರಮಂಡಲದಿಂದ ಪುದುಕೋಟೆಯವರೆಗೂ ಹಬ್ಬಿತ್ತು ಅಲ್ಲದೆ ಇಂದಿನ ಕರ್ನಾಟಕದ ಹಲವು ಭಾಗಗಳು ಚೋಳರ ಆಳ್ವಿಕೆಗೆ ಒಳಪಟ್ಟಿದ್ದವು. ಸಂಘಂ ಸಾಹಿತ್ಯದಲ್ಲಿ ಉಲ್ಲೇಖಿಸಿರುವಂತೆ ಚೋಳರ ಮೊದಲ ರಾಜಧಾನಿ ಉರೈಯೂರುಯಾಗಿತ್ತೆಂದು ಮತ್ತು ಕಾವೇರಿ ನದಿ ದಂಡೆ ಮೇಲಿರುವ ಕಾವೇರಿ ಪಟ್ಟಣಂ ಪ್ರಮುಖ ಪಟ್ಟಣವಾಗಿತ್ತೆಂದು ಗ್ರೀಕ್‌ನ ಅನಾಮಧೇಯ ಕೃತಿ ‘ಪೆರಿಪ್ಲಸ್ ಆಫ್ ಅರೆದಿರಿಯನ್‌ಸಿ’ದಿಂದ ತಿಳಿದು ಬರುತ್ತದೆ.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಭಾರತೀಯ ಸಂಸ್ಕೃತಿಯನ್ನು ವಿದೇಶಗಳಲ್ಲಿ ಹರಡಿ ಚರಿತ್ರೆಯುದ್ದಕ್ಕೂ ಮೆರೆದಿರುವ ಚೋಳ ಸಾಮ್ರಾಜ್ಯ ನಿಜವಾಗಿಯೂ ಅವಿಸ್ಮರಣೀಯವೆಂದೇ ಹೇಳಬಹುದು. ತಮ್ಮ ವಿಜಯ ಪತಾಕೆಯನ್ನು ಕೇವಲ ಭಾರತದ ಮೇರೆಗಳಿಗಷ್ಟೇ ಸೀಮಿತವಾಗಿರಿಸದೆ. ಸೀಲೋನ, ಆಗ್ನೆಯ ಏಷ್ಯಾದ ರಾಜ್ಯಗಳು ಮತ್ತು 12 ಸಾವಿರ ಮಾಲ್ಡಿವ್ ದ್ವೀಪಗಳಲ್ಲಿಯೂ ಸಹ ಇವರ ಕೀರ್ತಿ ಹಬ್ಬಿತ್ತು.

ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಚೋಳ ಸಂತತಿಯ ಇತಿಹಾಸ:

ಚೋಳ ಸಂತತಿಯ ಆಳ್ವಿಕೆಯ ಕಾಲವನ್ನು ನಿರ್ಧಿಷ್ಟವಾಗಿ ಗುರುತಿಸುವದು ಮತ್ತು ಮೂಲಪುರುಷನ ಬಗೆಗೆ ಅನೆ ಅನೇಕ ಭಿನ್ನಾಭಿಪ್ರಾಯಗಳನ್ನು ನಾವು ಕಾಣಬಹುದು ಸಂಘಂ ಸಾಹಿತ್ಯದಲ್ಲಿ ಅನೇಕ ಚೋಳ ರಾಜರ ಉಲ್ಲೇಖಗಳಿದ್ದರೂ ಸಹ ಸಂತತಿಯ ಬಗ್ಗೆ ನಿಖರ ಮಾಹಿತಿಗಳಿಲ್ಲ, ಆದಾಗ್ಯೂ ಪ್ರೊ. ಕೆ.ಕೆ. ಪಿಳ್ಳೆಯವರ ಅಭಿಪ್ರಾಯದಂತೆ ಸಂಘಂ ಸಾಹಿತ್ಯ ಚೋಳ ಸಂತತಿಯ ಬಗೆಗೆ ಮಾಹಿತಿ ನೀಡುವಲ್ಲಿ ನಮಗೆ ಸಹಾಯಕಾರಿಯಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಅದರನ್ವಯ ಇಳಿಯಾನ್ ಚೋಳ ಎಂಬುವವನು ಸಂಘಂ ಕಾಲದ ಚೋಳವಂಶದ ಮೂಲ ಪುರುಷ ಎಂದು ನಂಬಲಾಗಿದೆ ಮತ್ತು ಚೋಳರ ಪ್ರಸಿದ್ಧ ಅರಸ. ಕರಿಕಾಲ ಚೋಳನಾಗಿದ್ದು. ಈತನು ಕ್ರಿ.ಶ. ಆರನೇ ಶತಮಾನದಲ್ಲಿ ಆಳ್ವಿಕೆ ನಡೆಸಿದನೆಂದು ಪ್ರೊ. ಕೆ.ಎ. ನೀಲಕಂಠಶಾಸ್ತ್ರಿಯವರು ಅಭಿಪ್ರಾಯ ಪಡುತ್ತಾರೆ.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಇಳಿಯಾನ್ ಚೋಳ:

ಸಂಘಂ ಕಾಲದಲ್ಲಿ ಆಳ್ವಿಕೆ ನಡೆಸಿರುವ ಮತ್ತು ಅಂದಿನ ವಿಫುಲ ಸಾಹಿತ್ಯ ರಚನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿರುವ ಚೇರ, ಚೋಳ, ಮತ್ತು ಪಾಂಡ್ಯ ಮನೆತನಗಳಲ್ಲಿ ಒಂದಾದ ಚೋಳ ಸಾಮ್ರಾಜ್ಯದ ಮೂಲ ಪುರುಷ ಇಚ್ಛೆಯಾನ್ ಚೋಳ ಎಂಬುದಾಗಿ ಐತಿಹ್ಯಗಳಿವೆ. ಈತನು ಕ್ರಿ.ಶ. ಒಂದನೆ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದು. ಉರೈಯೂರು ಅವನ ರಾಜಧಾನಿಯಾಗಿತ್ತೆಂದು, ಸಂಘಂ ಸಾಹಿತ್ಯವಲ್ಲದೆ ಅನಾಮಧೆಯ ಗ್ರಂಥವಾದ “ಪೆರಿಪ್ಲಸ್ ಆಪ್ ಅರೆದ್ರಿಯನ್ ಸಿ” ಎಂಬ ಗ್ರಂಥದಲ್ಲಿ ರಾಜಧಾನಿ ಉರೈಯೂರ ಬಗ್ಗೆ ಉಲ್ಲೇಖ ಬರುತ್ತದೆ. ಈತನ ನಂತರ ಚೋಳ ವಂಶದ ಅರಸರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವದಿಲ್ಲ. ಆದರೆ ಅಂದಿನ ಪ್ರಸಿದ್ಧ ಅರಸನಾದ ಕರಿಕಾಲನು ಚೋಳರ ಅರಸನೆಂಬುವದು ಮಾತ್ರ ಅನೇಕ ಆಧಾರಗಳಿಂದ ತಿಳಿದು ಬರುತ್ತದೆ.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಕರಿಕಾಲ ಚೋಳ:

ಈತನು ಚಿಕ್ಕವನಿರುವಾಗ ಬೆಂಕಿಯಲ್ಲಿ ಸಿಕ್ಕಿಕೊಂಡು ಆತನ ಕಾಲು ಸುಟ್ಟಿದ್ದರಿಂದ ಈತನಿಗೆ ಕರಿಕಾಲನೆಂದು ಹೆಸರು ಬಂದಿತೆಂಬುದು ಇತಿಹಾಸಕಾರರ ನಂಬಿಕೆಯಾಗಿದೆ. ತನ್ನ ಆಳ್ವಿಕೆಯ ಕಾಲದಲ್ಲಿ ಅನೇಕ ಯುದ್ಧಗಳಲ್ಲಿ ಜಯಗಳಿಸಿ ನೆರೆಹೊರೆ ರಾಜರನ್ನು ಸದೆಬಡೆದು ಪರಾಕ್ರಮಿ ಅರಸನೆಂದೇ ಪ್ರಖ್ಯಾತಿಯಾಗಿದ್ದಾನೆ. ಆತನು ಕೆಲವು ಕಾಲ ವೈರಿ ಸೈನ್ಯದ ಸೆನೆಯಲ್ಲಿದ್ದು ಉಪಾಯದಿಂದ ಹೊರಬಂದು ಸಿಂಹಾಸನ ಪಡೆದುಕೊಂಡಿದ್ದನು ಎಂದು ಹೇಳಲಾಗಿದೆ. ಕರಿಕಾಲನು ಪಾಂಡ್ಯ ಮತ್ತು ಚೇರೆ ಅರಸರನ್ನು “ವೆಣ್ಣೆ” ಕದನದಲ್ಲಿ ಸಂಪೂರ್ಣವಾಗಿ ಸೋಲಿಸಿ ಚೋಳರ ಪ್ರಭಾವನ್ನು ಹೆಚ್ಚಿಸಿದನು. ತದನಂತರ “ಬಾಹ್ಯಪರಂದಲೈ” ಎಂಬಲ್ಲಿ ನಡೆದ ಕದನದಲ್ಲಿ ವೈರಿ ಒಕ್ಕೂಟದ ಒಂಬತ್ತು ಜನ ಶತ್ರು ಅರಸರನ್ನು ಸದೆಬಡಿಯುವಲ್ಲಿ ಯಶಸ್ವಿಯಾದನು. ತಮಿಳು ಗ್ರಂಥವಾದ “ಶಿಲಪ್ಪಾದಿಕಾರಂ’ದಲ್ಲಿ ನಿರೂಪಿಸಿರುವಂತೆ ಕರಿಕಾಲನು ಹಿಮಾಲಯದ ಪರ್ವತದವರೆಗೆ ತನ್ನ ದಿಗ್ವಿಜಯಗಳನ್ನು ಕೈಗೊಂಡಿದ್ದನೆಂದು ಮತ್ತು ಉರೈಯೂರು ತನ್ನ ರಾಜಧಾನಿಯನ್ನಾಗಿ ಮುಂದುವರೆಸಿದನು ಮತ್ತು ಕಾವೇರಿಪಟ್ಟಣ ತನ್ನ 2ನೇ ರಾಜಧಾನಿಯನ್ನಾಗಿಸಿದನೆಂದು ತಿಳಿದು ಬಂದಿದೆ. ದಕ್ಷಿಣದ ಸಿಂಹಳದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ಅರಸನನ್ನು ಸದೆಬಡೆದು ಅನೇಕ ಸೈನಿಕರನ್ನು ಸೆರೆ ಹಿಡಿದು ತಂದು ಅವರಿಂದ ಕಾವೇರಿ ನದಿಗೆ ಕಲ್ಲಣಿ ಎಂಬಲ್ಲಿ ಆಣೆಕಟ್ಟನ್ನು ನಿರ್ಮಿಸಿದನೆಂದು ತಿಳಿದು ಬರುತ್ತದೆ.

( ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ )

ಈ ಆಣೆಕಟ್ಟು 1080 ಅಡಿ ಉದ್ದವಾಗಿದ್ದು ಕಲ್ಲಿನಿಂದ ನಿರ್ಮಿಸಿರುವ ನೀರಾವರಿ ಅನುಕೂಲತೆಗೋಸ್ಕರ ನಿರ್ಮಿಸಲಾಗಿದೆ. ಅಲ್ಲದೆ ಇದರ ವಿಶೇಷತೆಯೆಂದರೆ ಬಹುಶ: ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ನಿರ್ಮಿಸಿರುವ ನೀರಾವರಿ ಆಣೆಕಟ್ಟಾಗಿದೆ. ಇದು ಕರಿಕಾಲ ಚೋಳಿ ವ್ಯವಸಾಯ ಮತ್ತು ನೀರಾವರಿಗೆ ಕೊಟ್ಟಿರುವ ಮಹತ್ವವನ್ನು ತಿಳಿಸುತ್ತದೆ. ಈತನ ಕಾಲದಲ್ಲಿ ವ್ಯಾಪಾರ ಸಮೃದ್ಧಿಯಿಂದ ಕೂಡಿದ್ದು ದೇಶ ವಿದೇಶಿಗಳಿಗೆಲ್ಲ ರಫ್ತು, ಆಮದು ವಹಿವಾಟು ಇದ್ದಿತ್ತೆಂದು ತಿಳಿಯುತ್ತದೆ. ಕರಿಕಾಲನು ಸಾಹಿತ್ಯ ಮತ್ತು ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದನೆಂದು ಸಂಘಂ ಸಾಹಿತ್ಯವು ವರ್ಣಿಸುತ್ತದೆ. ಕಾವೇರಿ ಪಟ್ಟಣ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು ಜನತೆ ಶಾಂತಿ ಸುಭಿಕ್ಷೆಯಿಂದ ಜೀವನ ಸಾಗಿಸುತ್ತಿರುವ ಸಮಯದಲ್ಲಿಯೇ ಕರಿಕಾಲನು ಮರಣ ಹೊಂದಿದನು. ಈತನ ಮರಣದ ನಂತರ ಸೆಂಗಣ್ಣನ್ ಎಂಬುವವನು ಪಟ್ಟಕ್ಕೆ ಬಂದನಾದರೂ ಸಿಂಹಾಸನಕ್ಕಾಗಿ ಒಳಜಗಳಗಳು ಪ್ರಾರಂಭವಾಗಿ ಈ ಮನೆತನ ದುರ್ಬಲವಾಗುತ್ತಾ ಬಂದಿತು. ಕಾಲಕ್ರಮೇಣದಲ್ಲಿ ಪಲ್ಲವರು ಪ್ರಬಲರಾಗಿದ್ದ ಸಮಯದಲ್ಲಿ ಅವರ ಆಧೀನ ಅರಸರಾಗಿ ಸಣ್ಣ ಪುಟ್ಟ ಸಂಸ್ಥಾನಗಳ ಅರಸರಾಗಿ ಬಾಳಬೇಕಾಯಿತು. ಪುನಃ ಕಾಲಚಕ್ರದಲ್ಲಿ ಪಲ್ಲವರು ದುರ್ಬಲರಾಗಿ ಚೋಳ ಮನೆತನ ಪುನಸ್ಥಾಪಿತವಾಯಿತು. ಹೀಗಾಗಿ ಸುಮಾರು ಮೂರು ಶತಮಾನಗಳ ಕಾಲ ಚೋಳರು ದಕ್ಷಿಣ ಭಾರತದ ಇತಿಹಾಸದಲ್ಲಿ ಹೆಸರಿಗೆ ಮಾತ್ರ ಉಳಿದುಕೊಂಡಿದ್ದರು.

Table of Contents

ವಿಜಯಾಲಯ (೮೫೦-೮೭೧):

ಸುಮಾರು ಕ್ರಿ.ಶ. 850ರಲ್ಲಿ ಪುನಃಸ್ಥಾಪಿತವಾದ ಚೋಳ ಮನೆತನಕ್ಕೆ ತನ್ನ ಹಳೆಯ ಪ್ರಭಾವವನ್ನು ದೊರಕಿಸಿಕೊಟ್ಟವನೆಂದರೆ ವಿಜಯಾಲಯನು. ಆರಂಭದಲ್ಲಿ ಪಲ್ಲವರ ಸಾಮಂತ ಅರಸನಾಗಿದ್ದ ಈತನು ತನ್ನ ಶೌರ್ಯ ಪರಾಕ್ರಮದಿಂದ ಪಾಂಡ್ಯ ಅರಸ ವರಗುಣನನ್ನು ಸೋಲಿಸಿ ಅವರ ಆಧೀನದಲ್ಲಿದ್ದ ತಂಜಾವೂರು ಪ್ರಾಂತವನ್ನು ವಶಪಡಿಸಿಕೊಂಡರು. ಈ ಪ್ರಾಂತ ವಶಪಡಿಸಿಕೊಂಡ ನೆನಪಿಗಾಗಿ ವಿಜಯಾಲಯ ದೇವಾಲಯ ನಿರ್ಮಿಸಿದನೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ತದನಂತರ ವಿಜಯಾಲಯನ ಮಗ ಒಂದನೇ ಆದಿತ್ಯನೊಂದಿಗೆ ಪಲ್ಲವರ ಮೇಲೆ ದಾಳಿ ಮಾಡಿ ಪಲ್ಲವರ ಕೊನೆಯ ಅರಸರುಗಳಾದ ಅಪರಾಜಿತ, ಮರ್ಮನ್ ಮತ್ತು ನಂದಿವರ್ಮನ್‌ರನ್ನು ಕ್ರಮೇಣವಾಗಿ ತಿರುಪ್ಪರಂಬಿಯಂ ಮತ್ತು ತಿರುಮಲಂಕಾಡು ಯುದ್ಧಗಳಲ್ಲಿ ಸೋಲಿಸಿ ಇಂದಿನ ಕುಂಬಕೋಣದ ಪ್ರದೇಶಗಳನ್ನೆಲ್ಲ ತಮ್ಮ ವಶಕ್ಕೆ ತೆಗೆದುಕೊಂಡರು.

ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ವಿಜಯಾಲಯನನ್ನು ಕುರಿತು, ಈ ರೀತಿ ವರ್ಣಿಸಿದ್ದಾರೆ. “ಚೋಳರ ಉರ್ದ್ಬದಿಶೆಯು ವಿಜಯಾಲಯನಿಂದ ಆರಂಭವಾಗಿ ರಾಜರಾಜ ಮಹಾಶಯನ ಆಳ್ವಿಕೆಯ ಕೊನೆಯವರೆಗೂ ಮುಂದುವರೆಯಿತು. ಆದ್ದರಿಂದ ಇವನನ್ನು ಚೋಳ ಸಾಮ್ರಾಜ್ಯದ ಕರ್ತಾರನೆಂದು ಕರೆಯಬಹುದು” ಎಂದಿದ್ದಾರೆ.

ವಿಜಯಾಲಯನ ಶೌರತ್ವ ಮತ್ತು ಪರಾಕ್ರಮದ ಕುರುಹಾಗಿ ಆತನನ್ನು ‘ವರಕೇಸರಿ’ ಮತ್ತು ‘ರಾಜಕೇಸರಿ’ ಎಂಬ ಬಿರುದಾಂಕಿತಗಳು ಇದ್ದವು. ಹೀಗೆ ಚೋಳ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾದ ವಿಜಯಾಲಯನಿಗೆ ಚೋಳರ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಕಲ್ಪಿಸಲಾಗಿದೆ.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಒಂದನೇ ಆದಿತ್ಯ (೮೭೧-೯೦೭)

ಕ್ರಿ.ಶ. 871ರಲ್ಲಿ ವಿಜಯಾಲಯನ ನಂತರ ಆತನ ಮಗ ಅಧಿಕಾರಕ್ಕೆ ಬಂದನು. 1ನೇ ಆದಿತ್ಯ ಯುವರಾಜನಿರುವಾಗಲೇ ತನ್ನ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ಉದಾಹರಣೆಗಳಿವೆ. ಆದಿತ್ಯನ ಒಂದು ಶಾಸನದ ಪ್ರಕಾರ “ಈ ಯುವರಾಜ ಎತ್ತರವಾದ ಆನೆಯ ಮೇಲೆ ಕುಳಿತು ಪಲ್ಲವ ರಾಜನತ್ತ ಹಾರಿ ಆತನನ್ನು ಕೈಯಲ್ಲಿ ಎತ್ತಿ ವೇಗವಾಗಿ ತಿರುಗಿಸಿ ನೆಲಕ್ಕೆ ಉರುಳಿಸಿದ್ದನು ಈ ಒಂದು ಸಂಕೇತಕ್ಕಾಗಿ ಆತನನ್ನು “ಕೋದಂಡರಾಮ” ಎಂಬ ಬಿರುದಿನಿಂದ ಪ್ರಶಂಸಿಸಲಾಗಿದೆ. ಈತನು ಕೈಗೊಂಡ ದಿಗ್ವಿಜಯಗಳಲ್ಲಿ ಮುಖ್ಯವಾದವುಗಳೆಂದರೆ ಪಾಂಡ್ಯರ ಮೇಲೆ ದಾಳಿ ಮಾಡಿ ಅರಸ ವೀರನಾರಾಯಣನನ್ನು ಸೋಲಿಸಿ ಪಾಂಡ್ಯರ ಅಧೀನದಲ್ಲಿರುವ ಕೊಂಗುದೇಶವನ್ನು ಚೋಳ ಸಾಮ್ರಾಜ್ಯದಲ್ಲಿ ಸೇರ್ಪಡೆಗೊಳಿಸಿದ್ದನು. ಅಲ್ಲದೆ ತಲಕಾಡಿನ ಗಂಗ ಅರಸ ಇಮ್ಮಡಿಪೃಥ್ವಿ ಪತಿಯ ಮೇಲೆ ದಾಳಿ ಮಾಡಿ ಅವನು ತನ್ನ ಸಾಮಂತನಾಗಿರುವಂತೆ ಮಾಡಿದ್ದನು. ಚೋಳ ಅರಸ ಆದಿತ್ಯನು ಕ್ರಿ.ಶ. 890ರಲ್ಲಿ ಕುಂಬಕೋಣಂ ಸಮೀಪದ “ತಿರುವೊಲಂ” ಎಂಬಲ್ಲಿ ಪಲ್ಲವ ಅರಸ ಅಪರಾಜಿತ ವರ್ಮನನ್ನು ಸೋಲಿಸಿ ಪಲ್ಲವ ರಾಜಕುಮಾರಿಯನ್ನು ವರಿಸಿದ್ದನ್ನು ಆ ರಾಜಕುಮಾರನಿಗೆ ಹುಟ್ಟಿದ ಮಕ್ಕಳೆ ಪಾರಾಂತರ ಮತ್ತು ಕನ್ನರದೇವ ಒಂದನೇ ಆದಿತ್ಯ ಅನೇಕ ವರ್ಷಗಳ ಆಳ್ವಿಕೆ ಮಾಡಿ ಶೈವ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾನೆ. ಈತನ ಕಾಲವನ್ನು ಚೋಳವಂಶದ ವಿಸ್ತರಣೆಯ ಪರ್ವಕಾಲವೆಂದು ಹೇಳಬಹುದು. ತೊಂಡೈಮಂಡಲಿ’ನಲ್ಲಿ ಒಂದನೇ ಆದಿತ್ಯನು ನಿಧನ ಹೊಂದಿದ್ದಾಗ ಅವನ ಹಿರಿಯ ಮಗ ತಂದೆಯ ನೆನಪಿಗಾಗಿ “ಅದಿತ್ಯೇಶ್ವರದೇವಾಲವನ್ನು” ನಿರ್ಮಿಸಿದ್ದನು, ಅಲ್ಲದೆ ಪರಂಪರಾ ನೀತಿಗನುಗುಣವಾಗಿ ವಂಶದ ಹಿರಿಯಮಗನಾದ ಪಾರಾಂತಕನು ಚೋಳ ಸಾಮ್ರಾಜ್ಯದ ಸಿಂಹಾಸನವನ್ನು ಏರಿ ತನ್ನ ತಂದೆಯಂತೆ ಪರಾಕ್ರಮದಿಂದ ರಾಜ್ಯವನ್ನು ವಿಸ್ತರಿಸುವಲ್ಲಿ ಕಾರ್ಯಪ್ರವೃತ್ತನಾದನು.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

1ನೇ ಪರಾಂತಕ (907-953)

ಕ್ರಿ.ಶ. 907ರಲ್ಲಿ ಪಟ್ಟಕ್ಕೆ ಬಂದ 1ನೇ ಪರಾಂತಕನು ತನ್ನ ತಂದೆಯಂತೆ ಪರಾಕ್ರಮಿಯಾಗಿದ್ದು ಪಟ್ಟಾಭಿಷೇಕವಾದ ತಕ್ಷಣ ಆತನು ಕೈಗೊಂಡ ಮೊದಲ ಕಾರ್ಯವೆಂದರೆ ಸೈನ್ಯವನ್ನು ಬಲಪಡಿಸುವುದು ಮತ್ತು ಚೋಳ ಸಾಮ್ರಾಜ್ಯದ ಮೇರೆಗಳನ್ನು ವಿಸ್ತರಿಸಿ ರಾಜ್ಯದಲ್ಲಿ ಶಾಂತಿ ಸುಭಿಕ್ಷೆ ಸ್ಥಾಪಿಸಲುಪ್ರಯತ್ನಿಸಿದನು.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ಪಾಂಡ್ಯರ ಮೇಲೆ ದಾಳಿ:

‘ಸಮರ್ಥವಾದ ಸೈನ್ಯದೊಂದಿಗೆ ಪಾರಾಂತಕನು ತನ್ನ ಪ್ರಥಮ ದಂಡಯಾತ್ರೆಯನ್ನು ಪಾಂಡ್ಯ ಅರಸ ಇಮ್ಮಡಿ ರಾಜಸಿಂಹ ಮಾರವವರ್ಮನ ಮೇಲೆ ನಡೆಸಿದ್ದನು. ಚೋಳ ಸೈನ್ಯವನ್ನು ನೋಡಿ ಹೆದರಿದ ಮಾರವವರ್ಮನು ಸಿಂಹಳ ಅರಸ 5ನೇ ಕಸ್ಸಪನ ಸಹಾಯವನ್ನು ಯಾಚಿಸಿದನು. ಆದರೆ ಪಾರಾಂತಕನು ಸಿಂಹಳ ಸೈನ್ಯವನ್ನು ವೆಲ್ಲೂರಿನ ಬಳಿ ತಡೆಗಟ್ಟಿ ಸೋತು ಶರಣಾಗುವಂತೆ ಮಾಡಿದ್ದನು. ಇದರಿಂದ ಧೃತಿಗೆಟ್ಟ ಪಾಂಡ್ಯ ಅರಸ ರಾಜಸಿಂಹ ಮಾರವರ್ಮನು ಸಿಂಹಳಕ್ಕೆ ಓಡಿಹೋದನು. ಆಗ ಪಾಂಡ್ಯ ರಾಜ್ಯ ಚೋಳರ ಕೈ ಸೇರಿತು. ಇದರ ನೆನಪಿಗಾಗಿ ಮಧುರೈಕೊಂಡ’ ಎಂಬ ಬಿರುದನ್ನು ಪಾರಾಂತಕನು ಧರಿಸಿದನು ಸಿಂಹಳದ ಸೈನ್ಯವನ್ನು ಸದೆ ಬಡಿದ ಕುರುಹುವಾಗಿ “ಇಲ್ಲಮಂಕ್ಕೊಂಡ” ಎಂಬ ಬಿರುದನ್ನು ಸಹ ಪಡೆದನು.

ಬಾಣರ ಮೇಲೆ ದಾಳಿ:

ಕ್ರಿ.ಶ. 778ರ ಸುಮಾರಿಗೆ ಪಲ್ಲವರ ಸಾಮಂತರಾಗಿ ಆಳುತ್ತಿದ್ದ ಬಾಣರು ಪಶ್ಚಿಮದ ಗಂಗರನ್ನು ಸೋಲಿಸಿ ಸ್ವತಂತ್ರರಾದರು ಇವರ ಮೇಲೆ 1ನೇ ಪರಾಂತಕನು ಯುದ್ಧ ಸಾರಿದನು ಈ ಯುದ್ಧದಲ್ಲಿ ಬಾಣರನ್ನು ನಿರ್ಮೂಲಗೊಳಿಸಿರುವುದಾಗಿ ಪರಾಂತಕನು ಹೇಳಿಕೊಂಡಿದ್ದಾನೆ. ಸೋತ ಬಾಣರು ಚೋಳರ ವಿರುದ್ಧ ರಾಷ್ಟ್ರಕೂಟರ ಸಹಾಯವನ್ನು ಪಡೆದುಕೊಂಡರುದರಿಂದಾಗಿ ಕ್ರಿ.ಶ. 946ರಲ್ಲಿ ನಡೆದ ‘ತೆಕ್ಕೊಲಂ’ ಯುದ್ಧವು ಅನಿವಾರ್ಯವಾಯಿತು.

ತಿರುವಲಂ ಯುದ್ಧ:

ವಿಜಯಾಲ ಮತ್ತು ಆದಿತ್ಯನಿಂದ ನಿರ್ಮಿಸಲ್ಪಟ್ಟ ಚೋಳ ಸಾಮ್ರಾಜ್ಯ ಒಂದನೆ ಪಾರಾಂತಕನ ಕಾಲದಲ್ಲಿ ಕೈ ತಪ್ಪುವ ಹಂತಕ್ಕೆ ಬಂದಿತು. ಇದನ್ನು ಚೋಳ ಇತಿಹಾಸದ ಸಂಧಿಗ್ಧಕಾಲವೆಂದೇ ಕರೆಯಲಾಗಿದೆ. ಏಕೆಂದರೆ ಚೋಳ ಸಾಮ್ರಾಜ್ಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಪಾರಾಂತಕನು ಉತ್ತರ ಭಾಗದ ರಾಷ್ಟ್ರಕೂಟರ ಮೇಲೆ ತನ್ನ ದಂಡ ಯಾತ್ರೆಯನ್ನು ಕೈಗೊಂಡನು. ಅಲ್ಲಿ ಎರಡನೆ ಕೃಷ್ಣನು ಅರಸನಾಗಿದ್ದನು. ಪರಾಂತಕನ ತಂದೆಯಾದ ಆದಿತ್ಯನ ಮರಣದ ನಂತರ ಸಿಂಹಾಸನವನ್ನು ಪಡೆದುಕೊಳ್ಳುವಲ್ಲಿ ಪರಾಂತಕನ ಸಹೋದರ ಕನ್ನರದೇವನಿಗೆ ಮತ್ಸರ ಹುಟ್ಟಿಕೊಂಡು ಸದಾಕಾಲ ವೈರತ್ವದಿಂದಲೆ ಇದ್ದನು. ಇದೇ ಸಮಯಕ್ಕೆ ಪರಾಂತಕನು ರಾಷ್ಟ್ರಕೂಟರ ದಾಳಿಯ ಸದುಪಯೋಗ ಪಡೆದು. ರಾಷ್ಟ್ರಕೂಟ ಇಮ್ಮಡಿ ಕೃಷ್ಣನೊಂದಿಗೆ ವೈವಾಹಿಕ ಸಂಬಂದ ಬೆಳೆಸಿ ಕೃಷ್ಣನ ಭಾವಮೈದುನನಾಗಿದ್ದನು. ತನ್ನ ಭಾವನ ಮೇಲೆ ದಂಡೆತ್ತಿ ಹೋಗುವದನ್ನು ಕನ್ನರದೇವಿ ವಿರೋಧಿಸಿದನು. ಸಹಜವಾಗಿ ಇಮ್ಮಡಿ ಕೃಷ್ಣನನ್ನು ಸಹಾಯ ಮಾಡುವದರ ಜೊತೆಗೆ ಚೋಳರಿಂದ ಸೋಲನುಭವಿಸಿದ ಬಾಣರು ಮತ್ತು ಮೈದುಂಬರು ರಾಷ್ಟ್ರಕೂಟರ ಪರ ವಹಿಸುವಂತೆ ಮಾಡಿ ಪರಾಂತಕನ ಮೇಲೆ ಮೂರು ಮನೆತನಗಳು ಮತ್ತು ಕನ್ನದೇವ ಒಡಗೂಡಿ ವಲ್ಲಾಲದ (ತಿರುವಲು) ಎಂಬಲ್ಲಿ ದಾಳಿ ಮಾಡಿದರು ಈ ಯುದ್ಧದಲ್ಲಿ ಚೋಳ ಅರಸ ಸೋತು-ಶರಣಾದನು ಇದರಿಂದಾಗಿ ಪರಾಂತಕನ ವಿಸ್ತಾರ ಸಾಮ್ರಾಜ್ಯ ಆತನ ಕೈ ತಪ್ಪುವ ಸಂದಿಗ್ಧಕಾಲ ಒದಗಿತು.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ತೆಕ್ಕೊಲಂ ಯುದ್ಧ:

ಪರಾಂತಕನು ತಿರುವಲಂ ಯುದ್ಧದಲ್ಲಿ ಸೋಲಿನ ಕಹಿ ಅನುಭವಿಸಿದ ಬೆನ್ನಲ್ಲೇ ಆತನಿಗೆ ಇನ್ನೊಂದು ಸೋಲಿನ ಸಂದರ್ಭ ಒದಗಿ ಬಂದಿತು. ಚೋಳರ ಬದ್ಧ ವೈರಿಗಳಾದ ರಾಷ್ಟ್ರಕೂಟರು ಗಂಗ ಅರಸರೊಂದಿಗೆ ವೈವಾಹಿಕ ಸಂಬಂದ ಬೆಳೆಸಿ ಪರಸ್ಪರರು ಸಮೀಪವರ್ತಿಗಳಾಗಿದ್ದರು. ರಾಷ್ಟ್ರಕೂಟರ ಇಮ್ಮಡಿ ಕೃಷ್ಣನ ಸಹೋದರಿಯನ್ನು ಗಂಗಭೂತಗನಿಗೆ ಕೊಟ್ಟು ಮದುವೆ ಮಾಡಿಸಿ ಭೂತುಗನನ್ನು ಬಲಿಷ್ಠಗೊಳಿಸಲು ಪ್ರಯತ್ನಿಸತೊಡಗಿದನು.

ಭೂತುಗನು ಕೈವಾರಗಂಗ ಶಾಖೆಯ ಪ್ರೈಪತಿಯನ್ನು ಸೋಲಿಸಿ ಇಡೀ ಗಂಗವಾಡಿಯ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಲು ಉತ್ಸುಕನಾದನು. ಗಂಗವಾಡಿಯೂ ಚೋಳರ ವಶದಲ್ಲಿರುವದರಿಂದ ಸಹಜವಾಗಿಯೇ ಪರಾಂತಕನನ್ನು ಕೆರಳಿಸಿತು. ಭೂತುಗ ಚೋಳರ ಮೇಲೆ ದಾಳಿ ಮಾಡಲು ರಾಷ್ಟ್ರಕೂಟರ ಸಹಾಯ ಯಾಚಿಸಿದನು ಗಂಗ ಮತ್ತು ರಾಷ್ಟ್ರ ಕೂಟರ ಬಲಾಡ್ಯ ಸೈನ್ಯ ತೆಕ್ಕೊಲು ಎಂಬಲ್ಲಿ ಯುದ್ಧ ಮಾಡಿ ಪರಾಂತಕನನ್ನು ಶರಣಾಗುವಂತೆ ಮಾಡಿದರು. ವೈರಿ ಸೈನ್ಯದಿಂದ ತತ್ತರಿಸಿದ ಪರಾಂತಕನು ವಿರಾವೇಶದಿಂದ ಹೋರಾಡಿದರೂ ಸಹ ಜಯಮಾಲೆ ರಾಷ್ಟ್ರಕೂಟರ ವಶವಾಯಿತು. ಈ ಯುದ್ಧದ ಇನ್ನೊಂದು ಮಹತ್ವದ ಘಟನೆಯೆಂದರೆ ಪಾರುಂತಕನ ಹಿರಿಯ ರಾಜಕುಮಾರ ಯುದ್ಧದಲ್ಲಿಯೇ ಕೊಲೆಗೈಯಲ್ಪಟ್ಟನು ಹೀಗಾಗಿ ರಾಷ್ಟ್ರಕೂಟ ಅರಸ ಕೃಷ್ಣನು ಚೋಳ ರಾಜ್ಯವನ್ನು 909ರಲ್ಲಿ ಆಕ್ರಮಿಸಿ ತಂಜಾವುರಕೊಂಡ ಎಂಬ ಅನ್ವರ್ಥನಾಮವನ್ನು ಧರಿಸಿದನು. ಈತನ ದಾಳಿ ಕಂಚಿ ಮತ್ತು ತಂಜಾವೂರಗಳಲ್ಲದೆ ರಾಮೇಶ್ವರದವರೆಗೂ ಮುಂದುವರೆಸಿ ಸಂಪೂರ್ಣ ಚೋಳ ಪ್ರದೇಶದ ಒಡೆಯನಾದನು, ಏತನ್ಮಧ್ಯೆ ಪರಾಂತಕನು ರಾಜಧಾನಿ ತಂಜಾವುರಿನಿಂದ ತಲೆ ಮರೆಸಿಕೊಂಡು ಕಾಲಕಳೆದನೆಂದು ರಾಷ್ಟ್ರ ಕೂಟರ ಶಾಸನಗಳ ಮೂಲಕ ತಿಳಿದು ಬರುತ್ತದೆ. ಹೀಗಾಗಿ ತೆಕ್ಕೊಲಂ ಯುದ್ಧ ಚೋಳ ರಾಜ್ಯದ ನಿರ್ಣಾಯಕ ಯುದ್ಧವೆಂದು ಹೇಳಲಾಗಿದೆ.

ಶೈವ ಧರ್ಮಿಯನಾಗಿದ್ದ ಪಾರಾಂತಕನು ಹಲವಾರು ಶಿವಾಲಯಗಳನ್ನು ನಿರ್ಮಿಸಿದ್ದಾನೆ. ಚಿದಂಬರು ದೇವಾಲಯಕ್ಕೆ ಚಿನ್ನದ ತಗಡನ್ನು ಹೊದಿಸಿದನು. ತನ್ನ ಆಳ್ವಿಕೆಯ ಉದ್ದಕ್ಕೂ ಏಳು ಬೀಳುಗಳು ಮಧ್ಯೆ ಜೀವಿಸಿರುವ ಈತನು ಕೊನೆ ದಿನಗಳಲ್ಲಿ ರಾಷ್ಟ್ರಕೂಟರ ಅರಸ ಕೃಷ್ಣನ ಮರಣದ ನಂತರ ಚೋಳರ ಕೆಲವು ಭಾಗಗಳನ್ನು ಪುನಃ ಪಡೆದು ಕಳೆದ ಸಾಮ್ರಾಜ್ಯದ ಪುನ: ಸ್ಥಾಪನೆಗೆ ಕಾರಣೀಭೂತನಾದನು. ಕಾಳಾಮುಖ ಮತ್ತು ಪಾಶುಪತ ಶಿವಾಲಯಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ತನ್ನ ಆಳ್ವಿಕೆಯ ಕೊನೆಯ ಕಾಲ ಶಾಂತಿಯಿಂದ ಕಳೆದನೆಂದು ಇತಿಹಾಸಕಾರರು ಹೇಳುತ್ತಾರೆ. ಚೋಳರ ಸ್ಥಳೀಯ ಆಡಳಿತವನ್ನು ತಿಳಿಹೇಳುವ ಪ್ರಸಿದ್ಧಶಾಸನ ತನ್ನ ಆಡಳಿತದ 14ನೇ ವರ್ಷದಲ್ಲಿ ಚಂಗಲ್ ಪೇಟ ಜಿಲ್ಲೆಯ ಉತ್ತರ್ಮೇರುರ ಎಂಬಲ್ಲಿ ಎರಡು ಶಾಸನಗಳು ಕೆತ್ತಿಸಿರುವ ಕೀರ್ತಿ ಮೊದಲನೇ ಪರಾಂತಕನಿಗೆ ಸಲ್ಲುತ್ತದೆ.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಒಂದನೆ ರಾಜ ರಜ ಚೋಳ :

ಚೋಳರ ಇತಿಹಾಸದಲ್ಲಿ ಅದ್ವಿತೀಯ ಸಾಧನೆಗೈದು ಪ್ರಸಿದ್ದಿಯನ್ನು ಪಡೆದ ರಾಜನು ತನ್ನ ತಂದೆ ಪಾರಂತಕನ ಕಾಲದಲ್ಲಿ ಇವರ ಮನೆತನಕ್ಕೆ ಕವಿದಿದ್ದ ಕತ್ತಲೆಯನ್ನು ಹೊಡೆದೋಡಿಸಿ ಇತಿಹಾಸದ ಪುಟಗಳಲ್ಲಿ ಚೋಳರು ಮೆರೆಯುವಂತೆ ಮಾಡಿದನು. ತಂದೆ ಪಾರಂತಕ ಮತ್ತು ತಾಯಿ ದಾನವನ್ ಮಹಾದೇವಿಯರ ಮಗನಾಗಿ ಜನಿಸಿದ ರಾಜ ರಾಜನು ಅರಸನಾಗುವದಕ್ಕಿಂತ ಮೊದಲೇ ತನ್ನ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಯುದ್ಧ ಕೌಶಲ್ಯದಲ್ಲಿ ನಿಪುಣನಾಗಿದ್ದನು. ಆಡಳಿತ ಮತ್ತು ಪ್ರಜೆಗಳ ಹಿತರಕ್ಷಣೆಯ ಬಗ್ಗೆ ಕಾಳಜಿ ವಹಿಸಿದ್ದನು ತಮ್ಮ ರಾಜ್ಯಕ್ಕೆ ಹಿಂದೆ ಕಿರುಕುಳ ಕೊಟ್ಟಿರುವ ಅರಸು ಮನೆತನಗಳ ಬಗ್ಗೆ ದ್ವೇಷ ಆತನಲ್ಲಿ ಉಕ್ಕುತ್ತಿತ್ತು. ಆ ಅರಸರ ವಿರುದ್ಧ ಸೇಡು ತೀರಿಸಿಕೊಳ್ಳುವವರೆಗೆ ರಾಜರಾಜನಿಗೆ ಸಮಾಧಾನ ಇರಲ್ಲಿಲ್ಲ.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ರಾಜರಾಜನು ಪಟ್ಟಕ್ಕೆ ಬಂದನಂತರ ವಿಳಂಬ ಮಾಡದೆ ಕ್ರಮಬದ್ಧವಾದ ದಂಡಯಾತ್ರೆಗಳನ್ನು ಕೈಕೊಂಡು ಯಶಸ್ವಿಯಾದನು ಅವುಗಳಲ್ಲಿ ಮುಖ್ಯವಾದ ದಿಗ್ವಿಜಯಗಳೆಂದರೆ,

ದಕ್ಷಿಣ ದಂಡಯಾತ್ರೆ:

ಚೇರರ ಮೇಲೆ ದಾಳಿ:

ಚೇರರ ರಾಜ್ಯದ ಅರಸರು ಆಧುನಿಕ ಕೇರಳದ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದರು ಇವರು ಪ್ರಬಲ ನೌಕಾದಳವನ್ನು ಹೊಂದಿ ಕುಂಡಲುಶಾಲು ಬಂದರು ಸ್ಥಾಪಿಸಿ ಅದು ನೌಕಾ ನೆಲೆಯಾಗಿಸಿದ್ದರು ಅದನ್ನು ವಶಪಡಿಸಿಕೊಂಡು ವಿದೇಶಗಳೊಡನೆ ಸಂಪರ್ಕವೇರ್ಪಡಿಸಲು ಸುಲಭ ಮಾರ್ಗವಾಗುವದೆಂದು ಯೋಚಿಸಿ ರಾಜರಾಜನು ಚೇರರ ನೌಕಾಯಾನದ ಮೇಲೆ ದಾಳಿ ಮಾಡಿ, ಅಲ್ಲಿನ ನೌಕಾ ಪಡೆ ಶರಣಾಗುವಂತೆ ಮಾಡಿದ್ದಲ್ಲದೆ ಚೇರ ಅರಸ ಭಾಸ್ಕರ ರವಿವರ್ಮನ್ನು ಚೋಳರ ಸಾಮಂತನಾಗಿಸಿಕೊಂಡನು. ಇದರಿಂದಾಗಿ ಕೇರಳದ ಹಲವು ಭಾಗಗಳು ಚೋಳರ ವಶವಾದವು ಇದರ ನೆನಪಿಗೊಸ್ಕರ “ಕಾನ್ಗಳುರ್ಶಾಲೈಕ್ಕಳ್ ಮರುತ್ತ” ಎಂಬ ಬಿರುದನ್ನು ಧರಿಸಿದನು. ಇದರ ಅರ್ಥ ಕಂಡಲೂರಲ್ಲಿನ (ಕಾನ್ಗಳೂರು) ಊಟೋಪಚಾರದ ಗೃಹದಲ್ಲಿನ ತಟ್ಟೆಗಳನ್ನು ಒಡೆದು ಹಾಕಿ ಸಂತೋಷ ಪಟ್ಟನೆಂದು ಅಥವಾ ಕಂಡಲೂರಿನಲ್ಲಿದ್ದ ಆಹಾರ ಕೊಡುವ ವ್ಯವಸ್ಥೆಯನ್ನು ರದ್ದು ಪಡಿಸಿದನೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆದರೆ ಈ ವಿವರಣೆ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ.

ಮಧುರೈ ಪಾಂಡ್ಯರು:

ಪಾಂಡ್ಯರು ತಮಿಳುನಾಡಿನ ಮಧುರೈಯಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ರಾಜರಾಜನು ತನ್ನ ಆಧೀನದಲ್ಲಿ ಪಾಂಡ್ಯ ಅರಸನಾದ ಅಮರಭುಜಂಗನನ್ನು ಸಾಮಂತನಾಗಿರುವಂತೆ ಒತ್ತಾಯಿಸಿದನು. ಇದಕ್ಕೆ ಮಣಿಯದ ಭುಜಂಗನ ಮೇಲೆ ದಾಳಿ ಮಾಡಿ ರಾಜಧಾನಿ ಮಧುರೆಯನ್ನು ವಶಪಡಿಸಿಕೊಂಡು ಅರಸ ಭುಜಂಗನನ್ನು ಸೆರೆಯಾಳಾಗಿಸಿದನು. ಹೀಗಾಗಿ ಪಾಂಡ್ಯರು ಚೋಳರ ಆದೀನರಾಗಿ ಬಾಳಬೇಕಾಯಿತು.

ಮಲೆನಾಡಿನ ದಾಳಿ:

ಕರ್ನಾಟಕದ ಪ್ರದೇಶದ ಮಲೆನಾಡಿನ ಮೇಲೆ ಆಕ್ರಮಣ ಮಾಡಿ. ಅಲ್ಲಿ ತನ್ನ ಅಧಿಕಾರ ಸ್ಥಾಪಿಸಿದನು. ಅಂದು ರಾಜರಾಜನು ದಾಳಿ ಮಾಡಿದ ಪ್ರದೇಶ ಇಂದಿನ ಕೊಡಗು ಜಿಲ್ಲೆಯ ಪ್ರದೇಶವಾಗಿತ್ತೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಸಿಂಹಳದ ದಾಳಿ:

ಚೋಳರ ಕೀರ್ತಿ ಕೇವಲ ದಕ್ಷಿಣ ಭಾರತಕಷ್ಟೇ ಸೀಮಿತಗೊಳಿಸದೆ ಭಾರತದಾಚೆಗಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮಹಾತ್ವಾಕಾಂಕ್ಷೆ ಹೊಂದಿದ್ದ ರಾಜರಾಜನು ಸಿಂಹಳದಲ್ಲಿ ಆಳುತ್ತಿದ್ದ. ಐದನೇ ಮಹೇಂದನ ಮೇಲೆ ಆಕ್ರಮಣ ನಡೆಸಿದನು. ರಾಜರಾಜನ ಸೈನ್ಯಕ್ಕೆ ಹೆದರಿದ ಸಿಂಹಳ ಅರಸ ಮಹೇಂದ್ರನು ಹೆದರಿಕೊಂಡು ದಟ್ಟವಾದ ಕಾಡಿನಲ್ಲಿ ತಲೆಮರೆಸಿಕೊಂಡನು. ಆಗ ರಾಜರಾಜನ ಸೈನ್ಯ ರಾಜಧಾನಿ ಅನುರಾಧಪುರವನ್ನು ಲೂಟಿ ಮಾಡಿ ಸಂಪೂರ್ಣವಾಗಿ ಆ ನಗರವನ್ನು ನೆಲಸಮಗೊಳಿಸಿದರು. ಇದರಿಂದಾಗಿ ಸಿಂಹಳದ ಉತ್ತರ ಭಾಗ ಚೋಳರ ಆಧೀನಕ್ಕೆ ಬಂದಿತು. ಆ ಪ್ರದೇಶವನ್ನು ತನ್ನ ಹಿಡಿತದಲ್ಲಿರಲು ಪೊಲನ್ನೂರು ಎಂಬ ಪಟ್ಟಣವನ್ನು ಆ ಪ್ರಾಂತದ ರಾಜಧಾನಿಯನ್ನಾಗಿಸಿದನು. ಈ ನಗರಕ್ಕೆ ಜಗನ್ನಾಥ ಮಂಗಲ ಎಂದು ನಾಮಕರಣ ಮಾಡಿದನು. ಸಿಂಹಳದ ಇಡಿ ಉತ್ತರ ಭಾಗವನ್ನು “ಮುಮ್ಮಡಿ ಚೋಳ ಮಂಡಲ”ವೆಂದು ಕರೆಯಲಾಯಿತು. ಈ ವಿಜಯೋತ್ಸವದ ನೆನಪಿಗಾಗಿ ಆ ಪ್ರದೇಶದಲ್ಲಿ ಶಿವದೇವಾಲಯಯೊಂದನ್ನು ನಿರ್ಮಿಸಿದನು.

ಗಂಗರ ಮೇಲೆ ದಾಳಿ:

ಚೇರ, ಪಾಂಡ್ಯ ಮತ್ತು ಸಿಂಹಳದ ಮೇಲಿನ ದಾಳಿಗಳ ನಂತರ ರಾಜರಾಜನು ಕರ್ನಾಟಕ ಗಂಗ ಅರಸರ ಮೇಲೆ ತನ್ನ ದೃಷ್ಟಿ ಹಾಯಿಸಿದನು. ಗಂಗರಸರ ಮೇಲೆ ದಾಳಿ ಮಾಡುವ ಮುಖ್ಯವಾದ ಕಾರಣವೆಂದರೆ ತನ್ನ ಸಾಮ್ರಾಜ್ಯ ವಿಸ್ತರಣೆ ಜೊತೆಗೆ ಹಿಂದೆ ಗಂಗರ ರಾಜನಾದ ಎರಡನೇ ಭೂತುಗನು ರಾಷ್ಟ್ರಕೂಟರ ಪರವಹಿಸಿ ಚೋಳ ಅರಸ ಪರಾಂತಕನ ಮಗನಾದ ಎರಡನೆ ಆದಿತ್ಯನನ್ನು ರಣರಂಗದಲ್ಲಿಯೇ ಸಂಹರಿಸಿದ್ದರು. ಇದರ ಸೇಡಿನ ಕಿಡಿ ರಾಜರಾಜನಲ್ಲಿ ಭುಗಿಲೆದ್ದಿತು. ಅದರ ಸೇಡು ತೀರಿಸಿಕೊಳ್ಳುವವರೆಗೆ ಈತನಿಗೆ ಸಮಾಧಾನವಿರಲಿಲ್ಲ. ಈ ಕಾರಣದಿಂದಾಗಿ ರಾಜರಾಜನು ಗಂಗರ ಮೇಲೆ ದಾಳಿ ಮಾಡಿ ಗಂಗ ಸೈನ್ಯದ ಬಲಾಡ್ಯ ದಂಡ ನಾಯಕ ರಣವಿಕ್ರಾಂತನೆಂಬ ಬಿರುದು ಹೊಂದಿರುವ ಚಾವುಂಡರಾಯನನ್ನು ಸದೆ ಬಡೆಯಲಾಯಿತು. ದಂಡನಾಯಕನ ಮರಣದ ನಂತರ ಎದುರಾಳಿಯಾಗಿ ಬಂದ ಗಂಗ ಅರಸ ರಕ್ಕಸಗಂಗನು ರಾಜರಾಜನ ಪರಾಕ್ರಮಕ್ಕೆ ತಕ್ಕ ವೀರಯೋದನಾಗಿರಲಿಲ್ಲ. ಕ್ರಿ.ಶ. 992ರ ವೇಳೆಗೆ ರಕ್ಕಸಂಗಂಗ ಸೋತು ಶರಣಾದನು ಅಲ್ಲದೆ ಆತನ ವಶದಲ್ಲಿದ್ದ ಗಂಗವಾಡಿಯನ್ನು ರಾಜರಾಜನಿಗೆ ಬಿಟ್ಟು ಕೊಟ್ಟನು. ಕೆಲ ಕಾಲದ ನಂತರ ಅಂದರೆ 1004ರಲ್ಲಿ ಗಂಗರು ಪುನಃ ಅವರ ಸಾಮಂತರಾಗಿದ್ದ ಹೊಯ್ಸಳರು, ನೊಳಂಬರು ಒಟ್ಟಾಗಿ ಸೇರಿ ಚೋಳರ ಮೇಲೆ ದಾಳಿಯಿಟ್ಟರು. ಈ ದಾಳಿಯಲ್ಲಿ ರಾಜರಾಜನು ತನ್ನ ಮಗ ರಾಜೇಂದ್ರ ಚೋಳನ ಮುಂದಾಳತ್ವದಲ್ಲಿ ಅಪ್ರಮೇಯ ಎಂಬ ದಂಡನಾಯಕನೊಂದಿಗೆ ಒಕ್ಕೂಟ ಸೈನ್ಯದೊಂದಿಗೆ ಹೋರಾಡಿ ಸಂಪೂರ್ಣವಾಗಿ ಗಂಗರನ್ನು ಸದೆಬಡೆದರು. ಈ ನಿರ್ಣಾಯಕ ಯುದ್ಧದಿಂದಾಗಿ ಗಂಗರಾಜರ ರಾಜಧಾನಿ ತಲಕಾಡನ್ನು ವಶಪಡಿಸಿಕೊಂಡು ಅದಕ್ಕೆ ರಾಜರಾಜಪುರವೆಂದು ಹೆಸರಿಡಲಾಯಿತು. ಹೀಗಾಗಿ ಗಂಗರಾಜ್ಯದ ಬಹುಭಾಗ ಚೋಳರ ವಶವಾಯಿತು.

ರಾಜರಾಜ ಮತ್ತು ವೆಂಗಿ ಮಂಡಲ:

ಆಂಧ್ರ ದೇಶದ ವೆಂಗಿ ಮಂಡಲ ಪ್ರದೇಶವನ್ನು ದಾನಾರ್ಣನೆಂಬ ಅರಸ ಆಳುತ್ತಿದ್ದನು ಈತನ ನಂತರ ಉತ್ತರಾಧಿಕಾರತ್ವಕ್ಕಾಗಿ ಅವನ ಇಬ್ಬರು ಮಕ್ಕಳಲ್ಲಿ ಸಿಂಹಾಸನಕ್ಕಾಗಿ ಆಂತರಿಕ ಕಲಹವರ್ಪಟ್ಟಿತ್ತು. ಇದೆ ಸಮಯವನ್ನು ಕಾಯುತ್ತಿದ್ದ ರಾಜರಾಜನಿಗೆ ಆಂಧ್ರದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಸುವರ್ಣ ಅವಕಾಶ ಒದಗಿ ಬಂದಿತು. ದಾನಾರ್ಣನ ಮಗ ಶಕ್ತಿವರ್ಮನು ಚೋಳರ ಸಹಾಯ ಯಾಚಿಸಿದರೆ ಇನ್ನೊಬ್ಬ ಮಗ ಜಾತಚೋಡಭೀಮ ಚಾಲುಕ್ಯರ ಸಹಾಯ ಪಡೆದನು ಹೀಗಾಗಿ ಚಾಲುಕ್ಯ ಚೋಳರ ಈ ಕದನ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿತು. ಈ ಯುದ್ಧದಲ್ಲಿ ಚೋಳರು ಮೆಲುಗೈ ಸ್ಥಾಪಿಸಿ ಶಕ್ತಿವರ್ಮನನ್ನು ಅರಸನನ್ನಾಗಿಸಿದರು. ಆಗ ಶಕ್ತಿವರ್ಮನು ಚೋಳರ ಅಧೀನ ಅರಸನಾಗಿರಲು ಒಪ್ಪಿಕೊಂಡನು. ದೂರದರ್ಶಿಯಾದ ರಾಜರಾಜನು ವೆಂಗಿ ಮಂಡಲ ತನ್ನ ಕೈ ತಪ್ಪಿಹೋಗಬಾರದೆಂಬ ಉದ್ದೇಶದಿಂದ ಶಕ್ತಿವರ್ಮನ ಮಗನಾದ ವಿಮಲಾದಿತ್ಯನಿಗೆ ತನ್ನ ಮಗಳಾದ ಕುಂದವೆಯನ್ನು ಕೊಟ್ಟು ಶಕ್ತಿ ವರ್ಮನೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದನು. ಇದರಿಂದಾಗಿ ವೆಂಗಿ ಮಂಡಲ ಚಾಲುಕ್ಯರ ಹಿಡಿತದಿಂದ ಪಾರಾಗಿ ಚೋಳರ ಆಧಿನಕ್ಕೆ ಒಳಪಟ್ಟಿತು. ವೆಂಗಿ ಚೋಳರ ಶಾಶ್ವತ ರಾಜ್ಯವಾಗಿ ಮುಂದುವರೆಯಿತು. ಇದರಿಂದಾಗಿ ಚೋಳರು ಆಂಧ್ರದಲ್ಲಿ ತಮ್ಮ ಪರಮಾಧಿಕಾರ ಸ್ಥಾಪಿಸುವಲ್ಲಿ ಯಶಸ್ವಿಯಾದರು.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ
ಕಳಿಂಗ:

ಆಂಧ್ರದ ವೆಂಗಿ ಮಂಡಲದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದ ನಂತರ ರಾಜರಾಜನು ಉತ್ತರದ ಕಳಿಂಗದ ಮೇಲೆ ಯುದ್ಧ ನಡೆಸಿದನೆಂದು ತಿಳಿದು ಬರುತ್ತದೆ. ಅನಂತರ ಕಳಿಂಗದ ಸುತ್ತಮುತ್ತಲಿನ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಮಹತ್ವಕಾಂಕ್ಷೆಯಾದ ರಾಜ ರಾಜನು ಮಾಲ್ಡಿವ್ ದ್ವೀಪಗಳನ್ನು ವಶಪಡಿಸಿಕೊಂಡನು. ಈ ವೇಳೆಗಾಗಲೇ ಚೋಳರ ನೌಕಾ ಪಡೆ ಪ್ರಬಲವಾಗಿತ್ತೆಂಬುದಕ್ಕೆ ಈ ದಿಗ್ವಿಜಯವೇ ಸಾಕ್ಷಿಯಾಗಿದೆ.

ರಟ್ಟವಾಡಿಯ ಆಕ್ರಮಣ:

ಅನೇಕ ವಿಜಯಗಳ ಸರಮಾಲೆಯೊಂದಿಗೆ ರಾಜರಾಜನು ರಟ್ಟವಾಡಿಯನ್ನು ಆಕ್ರಮಿಸಲು ಪ್ರಯತ್ನಿಸಿದನು. ಆದರೆ ಆ ವೇಳೆಗಾಗಲೇ ಕಲ್ಯಾಣದಲ್ಲಿ ತೈಲಪನೆಂಬುವವನಿಂದ ಚಾಲುಕ್ಯ ಸಾಮ್ರಾಜ್ಯ ಸ್ಥಾಪಿತವಾಗಿದ್ದು. ತೈಲಪ ಮತ್ತು ಆತನ ಮಗ “ಇರಿವಬೆಡಿಂಗ ಸತ್ಯಾಶ್ರಮ ಇಬ್ಬರು ಸೇರಿ ಚೋಳ ರಾಜ ರಾಜನ ಸೈನ್ಯಕ್ಕೆ ಹಿಮ್ಮೆಟ್ಟಿಸಿದರು. ಈ ಯುದ್ಧ ಯಾವುದೆ ಗುಂಪಿಗೆ ಜಯ ಸಿಗದಿದ್ದಾಗ ಚೋಳರ ಸೈನ್ಯ ಹಿಂದಿರುಗಬೇಕಾಯಿತು. ಆದಾಗ್ಯೂ ಕುಂತಳ ಪ್ರದೇಶದ ಹಲವಾರು ಹಳ್ಳಿಗಳು ಚೋಳರ ದಾಳಿಗೆ ಸಿಕ್ಕ ಹಾಳಾಗಿದ್ದವು. ಈ ಯುದ್ಧದಲ್ಲಿ ಸೊರೆಹೊಡೆದ ಅಪಾರ ಸಂಪತ್ತಿನಿಂದಲೆ, ತಂಜಾವುರಿನಲ್ಲಿ ರಾಜರಾಜೇಶ್ವರ ದೇವಾಲಯ ನಿರ್ಮಿಸಿದನೆಂದು ಹೇಳಲಾಗಿದೆ. ರಾಜರಾಜನ ಕಾಲಕ್ಕೆ ಆರಂಭವಾದ ಚೋಳ ಮತ್ತು ಕಲ್ಯಾಣಿ ಚಾಲುಕ್ಕರ ಹಗೆತನ ಸುಮಾರು ವರ್ಷಗಳ ಕಾಲ ಮುಂದುವರೆದು ಎರಡು ಸಾಮ್ರಾಜ್ಯಗಳು ಅವಸಾನ ಹೊಂದುವವರೆಗೆ ಒಂದುಗೂಡಲಿಲ್ಲ.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ಶೂರ ಅರಸ ರಾಜರಾಜನು ಚೋಳ ರಾಜ್ಯದ ಇತಿಹಾಸದಲ್ಲಿ ಸುಮಾರು 30 ವರ್ಷಗಳ ಕಾಲ ವಿಜೃಂಭಿಸಿ ಚೋಳ ಸಾಮ್ರಾಜ್ಯ ಆಂಧ್ರ, ತಮಿಳುನಾಡು, ಕರ್ನಾಟಕದ ಹಲವು ಭಾಗಗಳಲ್ಲದೆ ಸಾಗರದಾಚೆಗಿನ ಸಿಂಹಳ ಮತ್ತು ಮಾಲ್ಡಿವ್ ದ್ವೀಪಗಳ ಒಡೆಯನಾಗಿದ್ದನು. ಈತನನ್ನು ದಕ್ಷಿಣ ಭಾರತದ ಅಜೇಯ ಸಾಮ್ರಾಜ್ಯದರಸ ಎಂದು ಇತಿಹಾಸಕಾರರು ಹೊಗಳಿದ್ದಾರೆ. ಉತ್ತರದ ಓರಿಸ್ಸಾದಿಂದ ದಕ್ಷಿಣದ ಸಿಂಹಳದವರೆಗೆ ಪೂರ್ವದ ಲಕ್ಷದ್ವೀಪ ಮಾಲಿವಗಳಿಂದ ಪಶ್ಚಿಮ ಕೊಡಗಿನವರೆಗೆ ರಾಜರಾಜನ ಕಾಲದಲ್ಲಿ ಚೋಳ ಸಾಮ್ರಾಜ್ಯ ಹರಡಿತ್ತು.

ರಾಜರಾಜ ಚೋಳನ ದಕ್ಷಿಣಭಾರತ ಆಳಿದ ಅರಸರಲ್ಲಿಯೇ ಪರಾಕ್ರಮಿ ಎಂದು ಹೆಸರುವಾಸಿಯಾಗುವದರ ಜೊತೆಗೆ ದಕ್ಷ ಆಡಳಿತವನ್ನು ಸ್ಥಾಪಿಸಿದನು. ತನ್ನ ಸಾಮ್ರಾಜ್ಯದಲ್ಲಿ ಪ್ರಜೆಗಳು ಶಾಂತಿಸುಭಿಕ್ಷೆಯಿಂದ ಇರಲು ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರನಾಗಿದ್ದನು.

ತನ್ನ ಸಾಮ್ರಾಜ್ಯದಲ್ಲಿರುವ ಭೂಮಿಯನ್ನು ಸಾಗುವಳಿಗೊಳಿಸಿ ವ್ಯವಸಾಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದನು. ರಾಜ್ಯದಲ್ಲಿ ಅನೇಕ ಕಡೆ ಕೆರೆಕಟ್ಟೆಗಳನ್ನು ನಿರ್ಮಿಸಿ ನೀರಾವರಿಗೆ ಅನುಕೂಲ ಮಾಡಿದನು. ಭೂಮಿಯ ಫಲವತ್ತತ್ತೆನುಗುಣವಾಗಿ ವಿಂಗಡಿಸಿ ಲಾಭಕ್ಕನುಗುಣವಾಗಿ ಭೂಕಂದಾಯವನ್ನು ವಿಧಿಸುತ್ತಿದ್ದನು. ಶೈವ ಧರ್ಮಿಯನಾಗಿದ್ದರಿಂದ ಆ ಪಂಥದ ಬೆಳೆವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದನು. ಈಶ್ವರನ ಪರಮಭಕ್ತನಾಗಿದ್ದ ರಾಜರಾಜನು ಇತರೆ ಧರ್ಮಗಳಿಗೂ ಕಡೆಗಣಿಸಿರಲಿಲ್ಲ. ತನ್ನ ಸಾಮ್ರಾಜ್ಯದಲ್ಲಿ ನಾಗಪಟ್ಟಣದ ಬಳಿಯ ಶ್ರೀವಿಜಯ್ ಸಾಮ್ರಾಜ್ಯದ ಅರಸ ಶ್ರೀಮಾರವಿಜಯೊತ್ತುಂಗವರ್ಮನ್ ಎಂಬುವವನು ಕಟ್ಟಿಸಿದ “ಚುಡಾಮಣಿ” ಎಂಬ ಬೌದ್ಧ ವಿಹಾರದ ರಕ್ಷಣೆ ಹಾಗೂ ಉಸ್ತುವಾರಿ ನೋಡಿಕೊಳ್ಳಲು ಮತ್ತು ಅದರ ಖರ್ಚು ವೆಚ್ಚಗಳಿಗಾಗಿ ಒಂದು ಗ್ರಾಮವನ್ನೇ ದತ್ತಿ ನೀಡಿದನೆಂಬುದಾಗಿ ತಿಳಿದು ಬರುತ್ತದೆ. ಇದು ರಾಜ ರಾಜನ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ.

ರಾಜೇಂದ್ರ ಚೋಳ

ಒಂದನೆ ರಾಜರಾಜನ ನಂತರ ಪಟ್ಟಕ್ಕೆ ಬಂದ ರಾಜೇಂದ್ರ ಚೋಳನು ದಕ್ಷ ಮತ್ತು ಪರಾಕ್ರಮಿ ಅರಸನೆಂದೆ ಖ್ಯಾತಿ ಪಡೆದಿದ್ದಾನೆ. ತನ್ನ ತಂದೆಯ ಆಳ್ವಿಕೆ ಕಾಲಕ್ಕೆ ಯುವರಾಜನಾಗಿ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ಸಾಮ್ರಾಜ್ಯ ವಿಸ್ತರಣಾ ನೀತಿ ಚೆನ್ನಾಗಿ ಅರಿತುಕೊಂಡಿದ್ದನು. ಈತನ ಕಾಲದಲ್ಲಿ ಕೈಗೊಂಡ ಅನೇಕ ದಿಗ್ವಿಜಯಗಳು ಚೋಳರ ಕೀರ್ತಿ ಪ್ರತಿಷ್ಠತೆಗಳನ್ನು ಹೆಚ್ಚಿಸಿದವು. ಹೀಗಾಗಿ ರಾಜೇಂದ್ರ ಚೋಳನ ಆಳ್ವಿಕೆ ದಕ್ಷಿಣ ಭಾರತದಲ್ಲಿ ಅಪ್ರತಿಮ ಶೂರ ಮತ್ತು ದಕ್ಷತೆಗೆ ಹೆಸರಾಯಿತು. ರಾಜೇಂದ್ರ ಚೋಳನ ಅಸಾಧರಣ ಯುದ್ಧ ಕೌಶಲ್ಯ ಮತ್ತು ಆಡಳಿತ ಕ್ರಮವನ್ನು ಚೋಳರ ಅನೇಕ ಶಾಸನಗಳಲ್ಲಿ ನೋಡಬಹುದು. ಪಟ್ಟಕ್ಕೆ ಬಂದ ಆರಂಭದಲ್ಲಿ ಮಣ್ಣೆಕಡಂ (ಮಾನ್ಯಖೇಟೆ) ಬನಾಸಿ ಮತ್ತು ಎಡತೊರೈನಾಡು (ಗಂಗವಾಡಿಯ ಭಾಗ) ಮತ್ತು ಕೊಲ್ಲಿಪಾಕ ಪ್ರದೇಶಗಳು ತನ್ನ ವಶಕ್ಕೆ ತೆಗೆದುಕೊಂಡನು. ತನ್ನ ತಂದೆಯ ಕಾಲಕ್ಕೆ ಗೆದ್ದ ಕೆಲವು ಪ್ರದೇಶಗಳು ಇನ್ನೂ ಸಂಪೂರ್ಣವಾಗಿ ಚೋಳರ ವಶದಲ್ಲಿರಲಿಲ್ಲ ಅವೆಲ್ಲವು ಚೋಳರ ಅಧೀನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾದವು.

ಸಿಂಹಳ ದಾಳಿ ೧೦೧೮:

ರಾಜೇಂದ್ರ ಚೋಳನು ಅರಸನಾದ ಕೆಲವೇ ವರ್ಷಗಳಲ್ಲಿ ಸಿಂಹಳದ ಮೇಲೆ ದಾಳಿ ಮಾಡಿದನು. ತಂದೆ ರಾಜರಾಜನ ಕಾಲಕ್ಕೆ ಸಿಂಹಳದ ಅರಸ ಮಹಿಂದ್ರನು ಸೋತು ಶರಣಾಗಿ ಚೋಳರ ಅದಿಪತ್ಯವನ್ನು ಒಪ್ಪಿಕೊಂಡಿದ್ದನು. ಆದರೆ ರಾಜೇಂದ್ರನು ಪಟ್ಟಕ್ಕೇರಿದಾಗ ಸಿಂಹಳದ ದಕ್ಷಿಣ ಭಾಗದಲ್ಲಿ ತನ್ನ ಪ್ರಭಾವವನ್ನು ಬೀರುವದರ ಜೊತೆಗೆ ಚೋಳರ ಹಿಡಿತದಿಂದ ಪಾರಾಗಲು ಹವಣಿಸತೊಡಗಿದನು. ಇದನ್ನು ಮನಗಂಡ ರಾಜೇಂದ್ರ ಚೋಳನು ಅಪಾರ ಸೈನ್ಯದೊಂದಿಗೆ ಸಿಂಹಳಕ್ಕೆ ಮುತ್ತಿಗೆ ಹಾಕಿ ಮಹೇಂದ್ರನನ್ನು ಸಂಪೂರ್ಣವಾಗಿ ಸೋಲಿಸಿ ಆತನನ್ನು ಸೇರೆ ಹಿಡಿದು ರಾಜೇಂದ್ರನ ಆಸ್ಥಾನಕ್ಕೆ ತಂದು ಚೋಳರ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮಾಡಲಾಯಿತು. ಅಲ್ಲದೆ ಸಿಂಹಳ, ಚೋಳರು ಸಾಮ್ರಾಜ್ಯದಲ್ಲಿ ಸಂಪೂರ್ಣವಾಗಿ ವಿಲೀನಗೊಳಿಸಲಾಯಿತು.

ಪಾಂಡ್ಯ ಮತ್ತು ಚೇರರ ಮೇಲೆ ದಾಳಿ:

ವೀರರಾಜೇಂದ್ರನು ಸಿಂಹಳದ ಮೇಲೆ ದಾಳಿಯಲ್ಲಿ ನಿರತನಾಗಿದ್ದಾಗ ಇತ್ತ ಪಾಂಡ್ಯ ಮತ್ತು ಚೇರರು ಸ್ವತಂತ್ರರಾಗಲು ಹವಣಿಸಿದರು. ಇದನ್ನರಿತ ರಾಜೇಂದ್ರ ಚೋಳನು ಅವರ ಮೇಲೆ ದಾಳಿ ಮಾಡಿ ಪಾಂಡ್ಯ ಮತ್ತು ಚೇರರನ್ನು ಸದೆಬಡೆದು ಚೋಳ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದನು. ಗೆದ್ದ ಪ್ರದೇಶಗಳ ಆಡಳಿತ ಚೋಳರ ಕೈಯಲ್ಲಿದ್ದರೆ ಮುಂದೆ ಆ ಪ್ರದೇಶಗಳು ಕೈ ತಪ್ಪುವ ಸಂದರ್ಭ ಬರಲಾರದು ಎಂಬ ಉದ್ದೇಶದಿಂದ ತನ್ನ ಮಗ ಜಟಾವರ್ಮಸುಂದರ ಎಂಬುವವನನ್ನು ಚೋಳಪಾಂಡ್ಯನೆಂಬ ಹೆಸರಿನಿಂದ ಪಾಂಡ್ಯ ರಾಜ್ಯದಲ್ಲಿ ರಾಜ ಪ್ರತಿನಿಧಿಯಾಗಿ ನೇಮಿಸಿದನು. ಇದು ರಾಜೇಂದ್ರ ಚೋಳನ ಯುದ್ಧ ನೀತಿಯ ಚಾಣಕ್ಷತನವೆಂದು ಹೇಳಬಹುದು.

ಕಲ್ಯಾಣಿ ಚಾಲುಕ್ಯ ಮತ್ತು ಚೋಳರು:

ದಕ್ಷಿಣದಲ್ಲಿ ಚೇರ, ಪಾಂಡ್ಯ ಮತ್ತು ಸಿಂಹಳಗಳ ಮೇಲೆ ಯುದ್ಧ ಮಾಡಿ ಅಲ್ಲಿನ ಗೊಂದಲವನ್ನು ನಿವಾರಿಸಿದ ಬೆನ್ನಲ್ಲೆ ಕಲ್ಯಾಣಿ ಚಾಲುಕ್ಯರ ಅರಸ ಜಯಸಿಂಹನು ಚೋಳ ಪ್ರದೇಶಗಳನ್ನು ಪಡೆಯುವ ಹವಣಿಕೆಯಲ್ಲಿದ್ದನು. ಆಗ ರಾಜೇಂದ್ರನು ಜಯಸಿಂಹನೊಡನೆ ಕಾದಾಡಬೇಕಾಯಿತು. ಆದರೆ ಈ ಯುದ್ಧದ ಬಗೆಗೆ ನಿಖರವಾದ ವಿವರಗಳು ದೊರೆತಿಲ್ಲ. ಚೋಳ ಸೈನ್ಯವನ್ನು ರಾಜೇಂದ್ರನು ಹಿಮ್ಮೆಟ್ಟಿಸಿದನು ಎಂದು ಶಾಸನ ವರ್ಣಿಸುತ್ತವೆ. ತಮಿಳು ಪ್ರಶಸ್ತಿಯೊಂದರ ಪ್ರಕಾರ ಮುಸಂಗಿವೆಂಬಲ್ಲಿ ಚೋಳರನ್ನು ಹೆಮ್ಮೆಟ್ಟಿ ತುಂಗಭದ್ರಾ ನದಿಯವರೆಗೆ ಚಾಲುಕ್ಯರ ತಮ್ಮ ಮೇರೆಗಳನ್ನು ವಿಸ್ತರಿಸಿದರೆಂದು ತಿಳಿಯುತ್ತದೆ. ಆದಾಗ್ಯೂ ಯುದ್ಧದ ನಿರ್ಣಯ ಮಾತ್ರ ಅಸ್ಪಷ್ಟವಾಗಿದೆ.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ವೆಂಗಿ ಮಂಡಲ :

ವೆಂಗಿ ಮಂಡಲದ ಸಾಮಂತನಾಗಿ ಆಳುತ್ತಿದ್ದ ರಾಜೇಂದ್ರ ಚೋಳನ ಭಾವಮೈದುನನಾದ ವಿಮಲಾದಿತ್ಯನು ಮರಣ ಹೊಂದಿದ್ದನು. ಆಗ ವಿಮಲಾದಿತ್ಯನ ದಾಯಾದಿಯಾದ ವಿಜಯಾದಿತ್ಯನು ವೆಂಗಿ ಮಂಡಲದ ಸಿಂಹಾಸನವನ್ನು ಪಡೆದುಕೊಳ್ಳಬೇಕೆಂಬ ಆಸೆಯಿಂದ ವಿಮಲಾದಿತ್ಯನ ಮಗ ಮತ್ತು ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ ನರೇಂದ್ರನ ಮೇಲೆ ದಾಳಿ ಮಾಡಲು ಯತ್ನಿಸತೊಡಗಿದನು. ಆಗ ವೆಂಗಿ ನರೇಂದ್ರನು ತನ್ನ ಸಹಾಯಕ್ಕಾಗಿ ರಾಜೇಂದ್ರ ಚೋಳನನ್ನು ವಿನಂತಿಸಿಕೊಂಡನು. ನರೇಂದ್ರನ ಸಹಾಯಕ್ಕಾಗಿ ರಾಜೇಂದ್ರ ಚೋಳ ಅಪಾರ ಸೈನ್ಯವನ್ನು ವೆಂಗಿ ಮಂಡಲಕ್ಕೆ ಕಳಿಸಿ, ವಿಜಯಾದಿತ್ಯನನ್ನು ಸೋಲಿಸಿ ನರೇಂದ್ರನನ್ನು ವೆಂಗಿ ಮಂಡಲದ ಸಾಮಂತನಾಗಿ ಮುಂದುವರೆಯುವಂತೆ ಮಾಡಿದ್ದಲ್ಲದೆ ಆತನೊಡನೆ ಉತ್ತಮ ಬಾಂದವ್ಯ ಬೆಳೆಸಲು ತನ್ನ ಮಗಳಾದ ಅಮ್ಮಂಗದೇವಿಯನ್ನು ನರೇಂದ್ರನಿಗೆ ಕೊಟ್ಟು ರಕ್ತ ಸಂಬಂಧಿಯಾಗಿಸಿಕೊಂಡನು. ಏತನ್ಮದ್ದೆ ಚೋಳರ ಮತ್ತು ಚಾಲುಕ್ಯರ ಹಗೆತನ ಮುಂದುವರೆದಿತ್ತು. ಜಯಸಿಂಹನು ಚೋಳರನ್ನು ಸೋಲಿಸಿದ್ದೇನೆ ಎಂಬ ಗರ್ವದಿಂದಿದ್ದಾಗಲೆ ವೆಂಗಿ ಮಂಡಲ ಚೋಳರ ಅಧೀನವಾದಾಗ ಚಾಲುಕ್ಯ ವಂಶದಲ್ಲಿ ಒಂದನೇ ಸೋಮೇಶ್ವರನು ಪಟ್ಟಕ್ಕೆ ಬಂದಿದ್ದನು. ವೆಂಗಿಯ ಸಿಂಹಾಸನ ವಿಜಯಾದಿತ್ಯನಿಗೆ ದೊರಕಿಸಿಕೊಡಲು. ನರೇಂದ್ರನ ಮೇಲೆ ದಾಳಿ ಮಾಡಿ ಕೆಲ ಕಾಲ ವೆಂಗಿ ಮಂಡಲ ಸೋಮೇಶ್ವರನ ಆಧೀನವಾಗಿ ವೆಂಗಿ ಮಂಡಲದಲ್ಲಿ ವಿಜಯಾದಿತ್ಯನು ರಾಜನೆಂದು ಘೋಷಿಸಲಾಯಿತು. ಇದರಿಂದ ಕೋಪಿತಗೊಂಡ ರಾಜೇಂದ್ರ ಚೋಳನು ಎರಡನೇ ಸಲ ವೆಂಗಿ ಮಂಡಲದ ಮೇಲೆ ದಾಳಿ ಮಾಡಿ ತನ್ನ ಅಳಿಯ ನರೇಂದ್ರನನ್ನು ಪುನಃ ಅಧಿಕಾರಕ್ಕೆ ತರಲು ಚಾಲುಕ್ಯ ಸೈನ್ಯವನ್ನು ಹಿಮ್ಮೆಟ್ಟಿಸಿ ಯಶಸ್ಸು ಸಾಧಿಸಿದನು. ವೆಂಗಿ ಪ್ರದೇಶ ಚೋಳರ ಚಾಲುಕ್ಯರ ಬಲಾ ಬಲ ಪರೀಕ್ಷೆಯ ಪ್ರದೇಶವಾಗಿತ್ತೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ರಾಜೇಂದ್ರ ಚೋಳನು ಚಾಲುಕ್ಕರನ್ನು ಯಾವುದೇ ಕಾರಣಕ್ಕೆ ವೆಂಗಿ ಪ್ರದೇಶದಲ್ಲಿ ಮತ್ತೆ ಪ್ರವೇಶಿಸದಂತೆ ನೋಡಿಕೊಂಡನು ಮತ್ತು ಚೋಳರ ಪರಮಾಧಿಕಾರ ಚಾಲುಕ್ಯರ ಕೈಗೆ ಹೋಗದಂತೆ ಎಚ್ಚರ ವಹಿಸಿದನು. ವೆಂಗಿ ಮಂಡಲದ ದಾಳಿಯ ನಂತರ ಸಾಮ್ರಾಜ್ಯ ವಿಸ್ತಾರದ ಮಹಾತ್ವಾಕಾಂಕ್ಷೆ ಹೊಂದಿರುವ ರಾಜೇಂದ್ರನು ತನ್ನ ದಾಳಿಯನ್ನು ಸಮರ್ಥ ದಂಡನಾಯಕರೊಂದಿಗೆ ಉತ್ತರದ ಬಂಗಾಳ ಮತ್ತು ಗಂಗಾನದಿಯವರೆಗೂ ಮುಂದುವರೆಸಿದನು. ಚೋಳ ಸೈನ್ಯವು ತನ್ನ ದಾಳಿಯುದ್ದಕ್ಕೂ ಪಂಜುಪಳ್ಳಿ, ಮೆಸ್ಸುನಿ, ಕಳಿಂಗ ಕೋಸಲ, ಅಂಗ ಮತ್ತು ವಂಗ ರಾಜ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ವಿಜಯ ಯಾತ್ರೆಯಲ್ಲಿ ಸೋತ ಅನೇಕ ಅರಸರು ಚೋಳರಿಗೆ ಅಪಾರ ಕಪ್ಪು ಕಾಣಿಕೆಯನ್ನು ಅರ್ಪಿಸಿದರು. ಈ ದಿಗ್ವಿಜಯ ರಾಜೇಂದ್ರನ ಆಳ್ವಿಕೆಯ ಪ್ರಮುಖ ವಿಜಯವೆಂದೇ ಬಣ್ಣಿಸಲಾಗಿದೆ. ಇದರ ನೆನಪಿನ ಕುರುಹು ಆಗಿ ಒಂದು ಹೊಸ ನಗರವನ್ನೇ ನಿರ್ಮಿಸಿದನು. ಗಂಗಾ ನದಿಯವರೆಗೆ ತನ್ನ ಸೈನ್ಯವು ದಿಗ್ವಿಜಯ ಸಾಧಿಸಿರುವ ನೆನಪಿಗಾಗಿ ನಿರ್ಮಿಸಿದ ನಗರಕ್ಕೆ `ಗಂಗೈಕೊಂಡಚೋಳಪುರಂ’ ಎಂದು ಕರೆದು ಅದನ್ನೆ ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿದನು. ಇಂದಿನ ತಿರುಚನಾಪಳ್ಳಿ ಜಿಲ್ಲೆಯಲ್ಲಿರುವ ಈ ರಾಜಧಾನಿಯ ಸಮೀಪ ಒಂದು ದೊಡ್ಡ ಕೆರೆಯನ್ನು ನಿರ್ಮಿಸಿ “ಚೋಳಗಂಗಂ” ಎಂದು ಹೆಸರಿಟ್ಟನು ಇದಕ್ಕೆ ಈ ಹೆಸರಿಡಲು ಕಾರಣವೆಂದರೆ ತನ್ನ ಉತ್ತರದ ದಿಗ್ವಿಜಯದ ಕಾಲಕ್ಕೆ ಗಂಗಾನದಿಯವರೆಗೂ ಯುದ್ಧ ಮಾಡಿ ಯಶಸ್ವಿಯಾಗಿ ಹಿಂದುರಿಗಿದಾಗ ಗಂಗಾಜಲವನ್ನು ತಂದು ದಕ್ಷಿಣದ ಈ ಕೆರೆಯಲ್ಲಿ ಬೆರೆಸಿದನಂತೆ.

ಕದರಮ್ ಯುದ್ಧ:

ಕ್ರಿ.ಶ. 1025ರಲ್ಲಿ ರಾಜೇಂದ್ರ ಚೋಳರು ಇತಿಹಾಸ ಪ್ರಸಿದ್ಧ ದಾಳಿ ಮಾಡಿದ್ದಾನೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಆ ಕಾಲದಲ್ಲಿ ಶೈಲೆಂದ್ರ ಸಾಮ್ರಾಜ್ಯವು, ತನ್ನ ನೌಕಾಪಡೆಗೆ ಪ್ರಸಿದ್ದಿಯಾಗಿತ್ತು. ಅಂತಹ ಬಲಿಷ್ಠ ಸಾಮ್ರಾಜ್ಯ ತನ್ನ ಅಧೀನದಲ್ಲಿರಬೇಕೆಂಬ ಮತ್ತು ರಾಜ್ಯ ವಿಸ್ತರಣಾ ನೀತಿ ಹೊಂದಿರುವ ರಾಜೇಂದ್ರ ಚೋಳನು ಅಪಾರವಾದ ಭೂಸೈನ್ಯ ಮತ್ತು ನೌಕಾಪಡೆಯನ್ನು ಕಳಿಸಿ ದಾಳಿಗೈದನು. ಚೋಳರು ನೌಕಾಪಡೆಯು ಬಂಗಾಳಕೊಲ್ಲಿಯನ್ನು ದಾಟಿ ಜಾವಾ ಸುಮತ್ರಾ ಮತ್ತು ಮಲಯಾ ಪರ್ಯಯಾ ದ್ವೀಪಗಳ ಮೇಲೆ ಆಕ್ರಮಣವೆಸಗಿತು. ಈ ಸೈನ್ಯಕ್ಕೆ ಹೆದರಿ ತತ್ತರಿಸಿದ ಶೈಲೆಂದ್ರ ಸೈನ್ಯವು ರಣರಂಗದಿಂದ ಪಲಾಯನ ಮಾಡಿತು. ಆಗ ಅದರ ರಾಜಧಾನಿಯಾದ ಕದರಮ್ ಅನ್ನು ಮುತ್ತಿ ಅಪಾರ ಸಂಪತ್ತು ಚೋಳರ ವಶವಾಯಿತು. ಅಲ್ಲದೆ ಅಲ್ಲಿನ ಅರಸ ವಿಜಯೊತ್ತಾಂಗನು ಸೋತು ಶರಣಾದನು. ಈ ವಿಜಯ ಚೋಳರ ಕೀರ್ತಿಪತಾಕೆಯು ದಶದಿಕ್ಕುಗಳಿಗೆ ಹಬ್ಬುವಂತೆ ಮಾಡಿತು. “ಈ ದಿಗ್ವಿಜಯ ಪ್ರಾಚೀನ ಭಾರತದ ಇತಿಹಾಸದಲ್ಲಿ ಎಣೆಯಿಲ್ಲದ ಘಟನೆಯಾಗಿದೆ’ ಎಂದು ಪ್ರೊ. ಬಿ. ಷೇಕ್‌ಅಲಿ ಅಭಿಪ್ರಾಯ ಪಡುತ್ತಾರೆ.

ದಕ್ಷಿಣದಲ್ಲಿ ಆಳಿದ ಅರಸರಲ್ಲಿಯೇ ಮಹಾ (ಶ್ರೇಷ್ಠ) ಪರಾಕ್ರಮಿ, ವೀರಯೋಧ, ಚೋಳ ಸಾಮ್ರಾಜ್ಯವನ್ನು ಗಟ್ಟಿಯಾದ ನೆಲೆಗಟ್ಟಿನ ಮೇಲೆ ನೆಲೆಸಿ, ಸುಮಾರು 32 ವರ್ಷಗಳ ಕಾಲ ರಾಜ್ಯವಾಳಿದ ತಮಿಳು ಸಂಸ್ಕೃತಿಯ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ಇತಿಹಾಸದಲ್ಲಿ ಅದ್ವಿತೀಯ ವ್ಯಕ್ತಿಯೆನಿಸಿಕೊಂಡಿದ್ದಾನೆ. ತನ್ನ ಆಡಳಿತದ ಉದ್ದಕ್ಕೂ ಅನೇಕ ಯುದ್ಧಗಳಲ್ಲಿ ವಿಜಯನಾಗಿ ಗಂಗೈಕೊಂಡ ಮುಡಿಕೊಂಡ, ಕದರನಗೊಂಡ ಮತ್ತು ಪಂಡಿತ ಚೋಳಗಳೆಂಬ ಬಿರುದುಗಳೊಂದಿಗೆ ಚೋಳರ ಇತಿಹಾಸದಲ್ಲಿ ಅಪ್ರತಿಮ ವೀರನೆನಿಸಿಕೊಂಡಿದ್ದಾನೆ.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಚೋಳರ ಆಡಳಿತ:

ವಿಸ್ತಾರವಾದ ಸಾಮ್ರಾಜ್ಯ ಮತ್ತು ಚಕ್ರಾದಿಪತ್ಯದ ಪ್ರಭುತ್ವದ ಜೊತೆಗೆ ಪ್ರಜೆಗಳಿಗೆ ಗೌರವಾದರಗಳಿಂದ ಕೂಡಿರುವ ಚೋಳರ ಆಡಳಿತ ಕ್ರಮವು ಅಷ್ಟೇ ಜನಪ್ರಿಯವಾಗಿತ್ತು. ಆಧುನಿಕ ಸರಕಾರಗಳು ಅಳವಡಿಸಿಕೊಂಡಿರುವ ಸ್ಥಳೀಯಾಡಳಿತ ಕ್ರಮ ಕ್ರಿ.ಶ. 9ನೇ ಶತಮಾನದಲ್ಲಿಯೇ ಅಳವಡಿಸಿಕೊಂಡಿರುವದು ಅವರ ಆಡಳಿತ ದಕ್ಷತೆ ಮತ್ತು ಸುಧಾರಣೆಯ ಕೈಗನ್ನಡಿಯಾಗಿದೆ. ಘನವಂತನಾದ ರಾಜರಾಜ ಮತ್ತು ಅಪ್ರತಿಮ ಶೂರ ರಾಜೇಂದ್ರ ಚೋಳರು ಆಳಿರುವ ಈ ಸಾಮ್ರಾಜ್ಯದ ಆಡಳಿತವು ಸಹ ಇತಿಹಾಸದಲ್ಲಿ ಅಷ್ಟೆ ಮಹತ್ವವನ್ನು ಪಡೆದಿದೆ.

ಚೋಳರ ಕೇಂದ್ರಾಡಳಿತ:

ಚೋಳರ ಆಡಳಿತ ಕ್ರಮದಲ್ಲಿ ಅರಸನೆ ಸರ್ವೋಚ್ಚನಾಗಿದ್ದು, ಜನರು ಆತನ ಸರ್ವಾಧಿಕಾರವನ್ನು ಸದಾ ಮನ್ನಿಸುತ್ತಿದ್ದರು. ಅರಸೊತ್ತಿಗೆ ದೈವಿ ಪ್ರತೀಕವೆಂದು ಪರಿಗಣಿಸಿದ್ದರಿಂದ ಚಕ್ರಾಧಿಪತ್ಯದ ಪ್ರಭುತ್ವ ಮತ್ತು ಗೌರವಗಳು ಸಾಕಷ್ಟು ಹೆಚ್ಚಿಸಿದವು. ಅತ್ಯಂತ ವೈಭವೋಪೇತವಾದ ರಾಜಧಾನಿಗಳು ವಿಶಾಲ ಆಸ್ಥಾನ ಮಂತ್ರಿ ಪರಿಷತ್ ಹೊಂದಿರುವ ಅರಮನೆಯು ಸಂಬಂಧಿಕರನ್ನೊಳಗೊಂಡಿದ್ದ ಅರಸ ಪ್ರಜೆಗಳ ದೃಷ್ಟಿಯಲ್ಲಿ ದೇವರಂತೆ ಗೋಚರಿಸುತ್ತಿದ್ದನೆಂಬುವುದರಲ್ಲಿ ಯಾವುದೇ ಉತ್ಕೃಕ್ಷವಿಲ್ಲ. ಏಕೆಂದರೆ ಅನೇಕ ದೇವಾಲಯಗಳು ಮತ್ತು ದೇವತೆಗಳ ಮೂರ್ತಿಗಳಿಗೆ ರಾಜ ಮತ್ತು ರಾಣಿಯರ ಹೆಸರು ನೋಡಿದರೆ ಇವರು ದೇವರಿಗೆ ಸಮಾನರಾದವರೆಂದು ಭಾವಿಸಲಾಗುತ್ತಿತ್ತು.

ಚೋಳರ ಕಾಲದಲ್ಲಿ ರಾಜತ್ವವು ವಂಶಪಾರಂಪರೆಯಾಗಿತ್ತು ಆದರೆ ರಾಜನು ನಿರಂಕುಶವಾಗಿ ಆಡಳಿತ ನಡೆಸುತ್ತಿರಲಿಲ್ಲ. ಪ್ರಜಾಹಿತವೆ ಆತನ ಮುಖ್ಯ ದ್ವೇಯವಾಗಿತ್ತು. ಸಾಮಾನ್ಯವಾಗಿ ಅರಸನ ಹಿರಿಯ ಮಗ ಯುವರಾಜನಾಗಿದ್ದು ತಂದೆಯ ನಂತರ ಪಟ್ಟಕ್ಕೆ ಬರುತ್ತಿದ್ದನು. ಅರಸನಿಗೆ ಆಡಳಿತದಲ್ಲಿ ಸಲಹೆ ಸೂಚನೆಗಳನ್ನು ನೀಡಲು ಮಂತ್ರಿ ಪರಿಷತ್ ಅಥವಾ ಸಲಹಾ ಸಮಿತಿ ಇದ್ದಿತು. ರಾಜನ ಯಾವುದೇ ಆಜ್ಞೆಗಳು ಜಾರಿಗೊಳಿಸಲು ಮಂತ್ರಿ ಮಂಡಲದ ಕನಿಷ್ಟ ಇಬ್ಬರ ಸಮ್ಮತಿ ಪಡೆದುಕೊಳ್ಳಲೇಬೇಕಾಗಿತ್ತು. ರಾಜಧಾನಿಯಲ್ಲಿ ಒಡೋಲಗ ನಡೆದಾಗ ಸಾಮಂತರು, ಮಂಡಲಾಧಿಪತಿಗಳು, ಮಂತ್ರಿಗಳು, ದಂಡನಾಯಕರು, ವಿದ್ವಾಂಸರು, ಕಲಾತಜ್ಞರು ಉಪಸ್ಥಿತರಿರುತ್ತಿದ್ದರು. ಕೇಂದ್ರ ಸರಕಾರದ ಆಡಳಿತ ನಿರ್ವಹಣೆಯಲ್ಲಿ ಮಂತ್ರಿಗಳಲ್ಲದೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರುತ್ತಿದ್ದರು. ಅಧಿಕಾರಿ ವರ್ಗವನ್ನು “ಪೆರೆಂದರೆ”ಎಂದು ಮತ್ತು ಸಿಬ್ಬಂದಿ ವರ್ಗವನ್ನು “ನಿರಂತರಂ”ಎಂದು ಕರೆಯಲಾಗುತ್ತಿತ್ತು.

ಸಾಮಾನ್ಯವಾಗಿ ಅರಸನು ಕೇವಲ ರಾಜಧಾನಿಯಲ್ಲಿ ಕುಳಿತು ಪ್ರಜೆಗಳ ಕಷ್ಟಸುಖಗಳನ್ನು ವಿಚಾರಿಸದೆ ರಾಜ್ಯದ ಅನೇಕ ಭಾಗಗಳಲ್ಲಿ ಸಂಚರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದನು. ಆಸ್ಥಾನದ ಒಡೋಲಗವು ರಾಜ್ಯದ ವಿವಿಧ ಪಟ್ಟಣಗಳಲ್ಲಿ ನಡೆಸುತ್ತಿದ್ದನು. ಇವರ ಕಾಲದಲ್ಲಿ ಒಡೋಲಗ ನಡೆಸಿದ ಸ್ಥಳಗಳೆಂದರೆ, ತಂಜಾವೂರು, ಕಾಂಚಿಪುರ, ಗಂಗೈಕೊಂಡ ಚೋಳಾಪುರ, ಚಿದಂಬರಂ ಮುಂತಾದವುಗಳು ಕೇಂದ್ರ ಸರಕಾರದಲ್ಲಿ ಹಣಕಾಸಿನ ಮೇಲ್ವಿಚಾರಣೆ, ವಿದೇಶಾಂಗನೀತಿ, ಸೈನ್ಯಾಡಳಿತ ಮುಂತಾದವುಗಳು ಕೇಂದ್ರದ ಅಧೀನದಲ್ಲಿದ್ದವು ಒಡೋಲಗಗಳಲ್ಲಿ ಅರಸನು ವಿದ್ವಾಂಸರಿಗೆ, ಬ್ರಾಹ್ಮಣರಿಗೆ, ಕಲಾಕಾರರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಕಾರ್ಯವನ್ನು ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಿದ್ದನು. ಅರಸನು ವಿವಿಧ ಪ್ರದೇಶಗಳಲ್ಲಿ ಸಂಚರಿಸುವಾಗ ಆತನ ಬೆಂಗಾವಲಾಗಿ ಅಂಗ ರಕ್ಷಕರು ಇರುತ್ತಿದ್ದರು.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ಯುವರಾಜ:

ಚೋಳ ಸಾಮ್ರಾಜ್ಯದಲ್ಲಿ ಸಾಮಾನ್ಯವಾಗಿ ಜೇಷ್ಠ ಪುತ್ರನನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಪದ್ಧತಿ ಇದ್ದಿತು. ಆದಾಗ್ಯೂ ಕೆಲವು ಸಂದರ್ಭದಲ್ಲಿ ಸಿಂಹಾಸನಕ್ಕಾಗಿ ಸಹೋದರರ ಮಧ್ಯೆ ಕಾದಾಟ ನಡೆದಿದ್ದು ನೋಡಬಹುದು ರಾಜರಾಜ ಚೋಳನ ನಂತರ ಜೇಷ್ಠ ಪುತ್ರನಿಗೆ ಸೂಕ್ತ ಕಾಲದಲ್ಲಿಯೇ ಯುವರಾಜ ಪಟ್ಟಾಭಿಷೇಕವನ್ನು ನೇರವೇರಿಸುತ್ತಿದ್ದರು. ಇದು ಸಿಂಹಾಸನಕ್ಕಾಗಿ ಕಚ್ಚಾಟಗಳು ತಪ್ಪಿಸುವ ಸುಲಭ ಉಪಾಯವಾಗಿತ್ತು. ಯುವರಾಜನಿಗೆ ಆಡಳಿತ ಪದ್ಧತಿಯ ನಿರ್ವಹಣೆ, ಯುದ್ಧ ಕೌಶಲ್ಯ ಮುಂತಾದ ವಿಷಯಗಳಲ್ಲಿ ಪರಿಣಿತ ಹೊಂದಲು ಅರಸನು ಏರ್ಪಾಡು ಮಾಡುತ್ತಿದ್ದನು. ಇವರ ಕಾಲದಲ್ಲಿ ಅರಸನಾಗುವ ವ್ಯಕ್ತಿ ಸುಶಿಕ್ಷಿತನಾಗಿರಬೇಕೆಂಬ ಜನರ ಅಭಿಪ್ರಾಯವಾಗಿತ್ತು. ಯುವರಾಜನು ತನ್ನ ತಂದೆಯ ಬೆಂಗಾವಲಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದನು. ಉದಾಹರಣೆಗೆ ರಾಜರಾಜ ಚೋಳನ ಮಗ ರಾಜೇಂದ್ರ ಚೋಳನು ತನ್ನ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದುಂಟು.

ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ

ಚೋಳರ ಸೈನ್ಯಾಡಳಿತ

ಚೋಳರು ಪ್ರಬಲವಾದ ಭೂಸೈನ್ಯ ಮತ್ತು ನೌಕಾದಳವನ್ನು ಹೊಂದಿದ್ದರು. ಅವರ ಸೈನ್ಯಾಡಳಿತದಲ್ಲಿ ಮುಖ್ಯವಾಗಿ ಗಜದಳ, ಅಶ್ವದಳ, ಪದಾತಿದಳ, ಇದ್ದವು ಭೂಸೈನ್ಯವನ್ನು ಸುಮಾರು 70 ಶಾಖೆಗಳಲ್ಲಿ ವಿಂಗಡಿಸಲಾಗಿತ್ತು ಎಂದು ಶಾಸನದ ಮೂಲಕ ತಿಳಿದು ಬರುತ್ತದೆ. ಸೈನಿಕರಿಗಾಗಿ ತರಬೇತಿ ಕೇಂದ್ರಗಳು ಮತ್ತು ಆಯುಧಗಾರಗಳು ಇದ್ದವು. ಅವರ ತರಬೇತಿ ಮತ್ತು ಶಿಸ್ತಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿತ್ತು. ಚೋಳರ ಸೈನ್ಯದಲ್ಲಿ 60,000 ಆನೆಗಳಿದ್ದು ಸುಮಾರು 1 ಲಕ್ಷ 50 ಸಾವಿರ ಸೇನಾ ಪಡೆ ಇದ್ದಿತ್ತು. ಸೈನ್ಯದಲ್ಲಿ “ವೇಳ್ವೆಕರ” ಎಂಬುವವರು ರಾಜನಿಗೆ ಅಂಗರಕ್ಷಕರಾಗಿದ್ದರು. ಯುದ್ಧದ ಸಂದರ್ಭದಲ್ಲಿ ಇವರು ಮಹತ್ವದ ಪಾತ್ರವಹಿಸುತ್ತಿದ್ದರು. ಯುದ್ಧದಲ್ಲಿ ಒಂದು ವೇಳೆ ರಾಜನ ಜೀವಕ್ಕೆ ಅಪಾಯ ಒದಗುವ ಸಂದರ್ಭ ಬಂದರೆ ಪ್ರಾಣಾರ್ಪಣೆ ಮಾಡಿ ರಾಜನನ್ನು ರಕ್ಷಿಸುತ್ತಿದ್ದರು. ಕೆಲವು ಸಂದರ್ಭದಲ್ಲಿ ತಾವು ಸಜೀವ ದಹನಗೊಂಡು ರಾಜನನ್ನು ರಕ್ಷಣೆ ಮಾಡಿದ ಉದಾಹರಣೆಗಳಿವೆ. ಸೈನ್ಯದ ಮುಂದಾಳತ್ವವನ್ನು ಸೇನಾಪತಿ, ದಂಡನಾಯಕ ಮತ್ತು ಮಹಾಪ್ರಚಂಡ ದಂಡನಾಯಕರು ವಹಿಸಿಕೊಳ್ಳುತ್ತಿದ್ದರು. ಅರಸನು ಈ ಎಲ್ಲಾ ದಂಡನಾಯಕರ ಸರ್ವಶ್ರೇಷ್ಟ ದಂಡನಾಯಕನಾಗಿದ್ದನು. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಜಯಗಳಿಸಲು ಸಹಾಯಕಾರಿಯಾದ ಯೋಧನಿಗೆ ”ಕ್ಷತ್ರಿಯಾ ಶಿಖಾಮಣಿ” ಎಂಬ ಬಿರುದನ್ನು ನೀಡಿ ಗೌರವಿಸಲಾಗುತ್ತಿತ್ತು. ಸೈನಿಕರಿಗಾಗಿಯೇ ಅನೇಕ ವಸಾಹತುಗಳನ್ನು ಸ್ಥಾಪಿಸಲಾಗಿತ್ತು. ಆ ವಸಾಹತುಗಳಿಗೆ ‘ಕಟಕ’ ಎಂದು ಕರೆಯಲಾಗುತ್ತಿತ್ತು. 1178ರಲ್ಲಿ ಚೀನಾ ಯಾತ್ರಿಕನು ವಿವರಿಸುವಂತೆ ಚೋಳರ ಸೈನ್ಯದಲ್ಲಿ ಸೈನಿಕರು ಆನೆಯ ಮೇಲೆ ಕುಳಿತು ಬಿಲ್ಲು ಬಾಣ ಮತ್ತು ಈಟಿಗಳನ್ನು ಹಿಡಿದು ಯುದ್ಧ ಮಾಡುತ್ತಿದ್ದರು. ಅಶ್ವದಳ, ಬಿಲ್ಲುಗಾರರು ಮತ್ತು ಕತ್ತಿ ಗುರಾಣಿ ಹಿಡಿದು ಹೋರಾಟ ಮಾಡುವ ಪ್ರತ್ಯೇಕ ತುಕಡಿಗಳಿದ್ದವೆಂದು ವರ್ಣಿಸಿದ್ದಾನೆ. ಇವರ ಸೈನ್ಯಕ್ಕೆ ಕುದುರೆಗಳನ್ನು ಅರಬ್ಬ ದೇಶದಿಂದ ತರಿಸಿಕೊಳ್ಳುತ್ತಿದ್ದರು. ಚೇರ, ಸಿಂಹಳ ಮತ್ತು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸುಮಾರು ದ್ವೀಪಗಳನ್ನು ಗೆದ್ದುದಲ್ಲದೆ ಮಲಯಾ ಪರ್ಯಾಯ ದ್ವೀಪಗಳ ಮೇಲೆ ಸಾಧಿಸಿದ ವಿಜಯವು ಚೋಳರ ನೌಕಾಪಡೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸೈನಿಕರಿಗೆ ಜೀವನ ನಿರ್ವಹಣೆಗಾಗಿ ನಗದು ರೂಪದಲ್ಲಿ ಅಥವಾ ಭೂಮಿಯನ್ನು ಉಂಬಳಿಯಾಗಿ ಕೊಡಲಾಗುತ್ತಿತ್ತು.

ಚೋಳರ ಸ್ಥಳೀಯ ಆಡಳಿತ:

ಚೋಳ ಅರಸ ಒಂದನೆ ರಾಜರಾಜನ ಕಾಲಕ್ಕೆ ತನ್ನ ಸಾಮ್ರಾಜ್ಯವನ್ನು ಎಂಟು ಮಂಡಲ ಅಥವಾ ಪ್ರಾಂತಗಳಾಗಿ ವಿಂಗಡಿಸಿದ್ದನು. ಈ ಮಂಡಲಗಳು ಪುನ: `ವಳನಾಡು’ ಮತ್ತು ‘ನಾಡು’ಗಳಾಗಿ ವಿಂಗಡಿಸಿ ಆಡಳಿತಾತ್ಮಕ ದೃಷ್ಟಿಯಿಂದ ನಾಡುಗಳನ್ನು ‘ಕುದ್ರಂ’ ಅಥವಾ ‘ಕೊಟ್ಟಂ’ಗಳಾಗಿ ಮಾರ್ಪಡಿಸಿ ಪ್ರತಿ ಕೊಟ್ಟಂಗಳ ಅಥವಾ ಉಪವಿಭಾಗದಲ್ಲಿ ಆಂತರಿಕ ಸ್ವಾತಂತ್ರ್ಯವುಳ್ಳ ಅನೇಕ ಹಳ್ಳಿಗಳಿದ್ದವು. ಚೋಳರ ಆಡಳಿತದಲ್ಲಿ ಈ ಹಳ್ಳಿಗಳು ಸ್ಥಳೀಯ ಆಡಳಿತದಲ್ಲಿ ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಪಾತ್ರವಹಿಸಿದ್ದವು. ಕ್ರಿ.ಶ. 8 ಮತ್ತು 9 ಶತಮಾನದಲ್ಲಿದ್ದ ಪಲ್ಲವರು ಮತ್ತು ಪಾಂಡ್ಯರ ಕಾಲದಲ್ಲಿದ್ದ ‘ಸಭಾ’ಗಳು ಮತ್ತು ಸಮಿತಿಗಳು ಹಳ್ಳಿಗಳಲ್ಲಿದ್ದವು. ಅವು ಸಹ ಸ್ವಾಯತ್ತತೆ ಹೊಂದಿದ್ದವಾದರೂ ಅವುಗಳ ಬೆಳವಣಿಗೆ ಸಂಪೂರ್ಣವಾಗಿರಲಿಲ್ಲ. ಕ್ರಿ.ಶ. ಹತ್ತನೇ ಶತಮಾನದ ಚೋಳರ ಕಾಲದ ಹಳ್ಳಿಗಳ ಸ್ವಾಯತ್ತತೆ ಪರಿಪೂರ್ಣವಾಗಿತ್ತೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಚೋಳರ ಕಾಲದ ಹಳ್ಳಿಗಳಲ್ಲಿರುವ ಮುಖ್ಯವಾದ ಆಡಳಿತಾಂಗಗಳೆಂದರೆ ‘ಉರ್’ ಮತ್ತು ‘ಸಭಾ’ಗಳು ಈ ಸಂಸ್ಥೆಗಳಲ್ಲಿ ‘ಉರ್’ ಸಾಮಾನ್ಯ ಮಾದರಿಯ ಸಂಸ್ಥೆಯಾಗಿದ್ದರೆ ‘ಸಭಾ’ ಅಗ್ರಹಾರ ಅಥವಾ ಬ್ರಾಹ್ಮಣರ ವಸಾಹತು ಸಮೂಹ ಅಥವಾ ಸಭೆಯಾಗಿತ್ತು. ಈ ವಿಧವಾದ ಸಭಾ ಮತ್ತು ಸಮಿತಿಗಳ ಮೂಲವು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿದೆ ಎಂಬುದು ಸತ್ಯನಾಥ ಅಯ್ಯರ್ ಅಭಿಪ್ರಾಯ ಪಡುತ್ತಾರೆ.

ಉತ್ತರ ಮೇರುರ್ ಶಿಲಾಶಾಸನಗಳು:

ಚಂಗ್ಲಪುಟ ಜಿಲ್ಲೆಯ ಉತ್ತರ್‌ಮೆರುರ್ ಎಂಬಲ್ಲಿ ಸಿಕ್ಕಿರುವ ಎರಡು ಶಿಲಾಶಾಸನಗಳು ಚೋಳರ ಸ್ಥಳೀಯ ಆಡಳಿತವನ್ನು ತಿಳಿಯಲು ಅತ್ಯಂತ ಮಹತ್ವ ಪೂರ್ಣ ದಾಖಲೆಗಳಾಗಿವೆ. ಕ್ರಿ.ಶ. 919 ಮತ್ತು 921ರಲ್ಲಿ ಚೋಳ ಅರಸ ಒಂದನೇ ಪಾರಾಂತಕನು. ತನ್ನ ಆಡಳಿತದ 12 ಮತ್ತು 14ನೇ ವರ್ಷಗಳ ಕಾಲದಲ್ಲಿ ರಾಜ್ಯದ ಪ್ರಮುಖರೊಡನೆ ಸಭೆ ನಡೆಸಿ ಒಂದು ಮಹತ್ವವಾದ ನಿರ್ಣಯವೊಂದನ್ನು ಕೈಗೊಂಡನು ಅದರನ್ವಯ ಹಳ್ಳಿಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಅಲ್ಲಿ ಹೆಚ್ಚಿನ ಅಧಿಕಾರದ ಬಗ್ಗೆ ಚರ್ಚಿಸಲಾಯಿತಾದರೂ ಅದು ಅಪೂರ್ಣವಾಗಿ ಉಳಿಯಿತು. ತದನಂತರ ಎರಡನೇ ಸಭೆ ಅಂದರೆ 921ರಲ್ಲಿ ಮತ್ತೆ ಒಂದು ಠರಾವು ಮಂಡಿಸಿ ಅದರನ್ವಯ ಹಳ್ಳಿಗಳಲ್ಲಿರುವ ಪ್ರತಿವಿಭಾಗಗಳು ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಮತ್ತು ಎಲ್ಲಾ ಆಡಳಿತಾತ್ಮಕ ನಿರ್ಣಯಗಳು ಈ ಚುನಾಯಿತ ಪ್ರತಿನಿಧಿಗಳು ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಮತ್ತು ಎಲ್ಲಾ ಆಡಳಿತಾತ್ಮಕ ನಿರ್ಣಯಗಳು ಈ ಚುನಾಯಿತ ಪ್ರತಿನಿಧಿಗಳಿಂದಲೆ ಕೈಗೊಳ್ಳಬೇಕೆಂಬ ನಿರ್ಣಯ ಅಂಗಿಕರಿಸಲಾಯಿತು. ಆ ಪ್ರತಿನಿಧಿಗಳ ಚುನಾವಣೆ, ಅರ್ಹತೆ ಅಧಿಕಾರ ಮತ್ತು ಕಾರ್ಯಗಳ ಸ್ಕೂಲ ನಿರೂಪಣೆಯೆ ಉತ್ತರ ಮೇರುರ್ ಶಾಸನದ ಸಾರವಾಗಿದೆ.

(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)

ಅಭ್ಯರ್ಥಿಯ ಅರ್ಹತೆಗಳು:

ಹಳ್ಳಿಯ ಸ್ಥಳೀಯ ಸಂಸ್ಥೆಗೆ ಸದಸ್ಯನಾಗಬಯಸುವ ಅಭ್ಯರ್ಥಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕಾಗಿತ್ತು.

  • ಅವನು ಕನಿಷ್ಠ 1/4 ‘ಮೈಲಿ’ (ಒಂದುವರೆ ಎಕರೆಯಾಗುವಷ್ಟು) ಸ್ವಂತ ಜಮೀನನ್ನು ಹೊಂದಿರಬೇಕು.
  • ಸ್ವಂತ ಜಾಗದಲ್ಲಿ ನಿರ್ಮಿಸಿರುವ ಒಂದು ಮನೆ ಇರಬೇಕು.
  • ಚುನಾವಣೆಗೆ ಸ್ಪರ್ಧಿಸಬೇಕಾದರೆ ಕನಿಷ್ಠ 35 ವರ್ಷದವರಾಗಿರಬೇಕು ಮತ್ತು ಗರಿಷ್ಠ ವಯಸ್ಸು 70ಕ್ಕೆ ನಿಗದಿ ಪಡಿಸಲಾಗಿತ್ತು.
  • ವೈದಿಕ ಮಂತ್ರ ಮತ್ತು ಬ್ರಾಹ್ಮಣಗಳ ಜ್ಞಾನವಿರಬೇಕು ಅಥವಾ ಆತನಿಗೆ 1/8 ಮೈಲಿಯಷ್ಟು ಭೂಮಿಯಿದ್ದು ಯಾವುದಾದರೂ ಒಂದು ವೇದ ಮತ್ತು ಒಂದು ಭಾಷ್ಯದಲ್ಲಿ ಪರಿಣಿತನಾಗಿದ್ದರೆ ಸಾಕು.
  • ಸ್ಥಳೀಯವಾಗಿಯೂ ಜನಪರವ್ಯಕ್ತಿಯಾಗಿರಬೇಕು
  • ಯಾವುದಾದರು ಉದ್ಯೋಗ ವಹಿವಾಟುಗಳಲ್ಲಿ ನಿಪುಣನಾಗಿರುವದು ಅವಶ್ಯವಾಗಿತ್ತು
  • ನೈತಿಕ ಮಟ್ಟದಿಂದ ಪ್ರಾಮಾಣಿಕತನವನ್ನು ಹೊಂದಿದವನಾಗಿರಬೇಕು.
  • ಪ್ರಜಾಹಿತ ಚಿಂತಕನಾಗಿ ಆಡಳಿತ ವ್ಯವಸ್ಥೆ ಉನ್ನತ ಅಧಿಕಾರಿಗಳ ಬಗ್ಗೆ ಗೌರವ ಮನೋಭಾವನೆ ಉಳ್ಳವನಾಗಿರಬೇಕು.
  • ಅರಸರ ಬಗ್ಗೆ ಗೌರವ ಮನೋಭಾವನೆ ಹೊಂದಿರಬೇಕು.

ಆನರ್ಹತೆಗಳು

  • ಕಳೆದ ಮೂರು ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಇದ್ದರೆ.
  • ಹಿಂದೆ ಯಾವುದಾದರೂ ಒಂದು ಸಮಿತಿಯಲ್ಲಿದ್ದು ಆ ಸಮಿತಿಗೆ ಸಂಬಂದಪಟ್ಟಂತೆ ಸಮರ್ಪಕವಾದ ಲೆಕ್ಕ ಪತ್ರಗಳು ಮತ್ತು ಇತರೆ ಮಾಹಿತಿಗಳು ಕೊಡದೆ ಇದ್ದವರು.
  • ಹಿಂದಿನ ವರ್ಷಗಳಲ್ಲಿ ಯಾವುದಾದರೊಂದು ಸಮಿತಿಯ ಸದಸ್ಯನಾಗಿದ್ದು, ನಿಯಮಾನುಸಾರ ವರ್ತನೆ ಮಾಡದಿದ್ದ ಸದಸ್ಯನ ಸಮೀಪದ ಸಂಬಂಧಿಗಳು, ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವರು.
  • ಧರ್ಮಕ್ಕನುಸಾರವಾಗಿ ಸಮಾಜದಲ್ಲಿ ಯಾವುದಾದರು ಪಾಪಕಾರ್ಯಗಳನ್ನು ಮಾಡಿದ್ದವರು.
  • ರಾಜ್ಯದಲ್ಲಿ ಕೊಲೆ, ದರೋಡೆ, ಸುಲಿಗೆಯನ್ನು ಮಾಡಿದ್ದವರು, ಅಥವಾ ಬೇರೆಯವರ ಆಸ್ತಿಯನ್ನು ಕಬಳಿಸಿದ್ದವರು ಮತ್ತು ಇವರ ಸಂಬಂಧಿಕರು.
  • ಸಮಾಜದ ಕೀಳು ಜಾತಿಯವರೊಂದಿಗೆ ಬೆರೆತವರು ಮತ್ತು ಒಂದು ವೇಳೆ ಬೆರೆತರೂ ಸಹ ಅದಕ್ಕೆ ತಕ್ಕ ಪ್ರಾಯಶ್ಚಿತಗಳನ್ನು ಮಾಡಿಕೊಳ್ಳದೆ ಇರುವವರು.
  • ಸಮಾಜ ಬಾಹಿರವಾದ ಅಥವಾ ಪ್ರತಿಬಂಧಿಕವಾದ ಆಹಾರವನ್ನು ತಿಂದು ಶುದ್ದಿ ಮಾಡಿಕೊಳ್ಳದವರಿಗೆ,
  • ಬ್ರಾಹ್ಮಣನ ಹತ್ಯೆಗೈದವರು.
  • ಮಧ್ಯಪಾನ ಸೇವನೆಯನ್ನು ಮಾಡುವವರು.

ಆನರ್ಹತೆಗಳು :

  • ಕಳೆದ ಮೂರು ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಇದ್ದರೆ.
  • ಹಿಂದೆ ಯಾವುದಾದರೂ ಒಂದು ಸಮಿತಿಯಲ್ಲಿದ್ದು ಆ ಸಮಿತಿಗೆ ಸಂಬಂದಪಟ್ಟಂತೆ ಸಮರ್ಪಕವಾದ ಲೆಕ್ಕ ಪತ್ರಗಳು ಮತ್ತು ಇತರೆ ಮಾಹಿತಿಗಳು ಕೊಡದೆ ಇದ್ದವರು.
  • ಹಿಂದಿನ ವರ್ಷಗಳಲ್ಲಿ ಯಾವುದಾದರೊಂದು ಸಮಿತಿಯ ಸದಸ್ಯನಾಗಿದ್ದು, ನಿಯಮಾನುಸಾರ ವರ್ತನೆ ಮಾಡದಿದ್ದ ಸದಸ್ಯನ ಸಮೀಪದ ಸಂಬಂಧಿಗಳು, ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವರು.
  • ಧರ್ಮಕ್ಕನುಸಾರವಾಗಿ ಸಮಾಜದಲ್ಲಿ ಯಾವುದಾದರು ಪಾಪಕಾರ್ಯಗಳನ್ನು ಮಾಡಿದ್ದವರು.
  • ರಾಜ್ಯದಲ್ಲಿ ಕೊಲೆ, ದರೋಡೆ, ಸುಲಿಗೆಯನ್ನು ಮಾಡಿದ್ದವರು, ಅಥವಾ ಬೇರೆಯವರ ಆಸ್ತಿಯನ್ನು ಕಬಳಿಸಿದ್ದವರು ಮತ್ತು ಇವರ ಸಂಬಂಧಿಕರು.
  • ಸಮಾಜದ ಕೀಳು ಜಾತಿಯವರೊಂದಿಗೆ ಬೆರೆತವರು ಮತ್ತು ಒಂದು ವೇಳೆ ಬೆರೆತರೂ ಸಹ ಅದಕ್ಕೆ ತಕ್ಕ ಪ್ರಾಯಶ್ಚಿತಗಳನ್ನು ಮಾಡಿಕೊಳ್ಳದೆ ಇರುವವರು.
  • ಸಮಾಜ ಬಾಹಿರವಾದ ಅಥವಾ ಪ್ರತಿಬಂಧಿಕವಾದ ಆಹಾರವನ್ನು ತಿಂದು ಶುದ್ದಿ ಮಾಡಿಕೊಳ್ಳದವರಿಗೆ,
  • ಬ್ರಾಹ್ಮಣನ ಹತ್ಯೆಗೈದವರು.
  • ಮಧ್ಯಪಾನ ಸೇವನೆಯನ್ನು ಮಾಡುವವರು.

ವಾರಿಯಮ್ ಪದ್ದತಿ:

ಚೋಳರ ಸ್ಥಳೀಯ ಆಡಳಿತದಲ್ಲಿ ಗ್ರಾಮ ಸಭೆಯ ಚುನಾಯಿತ ಸದಸ್ಯರಿಂದ ಅನೇಕ ಉಪಸಮಿತಿಗಳನ್ನು ನೇಮಿಸಲಾಗುತ್ತಿತ್ತು. ಅವುಗಳನ್ನು ವಾರಿಯಮ್ ಎಂದು ಕರೆಯಲಾಗುತ್ತಿತ್ತು. ಅವುಗಳಲ್ಲಿ ಮುಖ್ಯವಾದ ವಾರಿಯಮ್‌ ಗಳೆಂದರೆ 1. ಸವೆಂತ್ಸರ ವಾರಿಯಮ್ (ವಾರ್ಷಿಕ ಸಮಿತಿ) 2. ತೊಟ್ಟಿ ವಾರಿಯನ್ (ತೋಟ ಸಮಿತಿ) 3. ಏರಿವಾರಿಯಮ್ (ಕೆರೆ ಸಮಿತಿ), 4. ಪೊನ್ ವಾರಿಯಮ್ (ಬಂಗಾರ ಸಮಿತಿ) 5. ನ್ಯಾಯ ಮಹತ್ವರ ವಾರಿ (ನ್ಯಾಯ ಪದ್ಧತಿ), 6. ಉದಾಸೀನ ವಾರಿಯಮ್ (ವಿದೇಶಿಯರ ಉಸ್ತುವಾರಿ).

  • ಸಂವತ್ಸರ ವಾರಿಯನ್: ಈ ಸಮಿತಿಯಲ್ಲಿ 12 ಜನ ಸದಸ್ಯರಿರುತ್ತಿದ್ದರು, ಈ ಸದಸ್ಯರು ವಯೋವೃದ್ಧರು ಮತ್ತು ಜ್ಞಾನಿಗಳಾಗಿರಬೇಕಾಗಿರುತ್ತಿತ್ತು.
  • ತೊಟ್ಟವಾರಿಯಮ್: ಈ ಸಮಿತಿಯಲ್ಲಿ 12 ಜನ ಸದಸ್ಯರಿದ್ದು ಅವರಿಗೆ ತೋಟ ನಿರ್ವಹಣೆ ಉಸ್ತುವಾರಿಯನ್ನು ವಹಿಸಿಕೊಡಲಾಗಿದ್ದು ಈ
  • ಪಂಚಾರ ಫೊನ್ ಸಮಿತಿ ಎಂದರೆ ಬಂಗಾರ ಸಮಿತಿಯೆಂದೆ ಕರೆಯಲಾಗುತ್ತಿದ್ದು. ಈ ಸಮಿತಿಯಲ್ಲಿ 12 ಜನ ಸದಸ್ಯರಿರುತ್ತಿದ್ದರು. ಅಂದರೆ ಪಂಚಾವಾರ ಸಮಿತಿಯ ಆರು ಜನ ಪೊನ್ ಸಮಿತಿಗೆ ಆರು ಜನ.
  • ನ್ಯಾಯ ಮಹತ್ವರ ಸಮಿತಿ: ಹಳ್ಳಿಯ ನ್ಯಾಯಾಂಗ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಈ ಸಮಿತಿಗೆ ಇತ್ತು.
  • ಉದಾಸೀನ ಈ ಸಮಿತಿಯ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದಿದ್ದರು ಉತ್ತರ ಮೇರುರು ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಗಳಲ್ಲಿ ಈ ಸಮಿತಿ ಅಸ್ತಿತ್ವದಲ್ಲಿದ್ದಿತೆಂದು ತಿಳಿದು ಬರುತ್ತದೆ. ಉದಾಸೀನ ಎಂದರೆ ಸನ್ಯಾಸಿಗಳೆಂದು ವಿವರಣೆ ಕೊಡಲಾಗಿದೆ. ಹಾಗೆಂದರೆ ಗ್ರಾಮದಲ್ಲಿನ ಸನ್ಯಾಸಿಗಳ ಉಸ್ತುವಾರಿಯೆ? ಅಥವಾ ಗ್ರಾಮಕ್ಕೆ ಬೇರೆಡೆಯಿಂದ ಬಂದ ಹೊಸಬರೆ? ಅಥವಾ ವಿದೇಶಿಯರೇ ಎಂಬುದರ ಬಗ್ಗೆ ಜಿಜ್ಞಾಸೆಗಳಿವೆ. ಈ ಮೇಲಿನ ಸಮಿತಿಗಳಲ್ಲದೆ ಇನ್ನೂ ಅನೇಕ ಚಿಕ್ಕಪುಟ್ಟ ಸಮಿತಿಗಳ ಅಸ್ತಿತ್ವದಲ್ಲಿದ್ದವು ಈ ಸಮಿತಿಯ ಸದಸ್ಯರುಗಳಿಗೆ “ವರಿಯ ಪೇರು ಮಕ್ಕಳ್” ಎಂದು ಕರೆಯಲಾಗುತ್ತಿತ್ತು.
ವರಿಯ ಪೆರು ಮಕ್ಕಳ್:

ಕುಡುವಲೈ ಪದ್ಧತಿಗಳ ಅನ್ವಯ ತಮ್ಮ ಅದೃಷ್ಟ ಪರೀಕ್ಷಾ ಪದ್ಧತಿಯ ಚುನಾವಣೆಯ ಪ್ರಕಾರ ಆಯಾ ವಿಭಾಗಗಳಿಂದ ಚುನಾಯಿತರಾಗಿ ಬಂದ ಸದಸ್ಯರು ಯಾವುದಾದರೊಂದು ಸಮಿತಿಗೆ ಸದಸ್ಯರಾಗುತ್ತಿದ್ದರು ಈ ಸಮಿತಿಗಳಲ್ಲಿ ಸೇವೆ ಮಾಡುವ ಸದಸ್ಯರಿಗೆ ಅಥವಾ ವ್ಯಕ್ತಿಗಳಿಗೆ “ವರಿಯಪೆರುಮಕ್ಕಳ್” ಎಂದು ಕರೆಯಲಾಗುತ್ತಿತ್ತು. ‘ವರಿಯಪೆರುಮಕ್ಕಳ್’ಗಳಿಗೆ ಯಾವುದೇ ರೀತಿಯ ಸಂಭಾವನೆಯಾಗಲಿ ಪ್ರತಿಫಲವನ್ನಾಗಲಿ ಅಥವಾ ಸಂಬಳವನ್ನಾಗಿ ಕೊಡುತ್ತಿರಲಿಲ್ಲ. ಅಲ್ಲಿ ಮಹಾಸಭಾ ಮತ್ತು ‘ಪೆರುಂಗಿರಿ’ ಎಂಬ ಸಮಿತಿಗಳು ಸಹ ಇದ್ದವು ಅ ಸಮಿತಿಯ ಸದಸ್ಯರನ್ನು ‘ಪೆರುಮಕ್ಕಳ್’ ಎಂದು ಕರೆಯಲಾಗುತ್ತಿತ್ತು.

ಸದಸ್ಯರ ಆಯ್ಕೆ ಪದ್ಧತಿ :

ಒಂದು ಖಾಲಿ ಮಡಿಕೆಯನ್ನಿಟ್ಟು ಅದಕ್ಕೆ ಒಂದು ಚಿಕ್ಕ ರಂಧ್ರವನ್ನು ಮಾಡಿ ಆ ರಂಧ್ರದ ಮೂಲಕ ಸದಸ್ಯನಾಗುವವನ ಹೆಸರನ್ನು ತಾಳೆಯ ಎಲೆಯ ಮೇಲೆ ಬರೆದು ಮಡಿಕೆಯಲ್ಲಿ ಹಾಕಲಾಗುತ್ತಿತ್ತು. ಎಲ್ಲಾ ಮಡಿಕೆಯಲ್ಲಿ ಇರುವ ಚೀಟಿಯನ್ನು ಮತ್ತೊಂದು ಮಡಿಕೆಗೆ ಸುರಿದು ಚೆನ್ನಾಗಿ ಕಲುಕಿ ಚುನಾವಣಾ ಅಧಿಕಾರಿಯ ಸಮಕ್ಷಮದಲ್ಲಿ ಒಬ್ಬ ಚಿಕ್ಕ ಹುಡುಗನಿಂದ ಚೀಟಿಗಳನ್ನು ತೆಗೆಸಿ ಚುನಾ ನಾಯಿತ ಸದಸ್ಯನ ಸದಸ್ಯನ ಹೆಸರನ್ನು ಪ್ರಕಟಿಸಲಾಗುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಯುವಕ ಮತ್ತು ವೃದ್ಧ ಸದಸ್ಯರೆಲ್ಲರೂ ಸೇರುತ್ತಿದ್ದರು ಇದನ್ನು ಮಹಾಸಭೆ ಎಂದು ಕರೆಯಲಾಗುತ್ತಿತ್ತು.

ಒಂದು ಖಾಲಿ ಮಡಿಕೆಯನ್ನಿಟ್ಟು ಅದಕ್ಕೆ ಒಂದು ಚಿಕ್ಕ ರಂಧ್ರವನ್ನು ಮಾಡಿ ಆ ರಂಧ್ರದ ಮೂಲಕ ಸದಸ್ಯನಾಗುವವನ ಹೆಸರನ್ನು ತಾಳೆಯ ಎಲೆಯ ಮೇಲೆ ಬರೆದು ಮಡಿಕೆಯಲ್ಲಿ ಹಾಕಲಾಗುತ್ತಿತ್ತು. ಎಲ್ಲಾ ಮಡಿಕೆಯಲ್ಲಿ ಇರುವ ಚೀಟಿಯನ್ನು ಮತ್ತೊಂದು ಮಡಿಕೆಗೆ ಸುರಿದು ಚೆನ್ನಾಗಿ ಕಲುಕಿ ಚುನಾವಣಾ ಅಧಿಕಾರಿಯ ಸಮಕ್ಷಮದಲ್ಲಿ ಒಬ್ಬ ಚಿಕ್ಕ ಹುಡುಗನಿಂದ ಚೀಟಿಗಳನ್ನು ತೆಗೆಸಿ ಚುನಾ ನಾಯಿತ ಸದಸ್ಯನ ಸದಸ್ಯನ ಹೆಸರನ್ನು ಪ್ರಕಟಿಸಲಾಗುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಯುವಕ ಮತ್ತು ವೃದ್ಧ ಸದಸ್ಯರೆಲ್ಲರೂ ಸೇರುತ್ತಿದ್ದರು ಇದನ್ನು ಮಹಾಸಭೆ ಎಂದು ಕರೆಯಲಾಗು ಲಾಗುತ್ತಿತ್ತು.

ಮಹಾಸಭೆಯ ಅಧಿಕಾರ ಮತ್ತು ಕರ್ತವ್ಯಗಳು:

ಚೋಳರ ಕಾಲದಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಸ್ಥಳೀಯ ಸ್ವಾಯತ್ತತೆಯ ಸಂಸ್ಥೆಯಾದ ಮಹಾಸಭೆಯು ತನ್ನದೆ ಆದ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತಿತ್ತು. ಕೇಂದ್ರ ಸರ್ಕಾರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದಿ ಕೇಂದ್ರಾಡಳಿತದ ವ್ಯಾಪ್ತಿಯಲ್ಲಿ ಬರುವ ದೇಶದ ಬಾಹ್ಯ ರಕ್ಷಣೆ, ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಸಾಮ್ರಾಜ್ಯದ ಸಾಂಸ್ಕೃತಿಕ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಉಳಿದೆಲ್ಲವು ಸ್ಥಳೀಯ ಆಡಳಿತದ ಅಧಿಕಾರದ ವ್ಯಾಪ್ತಿಯಲ್ಲಿರುತ್ತಿದ್ದವು. ಆದರೆ ಸ್ಥಳೀಯ ಆಡಳಿತದ ಎರಡು ಸಭೆಗಳ ಅಥವಾ 2 ಗ್ರಾಮಗಳ ಮಧ್ಯೆ ಸಂಘರ್ಷ ಉಂಟಾದಾಗ ಕೇಂದ್ರಸರ್ಕಾರವು ಮದ್ಯಪ್ರವೇಶಿಸಿ ತನ್ನ ತೀರ್ಮಾನವನ್ನು ಕೊಡುತ್ತಿತ್ತು. ಚೋಳರ ಕಾಲದ ಸ್ಥಳೀಯ

ಆಡಳಿತದ ಪರಮಾಧಿಕಾರದಲ್ಲಿ ಮುಖ್ಯವಾದವುಗಳೆಂದರೆ ಸ್ಥಳೀಯ ಮಹಾಸಭೆಯ

1. ಸ್ವಾಯತ್ತತೆ,

2. ಕೆಲವು ಪಂಥಗಳಿಗೆ ಸಂಬಂಧಪಟ್ಟ ಜಮೀನಿನ ಮೇಲೆ ಒಡೆತನ,

3. ಖಾಸಗಿ ಭೂಮಿಯು ಮಹಾ ಸಭೆಯ ಅಂಕಿತದಲ್ಲಿರಬೇಕೆಂಬ ಕಟ್ಟಳೆ,

4. ಆಸ್ತಿ ವರ್ಗಾವಣೆ ಮಾಡಬೇಕಾದರೆ ಮಹಾಸಭೆಯ ಪೂರ್ವಾನುಮತಿ ಅವಶ್ಯಕವಾಗಿತ್ತು.

5. ಬಂಜರು ಪ್ರದೇಶ ಮತ್ತು ಅರಣ್ಯಗಳನ್ನು ಸಾಗುವಳಿ ಯೋಗ್ಯ ಭೂಮಿಯನ್ನಾಗಿ ಮಾಡುವುದು.

6.ಸಾಗುವಳಿ ಮಾಡಿದ ಭೂಮಿಯಲ್ಲಿ ಬರುವ ಆದಾಯದ ಆಧಾರದ ಮೇಲೆ ಭೂಕಂದಾಯ ನಿಗದಿಗೊಳಿಸುವುದು.

7.ಭೂಕಂದಾಯವನ್ನು ಯಾವುದೇ ಒಬ್ಬ ರೈತ ಹಲವು ದಿನಗಳವರೆಗೆ ಕೊಡದೇ ಇದ್ದಾಗ ಆತನಿಗೆ ಸಂಬಂಧ ಪಟ್ಟ ಭೂಮಿಯನ್ನು ಹರಾಜಿನಲ್ಲಿ ಮಾರಾಟ ಮಾಡಿ ಕಂದಾಯ ವಸೂಲಿ ಮಾಡುವುದು.

8. ಮಹಾಸಭೆಯ ಅಧಿಕಾರದಲ್ಲಿದ್ದ ಭೂಮಿಗಳಲ್ಲಿ ಒಂದು ವೇಳೆ ಕೇಂದ್ರ ಸರಕಾರವು ವಪಡೆದುಕೊಳ್ಳಬೇಕಾದರೆ ಮಹಾಸಭೆಗೆ ಮುಂಚಿತವಾಗಿ ತಿಳಿಸಿ ಸಭೆಯ ಸರ್ವಾನುಮತವನ್ನು ಪಡೆದುಕೊಳ್ಳಬೇಕಾಗಿತ್ತು.

9. ಅಭಿವೃದ್ಧಿಗೋಸ್ಕರ ವಸೂಲಿ ಸೂಲಿ ಮಾಡುತ್ತಿರುವ ಇತರೆ ತೆರಿಗೆಗಳನ್ನು ಕೆಲವು ಸಂದರ್ಭದಲ್ಲಿ ಮನ್ನಾ ಮಾಡಲಾಗುತ್ತಿತ್ತು.

10. ಪ್ರತಿವರ್ಷವು ಕೊಡಾಬೇಕಾಗಿದ್ದ ಭೂಕಂದಾಯವಾಗಲಿ ಅಥವಾ ತೆರಿಗೆಗಳಾಗಲಿ ಭೂಒಡೆಯನು ಒಂದೇ ಸಲ ಸಲ್ಲಿಸಬಹುದಾಗಿತ್ತು.

    ಕರ್ತವ್ಯಗಳು :

    ಪ್ರಾಂತಾಡಳಿತದಲ್ಲಿ ಪ್ರಮುಖ ಪಾತ್ರವಹಿಸಿರುವ ಮಹಾ ಸಭೆಯು ತನ್ನದೇ ಆದ ಕೆಲವು ಕರ್ತವ್ಯಗಳನ್ನು ಹೊಂದಿತ್ತು ಅವುಗಳೆಂದರೆ,

    1. ರಸ್ತೆಗಳ ದುರಸ್ತಿ
    2. ಗ್ರಾಮ ರಕ್ಷಣೆ
    3. ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು
    4. ಚಿಕ್ಕ ಕೆರೆಗಳ ನಿರ್ವಹಣೆ ಮತ್ತು ಕಾಲುವೆಗಳ ದುರಸ್ತಿ
    5. ದಾನದತ್ತಿಗಳಿಂದ ಬರುವ ಆದಾಯದ ಮೇಲ್ವಿಚಾರಣೆ ಮತ್ತು ಅದರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು.
    6. ಧಾರ್ಮಿಕ, ವೈದ್ಯಕೀಯ, ಶೈಕ್ಷಣಿಕ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಿ ಅದರ ಉಸ್ತುವಾರಿ ಮಾಡುವುದು.

    ಒಟ್ಟಿನಲ್ಲಿ ಹಳ್ಳಿಯ ಜೀವನವನ್ನು ಸುಖ ಸಂತೋಷ ಸಮೃದ್ಧಿಯಿಂದ ಕೂಡಿಸಿ. ಜನತೆಗೆ ಕಷ್ಟ ನೋವುಗಳನ್ನು ಬರದಂತೆ ನೋಡಿಕೊಳ್ಳುವುದು. ಈ ಮಹಾ ಸಭೆಯ ಕರ್ತವ್ಯಗಳಾಗಿದ್ದವು.

    GK QUESTION AND ANSWERS

    ಚೋಳ ಸಾಮ್ರಾಜ್ಯದ ಸ್ಥಾಪಕ ಯಾರು?

    ಉತ್ತರ: ವಿಜಯಾಳ ಚೋಳ

    ಚೋಳರ ರಾಜಧಾನಿ ಯಾವುದು?

    ಉತ್ತರ: ತಂಜಾವೂರು

    ಚೋಳ ಸಾಮ್ರಾಜ್ಯದ ಆಳ್ವಿಕೆಯ ಕಾಲ?

    ಉತ್ತರ: 848-1279 CE

    ಚೋಳರ ಅಧಿಕೃತ ಭಾಷೆ ಯಾವುದು?

    ಉತ್ತರ: ತಮಿಳು

    ಚೋಳರ ಮುಖ್ಯ ಧರ್ಮ ಯಾವುದು?

    ಉತ್ತರ: ಹಿಂದೂ ಧರ್ಮ (ಶೈವ ಮತ)

    ಚೋಳ ಸಾಮ್ರಾಜ್ಯದ ಅತ್ಯಂತ ಮಹಾನ್ ರಾಜ ಯಾರು?

    ಉತ್ತರ: ರಾಜರಾಜ ಚೋಳ ಪ್ರಥಮ

    ಗಂಗೈಕೊಂಡ ಚೋಳ ಎಂಬ ಬಿರುದು ಯಾರಿಗೆ?

    ಉತ್ತರ: ರಾಜೇಂದ್ರ ಚೋಳ

    ಚೋಳರ ರಾಜಚಿಹ್ನೆ ಯಾವುದು?

    ಉತ್ತರ: ಹುಲಿ

    ಚೋಳ ಕಾಲದ ಪ್ರಸಿದ್ಧ ಕವಿ ಯಾರು?

    ಉತ್ತರ: ಕಂಬನ್

    ಚೋಳರು ಯಾವ ಕಲೆಗೆ ಪ್ರಸಿದ್ಧರು?

    ಉತ್ತರ: ಕಂಚಿನ ವಿಗ್ರಹಗಳು

    (ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
    (ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)VVV(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)V(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)V(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ))

    2 thoughts on “ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ”

    Leave a Comment